ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಕೊರೋನಾ ಪರೀಕ್ಷೆ ಮಾಡಿಸಿದ್ದು, ಹೆದರಿ ವರದಿ ಬರುವ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ.
ಪಾಂಡವಪುರ (ಆ.26): ಕೊರೋನಾಗೆ ಹೆದರಿ ವ್ಯಕ್ತಿಯೊಬ್ಬ ನಾಲೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದ ಹಾರೋಹಳ್ಳಿಯಲ್ಲಿ ನಡೆದಿದೆ.
Add Asianetnews Kannada as a Preferred Source

ಗ್ರಾಮದ ಚಿಕ್ಕಣ್ಣ(60) ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಮೂರು ದಿನಗಳ ಹಿಂದೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಕೊರೋನಾ ಪರೀಕ್ಷೆಗೊಳಪಟ್ಟಿದ್ದು, ಸೋಮವಾರ ಫಲಿತಾಂಶ ಬರುವುದಿತ್ತು. ಅಲ್ಲದೇ ಚಿಕ್ಕಣ್ಣ ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿದ್ದರು.
ರಾಜ್ಯದಲ್ಲಿ ದಿನಕ್ಕೆ 1 ಲಕ್ಷ ಕೋವಿಡ್ ಪರೀಕ್ಷೆ ನಡೆಸಲು ಶಿಫಾರಸು...
ಆದರೆ, ನನಗೆ ಕೊರೋನಾ ಸೋಂಕು ತಗಲಿರಬಹುದು ಎಂಬ ಭಯದಿಂದ ಚಿಕ್ಕಣ್ಣ ವರದಿ ಬರುವುದಕ್ಕೂ ಮುನ್ನವೇ ಗ್ರಾಮದ ವಿಶ್ವೇಶ್ವರಯ್ಯನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದೇ ದಿನ 8 ಸಾವಿರ ದಾಟಿದ ಪಾಸಿಟಿವ್ ಕೇಸ್ : ಸಾವಲ್ಲೂ ದಾಖಲೆ...
ವರದಿ ಬರುವ ಮುನ್ನವೇ ಕೊರೋನಾಘೆ ಹೆದರಿ ಅನೇಕರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದು, ಮಂಡ್ಯದ ಈ ವೃದ್ಧ ಆತ್ಮಹತ್ಯೆಗೆ ಶರಣಾಗಿದ್ದಾನೆ.
