Asianet Suvarna News Asianet Suvarna News

Mekedatu Project: ಜೆಡಿಎಸ್‌ ಪಾದಯಾತ್ರೆ ಕಾಂಗ್ರೆಸ್‌ನಿಂದ ಹೈಜಾಕ್‌: HDK

*   ಪಾದ​ಯಾತ್ರೆ ಆರಂಭ​ವಾ​ಗಿದ್ದೇ ದೇವೇ​ಗೌ​ಡ​ರಿಂದ
*   ಮೇಕೆ​ದಾಟು ವಿಚಾ​ರ​ದಲ್ಲಿ ಜೆಡಿಎಸ್‌ ಪಕ್ಷದಿಂದಲೂ ಹೋರಾಟ 
*   ಜನರನ್ನು ಮರಳು ಮಾಡಲು ಕಾಂಗ್ರೆಸ್‌ ನಾಯಕರ ಪಾದ​ಯಾತ್ರೆ 
 

JDS Padayatra Hijack From Congress Says HD Kumaraswamy grg
Author
Bengaluru, First Published Dec 24, 2021, 5:58 AM IST

ರಾಮ​ನ​ಗ​ರ(ಡಿ.24):  ಮೇಕೆದಾಟು(Mekedatu) ಯೋಜನೆ ವಿಚಾರವಾಗಿ ಕಾಂಗ್ರೆಸ್‌ ಪಕ್ಷ ಪಾದಯಾತ್ರೆ(Padayatra) ಹಮ್ಮಿಕೊಂಡು ಹೈಜಾಕ್‌ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ(HD Kumaraswamy) ದೂರಿದ್ದಾರೆ.  ತಾಲೂ​ಕಿನ ಬಿಡ​ದಿ​ಯಲ್ಲಿ ಪುರ​ಸಭಾ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಜೆಡಿ​ಎಸ್‌(JDS) ಅಭ್ಯ​ರ್ಥಿ​ಗಳ ಪರ ಗುರುವಾರ ರೋಡ್‌ ಶೋ ಮೂಲಕ ಪ್ರಚಾರ ನಡೆಸುವ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತನಾಡಿ, ಪಾದ​ಯಾತ್ರೆ ಆರಂಭ​ವಾ​ಗಿದ್ದೇ ದೇವೇ​ಗೌ​ಡ​ರಿಂದ. ಮೇಕೆ​ದಾಟು ವಿಚಾ​ರ​ದಲ್ಲಿ ಜೆಡಿಎಸ್‌ ಪಕ್ಷವೂ ಹೋರಾಟ ಮಾಡುತ್ತಿದೆ. ರಾಜ್ಯ​ಪಾ​ಲರು ಮತ್ತು ಮುಖ್ಯ​ಮಂತ್ರಿ​ಗ​ಳಿಗೂ ಮನವಿ ಕೊಟ್ಟಿದೆ ಎಂದರು.

2013ರಲ್ಲಿ ಕೃಷ್ಣೆಯ ಕಡೆಗೆ ಕಾಂಗ್ರೆಸ್‌(Congress) ನಡಿಗೆ ಎಂದು ಪಾದ​ಯಾತ್ರೆ ಮಾಡಿ​ದ್ದರು. ಕೃಷ್ಣಾ​ನದಿ ಯೋಜ​ನೆಗೆ(Krishna River Project) ವರ್ಷಕ್ಕೆ 10 ಸಾವಿರ ಕೋಡ್ತೀವಿ ಅಂತ ಹೇಳಿ​ದ್ದರು. ಆದರೆ, 5 ವರ್ಷ​ದಲ್ಲಿ ಕೊಟ್ಟಿದ್ದು ಕೇವಲ 8 ಸಾವಿರ. ಆದರೆ, ಹನಿ​ ನೀರು ರೈತರ ಜಮೀ​ನಿಗೆ ಹರಿ​ಯ​ಲಿಲ್ಲ. ಕೃಷ್ಣಾ ನದಿ ಯೋಜ​ನೆಗೆ ಸಂಬಂಧಿ​ಸಿ​ದಂತೆ ಮೈನ್‌ ಕೆನಾಲ್‌ ನಿರ್ಮಿ​ಸಿ​ದ್ದಾರೆ. ಆದರೆ, ಡಿಸ್ಟ್ರಿ​ಬ್ಯೂ​ಷನ್‌ ಕೆನಾಲ್‌ ನಿರ್ಮಿ​ಸಿಲ್ಲ. ಇವರು ಗುತ್ತಿ​ಗೆ​ದಾ​ರ ಜೊತೆ ಸೇರಿ ದುಡ್ಡು ಹಂಚಿ​ಕೊಂಡರು. ಇದು ಸಾಧನೆಯೇ ಎಂದು ಟೀಕಿಸಿದರು.

Congress Padayatra: ಕಾಂಗ್ರೆಸ್‌ನಿಂದ ಪಾದಯಾತ್ರೆ, ಡಿಕೆಶಿ ಪ್ರಕಟಣೆ

ಜನರನ್ನು ಮರಳು ಮಾಡಲು ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್‌ ನಾಯಕರು ಪಾದ​ಯಾತ್ರೆ ಹೊರ​ಟಿ​ದ್ದಾರೆ. ಜೆಡಿಎಸ್‌ ಕೊಟ್ಟ ನೀರಾ​ವರಿ ಯೋಜ​ನೆ​ಗ​ಳಿಗೂ ಕಾಂಗ್ರೆಸ್‌ನ ಬೂಟಾಟಿಕೆಗೂ ಬಹಳ ವ್ಯತ್ಯಾಸವಿದೆ. ಕಾಂಗ್ರೆಸ್‌ನವರು ಈಗ ಹೈಜಾಕ್‌ ಮಾಡಿ​ ತರಾ​ತು​ರಿ​ಯಲ್ಲಿ ಪಾದ​ಯಾತ್ರೆ ಹಮ್ಮಿ​ಕೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಮೇಕೆ​ದಾಟು ಯೋಜನೆ ಸಾಧ್ಯ​ವಿಲ್ಲ. ಅದು ಜನತಾ ದಳದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕೇಂದ್ರದಿಂದ ಮಲತಾಯಿ ಧೋರಣೆ: ಎಚ್‌ಡಿಕೆ

ಬೆಳಗಾವಿ(Belagavi):  ನೆರೆ ರಾಜ್ಯಗಳಲ್ಲಿ ವೇಗ ನಡೆಯುವಷ್ಟು ನೀರಾವರಿ ಯೋಜನೆಗಳು(Irrigation Projects) ನಮ್ಮಲ್ಲಿ ನಡೆಯುವುದಿಲ್ಲ. ಅವರಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರವೂ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ(North Karnataka) ಸಮಸ್ಯೆಗಳ ಮೇಲಿನ ಚರ್ಚೆಯಲ್ಲಿ ಮಾತನಾಡಿದ್ದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸರ್ಕಾರ ಈವರೆಗೂ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸುತ್ತಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ(BJP Government) ಇದ್ದರೂ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಕೇಂದ್ರ ಸರ್ಕಾರ(Central Government) ಮನಸು ಮಾಡಿದರೆ ಎರಡು ನಿಮಿಷದ ಕೆಲಸವದು ಎಂದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ: ಚರ್ಚೆಯಾಗಲಿಲ್ಲ ಮೇಕೆದಾಟು ಯೋಜನೆ

ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದ ಅವರು, ದೇವೇಗೌಡ(HD Devegowda) ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ಆಗಿರುವ ಕೆಲಸಗಳು ನಮಗೆ ಮಾರ್ಗದರ್ಶನದಂತೆ. ಆಗ ಭೂ ಸ್ವಾಧೀನ ಯಾವ ರೀತಿ ಮಾಡಿದರು. ಈಗ 11 ವರ್ಷವಾದರೂ ಬರೀ 22 ಸಾವಿರ ಎಕರೆ ಮಾತ್ರ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆಗಿನ ಮಾದರಿಯಂತೆ ಈಗಲೂ ಭೂಸ್ವಾಧೀನಕ್ಕೆ ಒತ್ತು ನೀಡಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದೇ ರೀತಿ ಉಳಿದ ನೀರಾವರಿ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಕಾಂಗ್ರೆಸ್‌ ಕಾಲೆಳೆದ ಎಚ್‌ಡಿಕೆ:

ಹಿಂದೆ ಕೃಷ್ಣೆಯ ಕಡೆಗೆ ಕಾಂಗ್ರೆಸ್‌ ನಡಿಗೆ ಎಂದು ಪಾದಯಾತ್ರೆ ನಡೆಸಿತ್ತು. ಆದರೆ ಹೇಳಿದಂತೆ ನಡೆದುಕೊಳ್ಳಲಿಲ್ಲ. 2013ರಿಂದ 2018ರವರೆಗೆ 8 ಸಾವಿರ ಕೋಟಿ ಖರ್ಚು ಮಾಡಿತು. ಆದರೆ ಬರೀ ಮುಖ್ಯಕಾಲುವೆಗಳ ಕಾಮಗಾರಿ ನಡೆಸಿತು. ವಿತರಣಾ ಕಾಲುವೆ ಕಾಮಗಾರಿ ಮಾಡಲೇ ಇಲ್ಲ. ಇದು ರೈತರಿಗೆ ಏನು ಉತ್ತರ ನೀಡಬೇಕು. ಈಗ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಲು ಸಿದ್ಧವಾಗಿದೆ ಎಂದು ಕಾಂಗ್ರೆಸ್‌ ಮುಖಂಡರನ್ನು ಕಾಲೆಳೆದರು.
 

Follow Us:
Download App:
  • android
  • ios