ಯೋಗೇಶ್ ಗೌಡ ಮರ್ಡರ್ ಕೇಸ್: ನನ್ನ ಜೀವಕ್ಕೆ ಅಪಾಯವಿದೆ, ಬಸವರಾಜ ಮುತ್ತಗಿ ಅಳಲು
* ಯೋಗೇಶ್ ಗೌಡ ಹತ್ಯೆ ಆರೋಪಿ ಮುತ್ತಗಿ
* ವಿನಯ್ ಕುಲಕರ್ಣಿ ಮಾಜಿ ಪಿಎ 14 ದಿನ ನ್ಯಾಯಾಂಗ ವಶಕ್ಕೆ
* ಯಾರ ರಾಜಕೀಯ ಉದ್ದೇಶಕ್ಕೆ ಯೋಗೇಶ್ ಗೌಡ ಕೊಲೆಯಾಗಿದೆ ಎಂದು ಸಿಬಿಐ ತನಿಖೆಯಲ್ಲಿ ಬಹಿರಂಗ
ಧಾರವಾಡ(ಜು.10): ಯೋಗೇಶ್ ಗೌಡ ಗೌಡರ ಕೊಲೆ ಪ್ರಕರಣದಲ್ಲಿ ನನ್ನ ಜೀವಕ್ಕೂ ಅಪಾಯಗಳಾಗುವ ಲಕ್ಷಣಗಳು ಕಾಣಿಸುತ್ತಿವೆ. ಅಂದ ಮಾತ್ರಕ್ಕೆ ನಾನು ಭಯ ಪಡುವುದಿಲ್ಲ. ಸತ್ಯದ ಪರವಾಗಿ ಇರುತ್ತೇನೆ. ಯಾವತ್ತಾದರೂ ಒಂದು ದಿನ ಜೀವ ಹೋದರೆ ಹೋಗಲಿ ಎಂದು ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿ ಹೇಳಿದ್ದಾರೆ.
ಸಿಬಿಐ ವಿಚಾರಣೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ ಕುಲಕರ್ಣಿ ಬಗ್ಗೆ ನನಗೆ ಭಯವಿಲ್ಲ. ಪ್ರೀತಿ ಅಥವಾ ದ್ವೇಷವೂ ಇಲ್ಲ. ಇವತ್ತಿನಿಂದ ಸತ್ಯದ ಪರವಾಗಿ ಹೋರಾಟ ಮಾಡುತ್ತೇನೆ. ಯಾರ ರಾಜಕೀಯ ಉದ್ದೇಶಕ್ಕೆ ಯೋಗೇಶ್ ಗೌಡ ಕೊಲೆಯಾಗಿದೆ ಎಂದು ಸಿಬಿಐ ತನಿಖೆಯಲ್ಲಿ ಬಹಿರಂಗ ಆಗಿದ್ದು, ನನ್ನ ನಂಬಿರುವ ಹುಡುಗರ ಸಲುವಾಗಿ ಸಿಬಿಐ ಎದುರು ಹೊಸ ವಿಷಯಗಳನ್ನು ಹೇಳಲಿದ್ದೇನೆ. ಅದನ್ನೇ ನ್ಯಾಯಾಲಯದಲ್ಲೂ ಹೇಳುತ್ತೇನೆ. ನಾನು ವಿನಯ್ ಪರ ಅಥವಾ ವಿರುದ್ಧ ಮಾತಾಡುತ್ತಿಲ್ಲ ಎಂದರು.
ಯೋಗೀಶಗೌಡ ಹತ್ಯೆ ಕೇಸ್, ಒಂದು ದಿನ ಕಾಯಿರಿ ಎಂದ ಮುತ್ತಗಿ
ವಿನಯ್ ಕುಲಕರ್ಣಿ ಮಾಜಿ ಪಿಎ 14 ದಿನ ನ್ಯಾಯಾಂಗ ವಶಕ್ಕೆ
ಜಿಪಂ ಸದಸ್ಯ ಯೋಗೇಶ್ ಗೌಡ ಗೌಡರ ಕೊಲೆಗೆ ಸಂಬಂಧಿಸಿ ಗುರುವಾರ ಬಂಧನಕ್ಕೆ ಒಳಗಾದ ಗದಗ ಎಪಿಎಂಸಿ ಕಾರ್ಯದರ್ಶಿ, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮಾಜಿ ಪಿಎ, ಕೆಎಎಸ್ ಅಧಿಕಾರಿ ಸೋಮುಗೌಡ ನ್ಯಾಮಗೌಡ ಅವರ ವಿಚಾರಣೆಯನ್ನು ಸಿಬಿಐ ಪೂರ್ಣಗೊಳಿಸಿದ್ದು, ನ್ಯಾಯಾಲಯ ಅವರನ್ನು 14 ದಿನ ನ್ಯಾಯಾಂಗ ವಶಕ್ಕೆ ನೀಡಿದೆ.