Asianet Suvarna News Asianet Suvarna News

ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಆಮ್‌ ಆದ್ಮಿ ಹಾಗೂ ಮತ್ತಿತರೆ ಪಕ್ಷಗಳಿಂದ ನೂರಾರು ಕಾರ್ಯಕರ್ತರು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

hundreds Of Other Party members joins  BJP in Vijayapura snr
Author
First Published Oct 6, 2022, 5:46 AM IST

 ವಿಜಯಪುರ( ಅ.06): ಆಮ್‌ ಆದ್ಮಿ ಹಾಗೂ ಮತ್ತಿತರೆ ಪಕ್ಷಗಳಿಂದ ನೂರಾರು ಕಾರ್ಯಕರ್ತರು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ವಿಜಯಪುರದ - ಕೋಲಾರ (Kolar) ರಸ್ತೆ ನಾಗರಾಜ್‌ ಟಿಂಬರ್‌ ಕೇಂದ್ರದ ಬಳಿ ಕಾರ‍್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಲಾಲ್‌ ಬಹದ್ದೂರ್‌ ಶಾಸ್ತ್ರೀ ಹೆಸರು ಅಜರಾಮರ. ಅದೇ ರೀತಿ ಶಾಸ್ತ್ರಿ ಅವರಿಗೆ ಸರಿಸಾಟಿಯಾದವರು ಇದ್ದರೆ ಅವರು ನರೇಂದ್ರ ಮೋದಿ ಮಾತ್ರ ಎಂದು ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ (Election)  ದೇವನಹಳ್ಳಿ ತಾಲೂಕಿನಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಯಾವುದೇ ಕಾರಣಕ್ಕೂ ವಲಸೆ ಹಾಗೂ ಮೂಲ ಬಿಜೆಪಿ (BJP) ಕಾರ್ಯಕರ್ತರೆಂದು ತಾರತಮ್ಯವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕೆಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.

ಎಸ್‌ಎಲ್‌ಎನ್‌ ಅಶ್ವತ್‌ನಾರಾಯಣ್‌ ಮಾತನಾಡಿ, ನಮ್ಮ ಪಕ್ಷದಲ್ಲಿರುವ ಇಬ್ಬರು ಮಾಜಿ ಶಾಸಕರು ಪ್ರಾಮಾಣಿಕರೂ, ಜನಪ್ರಿಯರಾಗಿದ್ದು ಪ್ರತಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಬಿಜೆಪಿ ತತ್ವ ಸಿದ್ಧಾಂತ, ಕೇಂದ್ರ,ರಾಜ್ಯದಲ್ಲಿ ಬಿಜೆಪಿಯ ಜನಪರ ಯೋಜನೆಗಳನ್ನು ನೆಚ್ಚಿ ಇತರೆ ಪಕ್ಷಗಳ ಕಾರ‍್ಯಕರ್ತರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು, ಪಕ್ಷದ ಬಲವರ್ಧನೆಗೆ ಪೂರಕ ವಾತಾವರಣ ಕಲ್ಪಿಸಿದೆ ಎಂದರು.

ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಖಜಾಂಚಿ ಎಕೆಪಿ ನಾಗೇಶ್‌, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಕಾರ್ಯದರ್ಶಿ ಕನಕರಾಜು, ತಾಲೂಕು ಅಧ್ಯಕ್ಷ ಸುನೀಲ್‌ ಸುಂದರೇಶ್‌, ಟೌನ್‌ ಅಧ್ಯಕ್ಷ ಆರ್‌.ಸಿ.ಮಂಜುನಾಥ್‌, ಪುರಸಭಾ ಸದಸ್ಯೆ ಶಿಲ್ಪಾ ಅಜಿತ್‌, ರಾಮಕೃಷ್ಣ ಹೆಗಡೆ, ರಾಮು ಭಗವಾನ್‌, ಪ್ರಭು, ಸುಬ್ಬಣ್ಣ, ಅಶ್ವತ್ಥಪ್ಪ, ಜಗದೀಶ್‌, ನಾಗರಾಜ್‌, ರಂಗಣ್ಣ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರವಿಕುಮಾರ್‌, ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಅಧ್ಯಕ್ಷ ಅಂಬರೀಶ್‌ ಗೌಡ, ಮಹಿಳಾ ಘಟಕದ ಪುನೀತಾ, ನಾಗವೇಣಿ, ಪ್ರಮೀಳಾ ಇತರರಿದ್ದರು.

ಗುಜರಾತಲ್ಲಿ ಮತ್ತೆ ಬಿಜೆಪಿ ಗೆಲುವು : 

 

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಎಬಿಪಿ ನ್ಯೂಸ್‌-ಸಿ ವೋಟರ್‌ ಸಮೀಕ್ಷೆ ಭವಿಷ್ಯ ನುಡಿದಿದೆ. ಗುಜರಾತ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌ರ ಆಪ್‌ ಈ ಸಲ ಕಣ ಪ್ರವೇಶಿಸಿರುವ ಕಾರಣ ತ್ರಿಕೋನ ಸಮರ ಏರ್ಪಟ್ಟಿದೆ. ‘ಗುಪ್ತಚರ ವರದಿ ಪ್ರಕಾರ ಗುಜರಾತಲ್ಲಿ ಗೆಲುವು ನಮ್ಮದೇ’ ಎಂದು ಕೇಜ್ರಿವಾಲ್‌ ಕೂಡ ಹೇಳಿಕೊಂಡಿದ್ದಾರೆ. ಇಂಥದ್ದರ ನಡುವೆಯೇ ಈ ಸಮೀಕ್ಷೆ ಬಂದಿರುವುದು ಗಮನಾರ್ಹವಾಗಿದೆ.

ಗುಜರಾತಲ್ಲಿ ಸತತ 7ನೇ ಸಲ ಕಮಲ:

ಗುಜರಾತ್‌ನಲ್ಲಿ ಕಳೆದ ಸಲ 99 ಸ್ಥಾನ ಗೆದ್ದಿದ್ದ ಬಿಜೆಪಿ ಈ ಸಲ ಭಾರಿ ಬಹುಮತ ಗಳಿಸಲಿದ್ದು 135ರಿಂದ 143 ಸ್ಥಾನ ಸಂಪಾದಿಸಲಿದೆ. ಕಾಂಗ್ರೆಸ್‌ 36ರಿಂದ 44, ಆಪ್‌ ಕೇವಲ 0-2 ಹಾಗೂ ಇತರರು 0-3 ಸ್ಥಾನ ಗಳಿಸಲಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ. ಗುಜರಾತ್‌ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿವೆ. ಬಹುಮತಕ್ಕೆ 92 ಸ್ಥಾನಗಳು ಬೇಕು. ರಾಜ್ಯದಲ್ಲಿ 1998ರಿಂದ ಬಿಜೆಪಿ ಅಧಿಕಾರದಲ್ಲಿದೆ. ಈಗ ಗೆದ್ದರೆ ಸತತ 7ನೇ ಸಲ ಗೆದ್ದಂತಾಗುತ್ತದೆ.

Gujarat Elections: ಎಎಪಿ ಸರ್ಕಾರ ರಚನೆ ಎಂದು ಐಬಿ ವರದಿ; ವರದಿಯಿಂದ ಬಿಜೆಪಿಗೆ ನಡುಕ ಎಂದ ಕೇಜ್ರಿವಾಲ್‌

ಹಿಮಾಚಲದಲ್ಲೂ ಬಿಜೆಪಿ:

ಇನ್ನು ಹಿಮಾಚಲ ಪ್ರದೇಶದಲ್ಲಿ ಕೂಡ ಬಿಜೆಪಿ ಪುನಃ ಅಧಿಕಾರಕ್ಕೆ ಬರಲಿದೆ. ಅಲ್ಲಿ ಈಗ 47 ಸ್ಥಾನ ಹೊಂದಿರುವ ಬಿಜೆಪಿ 37ರಿಂದ 45, ಕಾಂಗ್ರೆಸ್‌ 21ರಿಂದ 29, ಆಪ್‌ 0-1 ಹಾಗೂ ಇತರರು 0-3 ಸ್ಥಾನ ಗಳಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಹಿಮಾಚಲದಲ್ಲಿ 68 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 35 ಸ್ಥಾನದ ಅವಶ್ಯಕತೆ ಇದೆ. ರಾಜ್ಯದಲ್ಲಿ 2017ರಲ್ಲಿ ಕಾಂಗ್ರೆಸ್ಸನ್ನು ಪದಚ್ಯುತಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.

ವರ್ಷಾಂತ್ಯಕ್ಕೆ ಚುನಾವಣೆ:

ಹಿಮಾಚಲ ಹಾಗೂ ಗುಜರಾತ್‌ ವಿಧಾನಸಭೆಯ ಅವಧಿ 2023ರ ಜ.8ರಂದು ಮುಗಿಯಲಿವೆ. ಹೀಗಾಗಿ 3 ತಿಂಗಳು ಮಾತ್ರ ಬಾಕಿ ಇದ್ದು, ಇನ್ನೇನು ಕೆಲವು ದಿನಗಳಲ್ಲಿ ಚುನಾವಣೆ ಘೋಷಣೆ ಆಗುವ ಹಾಗೂ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ.

ಆಪ್‌ ಗೆಲ್ಲಲಿದೆ ಅಂತ ಗುಪ್ತದಳ ಹೇಳಿದೆ: ಕೇಜ್ರಿ

ಅಹಮದಾಬಾದ್‌: ಗುಜರಾತ್‌ನಲ್ಲಿ ಈಗ ವಿಧಾನಸಭೆ ಚುನಾವಣೆ ನಡೆದರೆ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ. ಆದರೆ ಗೆಲುವಿನ ಅಂತರ ಕಡಿಮೆ ಇರುತ್ತದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ. 

Follow Us:
Download App:
  • android
  • ios