ಯೋಗೀಶಗೌಡ ಹತ್ಯೆ ಕೇಸ್, ಒಂದು ದಿನ ಕಾಯಿರಿ ಎಂದ ಮುತ್ತಗಿ
* ಮಾಧ್ಯಮಗಳ ಜೊತೆ ಬಹಳಷ್ಟು ಚರ್ಚೆ ಮಾಡುವುದಿದೆ
* ಪ್ರಕರಣ ವಿಚಾರಣಾ ಹಂತದಲ್ಲಿದೆ. ನಮ್ಮ ವಕೀಲರ ಜೊತೆ ಮಾತನಾಡುವೆ
* ಯೋಗೀಶಗೌಡ ಹತ್ಯೆ ಪ್ರಕರಣ
ಧಾರವಾಡ(ಜು.09): ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ ಮುತ್ತಗಿ ಸಿಬಿಐ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ದಯವಿಟ್ಟು ಒಂದು ದಿನ ಕಾಯಿರಿ. ಈ ವಿಷಯವಾಗಿ ಬಹಳಷ್ಟು ಚರ್ಚೆ ಮಾಡುವುದಿದೆ. ಮಾಧ್ಯಮಗಳ ಜೊತೆ ಚರ್ಚೆ ಮಾಡುವುದಿದೆ. ಹೀಗಾಗಿ ಒಂದು ದಿನ ಕಾಯಿರಿ ಎಂದು ತಿಳಿಸಿದ್ದಾರೆ.
ಯೋಗೇಶ್ ಗೌಡ ಕೇಸ್: KAS ಅಧಿಕಾರಿ ಸೋಮು ನ್ಯಾಮಗೌಡ 1 ದಿನ ಸಿಬಿಐ ವಶಕ್ಕೆ
ನಾನೂ ಕೂಡ ಓರ್ವ ವಕೀಲ. ಈಗಾಗಲೇ ಪ್ರಕರಣ ವಿಚಾರಣಾ ಹಂತದಲ್ಲಿದೆ. ನಮ್ಮ ವಕೀಲರ ಜೊತೆ ಮಾತನಾಡುವೆ. ಬಹಳ ವಿಷಯ ಮಾಧ್ಯಮಗಳ ಜೊತೆ ಚರ್ಚೆ ಮಾಡುತ್ತೇನೆ ಎಂದರು.