Asianet Suvarna News Asianet Suvarna News

ವಿಷ ಪ್ರಸಾದ ದುರಂತ: ವಿಷಜಂತುಗಳಿಗೆ 4 ದಿನ ಪೊಲೀಸ್ ಫುಲ್ ಡ್ರಿಲ್..!

ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಆರೋಪಿಗಳಿಗೆ 4 ದಿನ ಪೊಲೀಸ್ ಕಸ್ಟಡಿಗೆ.! ನಾಲ್ವರು ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಿ ಜಡ್ಜ್ ಆದೇಶ

Chamarajanagar Temple Tragedy  4 accused  Remanded in police custody
Author
Bengaluru, First Published Dec 19, 2018, 10:35 PM IST

ಚಾಮರಾಜನಗರ, [ಡಿ.19] : ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ತಗೆದುಕೊಳ್ಳುವಂತೆ ಕೋರ್ಟ್​ ಆದೇಶಿದೆ. 

ಪ್ರಕರಣ ಸಂಬಂಧ ಕೊಳ್ಳೇಗಾಲ ಪೊಲೀಸರು ಆರೋಪಿಗಳಾದ ಮಹದೇವ ಸ್ವಾಮಿಜಿ, ಅಂಬಿಕಾ, ಮಾದೇಶ್​, ದೊಡ್ಡಯ್ಯರನ್ನು ಇಂದು [ಬುಧವಾರ] ಜಿಲ್ಲೆಯ ಹೆಚ್ಚುವರಿ ಸಿವಿಲ್  ನ್ಯಾಯಾಧೀಶ ಶ್ರೀಕಾಂತ್​ ಅವರ ಮುಂದೆ ಹಾಜರು ಪಡಿಸಲಾಗಿತ್ತು. 

ಚಾಮರಾಜನಗರ: ವಿಷಪ್ರಾಶನದ ಹಿಂದಿತ್ತು ಕಾವಿಯ ಕಾಮದ ಕೈವಾಡ..!

ಎಂಎಲ್ ರಸ್ತೆಯಲ್ಲಿರುವ ನ್ಯಾಯಾಧೀಶ ಶ್ರೀಕಾಂತ್ ಅವರ ನಿವಾಸದಲ್ಲಿ ವಿಚಾರಣೆ ನಡೆದಿದ್ದು, ಹೆಚ್ಚಿನ ವಿಚಾರಣೆಗೆ ನಾಲ್ವರು ಆರೋಪಿಗಳನ್ನು 4 ದಿನ ಪೊಲೀಸರ ಕಸ್ಟಡಿಗೆ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. 

ಆರೋಪಿಗಳು
ಒಂದನೇ ಆರೋಪಿ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ (52)  
ಎರಡನೇ ಆರೋಪಿ ದೇವಸ್ಥಾನದ ಮ್ಯಾನೇಜರ್ ಪತ್ನಿ ಅಂಬಿಕಾ (35)  
ಮೂರನೇ ಆರೋಪಿ ದೇವಸ್ಥಾನದ ಮ್ಯಾನೇಜರ್ ಮಾದೇಶ್ (46)  
ನಾಲ್ಕನೇ ಆರೋಪಿ ನಾಗರಕಲ್ಲು ಅರ್ಚಕರಾದ ದೊಡ್ಡಯ್ಯ ತಂಬಡಿ (35)  

Follow Us:
Download App:
  • android
  • ios