ಸಿಎಂ ದುರಹಂಕಾರಕ್ಕೆ ಜನ ಕಲಿಸಿದ ಪಾಠವಿದು
ಆಡಳಿತ ವಿರೋದಿ ಅಲೆ ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದಂತೆ ಕಂಡು ಬಂದಿದ್ದು, ಬಿಜೆಪಿಗೆ ಸರಕಾರ ರಚಿಸುವಷ್ಟು ಬಹುಮತ ಸಿಗದೇ ಹೋದರೂ, ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿರುವುದಂತೂ ಸತ್ಯ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದೇನು?
ಬೆಂಗಳೂರು: ಆಡಳಿತ ವಿರೋದಿ ಅಲೆ ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದಂತೆ ಕಂಡು ಬಂದಿದ್ದು, ಬಿಜೆಪಿಗೆ ಸರಕಾರ ರಚಿಸುವಷ್ಟು ಬಹುಮತ ಸಿಗದೇ ಹೋದರೂ, ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿರುವುದಂತೂ ಸತ್ಯ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದೇನು?
'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಹಾಗೂ ಎಂ ಸಿದ್ದರಾಮಯ್ಯ ದುರಹಂಕಾರದ ನಡೆಗೆ ರಾಜ್ಯದ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಅಧಿಕಾರ ಸಿಕ್ಕಾಗ ದುರುಪಯೋಗ ಮಾಡಿಕೊಂಡಿದ್ದು, ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಿದ್ದಾರೆ,' ಎಂದಿದ್ದಾರೆ.
'ಬಿಎಸ್ ವೈ ಅವರ ನಾಯಕತ್ವ ಕಾರ್ಯಕರ್ತರ ಶ್ರಮದ ಫಲವಾಗಿ ಬಿಜೆಪಿಗೆ ಗೆಲುವು ಸಿಕ್ಕಿದೆ.ಸೆಂಟ್ರಲ್ ನಲ್ಲಿ ಶೆಟ್ಟರ್ ಸಿಕ್ಸರ್ ಹೊಡೆದಿದ್ದಾರೆ. ಇದು ಜನರ ಗೆಲುವು,' ಎಂದು ಹೇಳಿದ್ದಾರೆ.
ಎಲೆಕ್ಷನ್ ಸುದ್ದಿ ಗಾಗಿ ಇಲ್ಲಿ ಕ್ಲಿಕ್ ಮಾಡಿ