Asianet Suvarna News Asianet Suvarna News

ಮಂಡ್ಯ ಜನತೆಗೆ ಭರ್ಜರಿ ಸಿಹಿಸುದ್ದಿ: ಕುಡಿಯುವ ನೀರಿನ ದರ ತಗ್ಗಿಸಿದ ರಾಜ್ಯ ಸರ್ಕಾರ

ಮಂಡ್ಯ ನಗರದ ಜನತೆಗೆ ಕಾವೇರಿ ಕುಡಿಯುವ ನೀರಿನ ದರವನ್ನು ಹೆಚ್ಚಳ ಮಾಡಿ ಶಾಕ್ ನೀಡಿದ್ದ ಸರ್ಕಾರ, ಈಗ ನೀರಿನ ದರವನ್ನು ಮಾಸಿಕ 225 ರೂ.ಗೆ ತಗ್ಗಿಸಿ ಸಿಹಿ ಸುದ್ದಿ ನೀಡಿದೆ. 

Good news for Mandya people government has reduced the rate of Kaveri drinking water sat
Author
First Published Dec 7, 2023, 5:25 PM IST

ಬೆಳಗಾವಿ (ಡಿ.07): ಕಳೆದ ನಾಲ್ಕೈದು ವರ್ಷಗಳಿಂದ ಭಾರಿ ಗೊಂದಲಕ್ಕೆ ಒಳಗಾಗಿದ್ದ ಮಂಡ್ಯ ನಗರದ ಕುಡಿಯುವ ನೀರಿನ ಪುರೈಕೆ ದರದ ಸಮಸ್ಯೆಯನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಬಗೆಹರಿಸಲಾಗಿದೆ. ಮಂಡ್ಯದ ಜನತೆಗೆ ಕಾವೇರಿ ನದಿಯಿಂದ ಶುದ್ಧ ಕುರಿಯುವ ನೀರಿನ ಪೂರೈಕೆಗೆ ಸಾರ್ವಜನಿಕರು ಮಾಸಿಕ 225 ರೂ. ದರ ಪಾವತಿಸುವಂತೆ ದರ ನಿಗದಿ ಮಾಡಲಾಗಿದೆ. 

ಬೆಳಗಾವಿಯ ಸುವರ್ಣ ಸೌಧದ ಸಮಿತಿ ಕೊಠಡಿಯಲ್ಲಿ ಮಂಡ್ಯ  ನಗರದ ನೀರು ಸರಬರಾಜಿನ ದರ ಹಾಗೂ ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ  ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶೇಷ ಸಭೆ ನಡೆಸಿದ  ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ  ಅವರು ನೀರಿ ದರ ಅಂತಿಮ ಗೊಳಿಸಿದರು. ಮಂಡ್ಯ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಪೂರೈಕೆ  ದರ ನಿಗದಿಯಲ್ಲಿ ಸಮಸ್ಯೆ ಇದೆ. ಈ ಹಿಂದೆ ಜಿಲ್ಲಾಧಿಕಾರಿಗಳ  ಸಮಿತಿಯಲ್ಲಿ 2018ರಿಂದ ಅನ್ವಯವಾಗುವಂತೆ 282 ರೂ. ದರ ನಿಗದಿ ಪಡಿಸಲಾಗಿದೆ. ಆದರೆ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದರ ಕಡಿಮೆ ಮಾಡಲು ಸೂಚಿಸಿದ್ದರು. ಅದರಂತೆ 225 ರೂ. ನಿಗದಿಪಡಿಸುಲು ಕೃಷಿ ಸಚಿವ ಚಲುವರಾಯಸ್ವಾಮಿ ಸೂಚಿಸಿದರು.

ನನಗೆ ಅವಕಾಶ ಕೊಟ್ರೆ ಸಾವರ್ಕರ್ ಫೋಟೋವನ್ನು ಇವತ್ತೇ ತೆಗೀತೀನಿ: ಪ್ರಿಯಾಂಕ ಖರ್ಗೆ

ಹಿಂದಿನ ಬಾಕಿ, ಬಡ್ಡಿ ವಸೂಲಾತಿ ಮತ್ತಿತರ ವಿಷಯಗಳನ್ಮು ಉಸ್ತುವಾರಿ ಸರ್ಕಾರದ ತೀರ್ಮಾನಕ್ಕೆ ಬಿಡಲಾಗುವುದು. ಸಾರ್ವಜನಿಕರಿಂದ ಮಾಮೂಲಿ ದರದಲ್ಲಿ ಬಾಕಿ ಹಣ ಪಡೆದು  ನೀರು ಪೂರೈಸುವಂತೆ ಕೃಷಿ ಸಚಿವರು ಹೇಳಿದರು.ಈ ವೇಳೆ ಪೌರಾಡಳಿತ ಸಚಿವರಾದ ರಹೀಂ ಖಾನ್ ಹಾಗೂ ಮಂಡ್ಯ ಜಿಲ್ಲೆಯ  ಶಾಸಕರ ಉಪಸ್ಥಿತಿಯಲ್ಲಿ ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ  ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು ಮಂಡ್ಯ ನಗರ ಹಾಗೂ ಇತರ ತಾಲ್ಲೂಕುಗಳ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸೂಚಿಸಿದರು.

ಮಂಡ್ಯದಲ್ಲಿ ಅನಧಿಕೃತ ಸಂಪರ್ಕ ಪಡೆದವರಿಗೆ ನೋಟಿಸ್ ನೀಡಿ ಸೂಕ್ತ ಶುಲ್ಕ ಪಡೆದು ಸಕ್ರಮಗೊಳಿಸಬೇಕು. ನೀರಿನ ಕರ ಶೇ.100 ವಸೂಲಿ ಮಾಡಿ ಜೊತೆಗೆ ಯಾವುದೇ ಲೋಪವಿಲ್ಲದಂತೆ  ನೀರು ಪೂರೈಸಬೇಕು. ಇದೇ ವೇಳೆ ನಾಗಮಂಗಲದ ನೂತನ ವಾಣಿಜ್ಯ ಸಂಕೀರ್ಣದ ಹರಾಜು ಪ್ರಕ್ರಿಯೆ ಕುರಿತು ಚರ್ಚಿಸಿ ಈ ಹಿಂದೆ ಇದ್ದ 29 ಮಂದಿ ವರ್ತಕರಿಗೆ ನ್ಯಾಯಾಲಯದ ಸೂಚನೆ ಮೇರೆಗೆ ಹೊಸ ದರದಂತೆ  ಬಾಕಿ ಹಣ  ಪಡೆದು ಮುಂದಿನ 4  ವರ್ಷ ಅವಕಾಶ ಕಲ್ಲಿಸಬೇಕು. ಇತರ  ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸುವುದು ಮತ್ತು ಈ 29 ಮಳಿಗೆಗಳನ್ನು 4  ವರ್ಷಗಳ ನಂತರ ತೆರವುಗೊಳಿಸಿ ಹೊಸದಾಗಿ ಹರಾಜು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಭ್ರೂಣ ಹತ್ಯೆ ಕರ್ಮಕಾಂಡದ ಮತ್ತೊಂದು ಬೇಟೆ..! ಕರಾಳ ಕೂಪವನ್ನ ಬಯಲಿಗೆಳೆದಿದ್ದು ದಂಪತಿ..!

ಮಂಡ್ಯ ನಗರದ ಕೆಲವು ಪ್ರದೇಶಗಳಲ್ಲಿ ಬಾಕಿ ಇರುವ ಒಳಚರಂಡಿ ವ್ಯವಸ್ಥೆ ಪೂರ್ಣ ಗೊಳಿಸಿ ವೈಜ್ಞಾನಿಕವಾಗಿ ತ್ಯಾಜ್ಯ ನೀರಿ ವಿಲೇವಾರಿ ಮಾಡಲು ಹಾಗೂ ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣ ವೈಜ್ಞಾನಿಕವಾಗಿ ಮಾಡುವಂತೆ ಸಚಿವರಾದ ಚಲುವರಾಯಸ್ವಾಮಿರವರು ಅಧಿಕಾರಿಗಳಿಗೆ ಸೂಚಿಸಿದರು. ಪೌರಾಡಳಿತ ಸಚಿವರಾದ ರಹೀಂ ಖಾನ್ ಮಾತನಾಡಿ ಕೃಷಿ ಸಚಿವರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಾಭಿವೃದ್ಧಿ ಇಲಾಖೆ ಆಯುಕ್ತ ಅಜಯ್ ನಾಗಭೂಷಣ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ  ವ್ಯವಸ್ಥಾಪಕ ನಿರ್ದೇಶಕರಾದ ಶರತ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಪ್ರಭುಲಿಂಗ ಕವಲಕಟ್ಟೆ, ಮತ್ತಿತರರು ಸಭೆಯಲ್ಲಿ ಹಾಜರಿದ್ದು ಚರ್ಚೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು.

Follow Us:
Download App:
  • android
  • ios