Asianet Suvarna News Asianet Suvarna News

ಯೋಗೇಶ್‌ ಗೌಡ ಮರ್ಡರ್‌ ಕೇಸ್‌: ನನ್ನ ಜೀವಕ್ಕೆ ಅಪಾಯವಿದೆ, ಬಸವರಾಜ ಮುತ್ತಗಿ ಅಳಲು

* ಯೋಗೇಶ್‌ ಗೌಡ ಹತ್ಯೆ ಆರೋಪಿ ಮುತ್ತಗಿ
* ವಿನಯ್‌ ಕುಲಕರ್ಣಿ ಮಾಜಿ ಪಿಎ 14 ದಿನ ನ್ಯಾಯಾಂಗ ವಶಕ್ಕೆ
* ಯಾರ ರಾಜ​ಕೀಯ ಉದ್ದೇ​ಶಕ್ಕೆ ಯೋಗೇಶ್‌ ಗೌಡ ಕೊಲೆ​ಯಾ​ಗಿದೆ ಎಂದು ಸಿಬಿಐ ತನಿ​ಖೆ​ಯಲ್ಲಿ ಬಹಿ​ರಂಗ 

Accused Basavaraj Muttagi Talks Over Yogeesh Gouda Murder Case grg
Author
Bengaluru, First Published Jul 10, 2021, 7:55 AM IST

ಧಾರ​ವಾಡ(ಜು.10): ಯೋಗೇಶ್‌ ಗೌಡ ಗೌಡರ ಕೊಲೆ ಪ್ರಕ​ರ​ಣ​ದಲ್ಲಿ ನನ್ನ ಜೀವಕ್ಕೂ ಅಪಾಯಗಳಾ​ಗುವ ಲಕ್ಷ​ಣ​ಗಳು ಕಾಣಿ​ಸು​ತ್ತಿವೆ. ಅಂದ ಮಾತ್ರಕ್ಕೆ ನಾನು ಭಯ ಪಡು​ವು​ದಿಲ್ಲ. ಸತ್ಯದ ಪರ​ವಾಗಿ ಇರು​ತ್ತೇ​ನೆ. ಯಾವ​ತ್ತಾ​ದರೂ ಒಂದು ದಿನ ಜೀವ ಹೋದರೆ ಹೋಗಲಿ ಎಂದು ಪ್ರಕ​ರ​ಣದ ಮೊದಲ ಆರೋಪಿ ಬಸ​ವ​ರಾಜ ಮುತ್ತಗಿ ಹೇಳಿ​ದ್ದಾರೆ.

ಸಿಬಿಐ ವಿಚಾರಣೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ ಕುಲ​ಕರ್ಣಿ ಬಗ್ಗೆ ನನಗೆ ಭಯವಿಲ್ಲ. ಪ್ರೀತಿ ಅಥವಾ ದ್ವೇಷವೂ ಇಲ್ಲ. ಇವ​ತ್ತಿ​ನಿಂದ ಸತ್ಯದ ಪರ​ವಾಗಿ ಹೋರಾಟ ಮಾಡು​ತ್ತೇನೆ. ಯಾರ ರಾಜ​ಕೀಯ ಉದ್ದೇ​ಶಕ್ಕೆ ಯೋಗೇಶ್‌ ಗೌಡ  ಕೊಲೆ​ಯಾ​ಗಿದೆ ಎಂದು ಸಿಬಿಐ ತನಿ​ಖೆ​ಯಲ್ಲಿ ಬಹಿ​ರಂಗ ಆಗಿದ್ದು, ನನ್ನ ನಂಬಿರುವ ಹುಡು​ಗರ ಸಲು​ವಾಗಿ ಸಿಬಿಐ ಎದುರು ಹೊಸ ವಿಷ​ಯ​ಗ​ಳನ್ನು ಹೇಳ​ಲಿ​ದ್ದೇನೆ. ಅದನ್ನೇ ನ್ಯಾಯಾಲಯ​ದಲ್ಲೂ ಹೇಳು​ತ್ತೇನೆ. ನಾನು ವಿನಯ್‌ ಪರ ಅಥವಾ ವಿರುದ್ಧ ಮಾತಾಡುತ್ತಿಲ್ಲ ಎಂದರು.

ಯೋಗೀಶಗೌಡ ಹತ್ಯೆ ಕೇಸ್‌, ಒಂದು ದಿನ ಕಾಯಿರಿ ಎಂದ ಮುತ್ತಗಿ

ವಿನಯ್‌ ಕುಲಕರ್ಣಿ ಮಾಜಿ ಪಿಎ 14 ದಿನ ನ್ಯಾಯಾಂಗ ವಶಕ್ಕೆ

ಜಿಪಂ ಸದಸ್ಯ ಯೋಗೇಶ್‌ ಗೌಡ ಗೌಡರ ಕೊಲೆಗೆ ಸಂಬಂಧಿ​ಸಿ ಗುರು​ವಾರ ಬಂಧ​ನಕ್ಕೆ ಒಳ​ಗಾದ ಗದಗ ಎಪಿಎಂಸಿ ಕಾರ್ಯದರ್ಶಿ, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮಾಜಿ ಪಿಎ, ಕೆಎಎಸ್‌ ಅಧಿಕಾರಿ ಸೋಮು​ಗೌಡ ನ್ಯಾಮ​ಗೌಡ ಅವರ ವಿಚಾ​ರಣೆಯನ್ನು ಸಿಬಿಐ ಪೂರ್ಣ​ಗೊ​ಳಿ​ಸಿದ್ದು, ನ್ಯಾಯಾಲಯ ಅವರನ್ನು 14 ದಿನ ನ್ಯಾಯಾಂಗ ವಶಕ್ಕೆ ನೀಡಿದೆ.

Follow Us:
Download App:
  • android
  • ios