ಸಫಾರಿ ರೈಡ್‌ ಮಾಡುತ್ತಿದ್ದ ಪ್ರವಾಸಿಗರ ಗುಂಪೊಂದು ಹುಲಿಯನ್ನು ವೀಕ್ಷಿಸುತ್ತಿರುವಾಗ ಮತ್ತು ಅದರ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದಾಗ ಕೋಪಗೊಂಡ ಹುಲಿ ಪ್ರವಾಸಿಗರ ಮೇಲೆ ಅಟ್ಯಾಕ್‌ ಮಾಡಲು ಹೋಗಿದೆ.

ನವದೆಹಲಿ (ಏಪ್ರಿಲ್ 27, 2023): ಸಫಾರಿಗೆ ಹೋಗೋದಂದ್ರೆ ಮಕ್ಕಳು ಸೇರಿ ವಯಸ್ಸಾದವರಿಗೂ ಇಷ್ಟ. ಅದ್ರಲ್ಲೂ ಅನೇಕರಿಗೆ ಬಸ್‌ಗಿಂತ ಜೀಪ್‌ನಲ್ಲಿ ಸಫಾರಿಗೆ ಹೋಗೋ ಹುಚ್ಚು ಹೆಚ್ಚು. ಹಾಗೆ, ಸಫಾರಿಯಲ್ಲಿ ಹುಲಿ, ಸಿಂಹ, ಚಿರತೆ ಮುಂತಾದ ಕಾಡು ಪ್ರಾಣಿಗಳನ್ನು ನೋಡಲು ಅನೇಕರು ಇಷ್ಟಪಡುತ್ತಾರೆ. ಕೆಲಸ ಮಾಡಿ ಮಾಡಿ ಬೋರಾಗಿ ಒಂದು ದಿನ ರಿಲ್ಯಾಕ್ಸ್‌ ಆಗೋಕೂ ಇದು ಉತ್ತಮ ಐಡಿಯಾ ಅಲ್ವಾ. ಇದೇ ರೀತಿ, ಜೀಪ್‌ನಲ್ಲಿ ಸಫಾರಿಗೆ ಹೋದೋರಿಗೆ ಶಾಕ್‌ ಕಾದಿತ್ತು.

ನಾಲ್ಕು ಚಕ್ರದ ವಾಹನದಲ್ಲಿ ಸಫಾರಿ ರೈಡ್‌ ಮಾಡುತ್ತಿದ್ದ ಪ್ರವಾಸಿಗರ ಗುಂಪೊಂದು ರಾಷ್ಟ್ರೀಯ ಪ್ರಾಣಿ ಹುಲಿಯನ್ನು ವೀಕ್ಷಿಸುತ್ತಿರುವಾಗ ಮತ್ತು ಅದರ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದಾಗ ಕೋಪಗೊಂಡ ಹುಲಿ ಪ್ರವಾಸಿಗರ ಮೇಲೆ ಅಟ್ಯಾಕ್‌ ಮಾಡಲು ಹೋಗಿದೆ. ವ್ಯಾಘ್ರನಿಗೆ ಯಾರ ಮೇಲೆ ಸಿಟ್ಟು ಬಂತೋ ಏನೋ ತನ್ನ ಜಾಗಕ್ಕೆ ಬಂದ ತಮ್ಮನ್ನು ಅಟ್ಟಾಡಿಸಿಕೊಂಡು ಬರುತ್ತೇನೋ ಎಂದು ಸಫಾರಿ ರೈಡ್‌ ಮಾಡುತ್ತಿದ್ದ ಪ್ರವಾಸಿಗರು ಗಾಬರಿಯಾಗಿದ್ರು ಎನ್ನಲಾಗಿದೆ.

ಇದನ್ನು ಓದಿ: ಮೊಟ್ಟೆ ಕಳ್ಳಿಯರ ಮೇಲೆ ನವಿಲಿನ ರೋಷಾವೇಷ: ಈ ಜನ್ಮದಲ್ಲಿ ಅವ್ರು ಮೊಟ್ಟೆ ತಿನ್ನಲ್ಲ!

ಸಫಾರಿ ವಾಹನದಲ್ಲಿ ಅಲ್ಲಿದ್ದ ಮತ್ತು ಈ ಭಯಾನಕ ಘಟನೆಯನ್ನು ಪ್ರತ್ಯಕ್ಷವಾಗಿ ಅನುಭವಿಸಿದ ಪ್ರವಾಸಿಗರಲ್ಲಿ ಒಬ್ಬರು ಕ್ಯಾಮರಾದಲ್ಲಿ ಹುಲಿ ಆಕ್ರಮಣ ಮಾಡಲು ಮುಂದಾಗಿರುವ ದೃಶ್ಯಾವಳಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 

Scroll to load tweet…

ಇನ್ನು, ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಶಾಂತ ನಂದಾ ಈ ಭಯಾನಕ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ನಾಲ್ಕು ಚಕ್ರಗಳ ವಾಹನದಲ್ಲಿರುವ ವ್ಯಕ್ತಿಗಳು ಹುಲಿಯನ್ನು ಪೊದೆಗಳ ಹಿಂದೆ ಅಡಗಿಕೊಂಡಿರುವುದನ್ನು ಪತ್ತೆಹಚ್ಚಿದ ನಂತರ ಅದನ್ನು ವೀಕ್ಷಿಸುವುದು ಮತ್ತು ಚಿತ್ರಗಳನ್ನು ತೆಗೆದುಕೊಳ್ಳುವುದನ್ನು ಈ ವಿಡಿಯೋ ತೋರಿಸುತ್ತದೆ. ನಂತರ ವ್ಯಾಘ್ರ ಇದ್ದಕ್ಕಿದ್ದಂತೆ ಆಕ್ರೋಶಗೊಳ್ಳುತ್ತದೆ ಮತ್ತು ಜೋರಾಗಿ ಘರ್ಜಿಸಿ ಪ್ರವಾಸಿಗರಲ್ಲಿ ನಡುಕ ಹುಟ್ಟಿಸುತ್ತದೆ.

ಇದನ್ನೂ ಓದಿ: ಕಸದ ವಿಚಾರಕ್ಕೆ ಜಗಳ: ಪಿಸ್ತೂಲು ಹಿಡಿದು ಬೆದರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಉದ್ಯಮಿ!

"ಪಟ್ಟೆಯುಳ್ಳ ಮಾಂಕ್‌ ಕಿರಿಕಿರಿಗೊಂಡಿದೆ" ಎಂಬ ಶೀರ್ಷಿಕೆಯೊಂದಿಗೆ ಸುಶಾಂತ ನಂದಾ ಈ ವೈರಲ್‌ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಅಲ್ಲದೆ, ಜನರು ತಮ್ಮ ಹಕ್ಕಿನ ವಿಷಯವಾಗಿ ನಿಮ್ಮ ಮನೆಗೆ ನುಗ್ಗಿದರೆ ನೀವು ಏನು ಮಾಡುತ್ತೀರಿ?" ಎಂದೂ ಅವರು ಬರೆದುಕೊಂಡಿದ್ದಾರೆ. ಐಪಿಎಸ್‌ ಅಧಿಕಾರಿ ಸುಶಾಂತ ನಂದಾ ಅವರು ಆಗಾಗ್ಗೆ ಪ್ರಾಣಿಗಳ ಸಂಬಂಧದ ಫೋಟೋ, ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಈ ಕಥೆಯು ಸಾಂದರ್ಭಿಕವಾಗಿ "ಹುಲಿಗಳನ್ನು" ನೋಡುವ ನಮ್ಮ ಅತಿಯಾದ ಉತ್ಸಾಹವು ಅವರ ಸಾಮಾನ್ಯ ಜೀವನಕ್ಕೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ ಮತ್ತು ನಮ್ಮ ಜೀವಕ್ಕೂ ಇದರಿಂದ ಅಪಾಯವಾಗಬಹುದು ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: ರೋಡ್‌ಶೋ ವೇಳೆ ಮೋದಿಯತ್ತ ಎಸೆದ ಮೊಬೈಲ್‌ ತಡೆದ ಭದ್ರತಾ ಸಿಬ್ಬಂದಿಗೆ ವ್ಯಾಪಕ ಮೆಚ್ಚುಗೆ!

ಇನ್ನು, ಹುಲಿ ಪ್ರವಾಸಿಗರ ಮೇಲೆ ಎರಗಲು ಹೋದಾಗ ಸಫಾರಿ ವಾಹನದ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದಾರೆ. ಅಲ್ಲದೆ, ಆತುರಾತುರವಾಗಿ ವಾಹನವನ್ನು ಚಲಿಸಲು ಪ್ರಯತ್ನಿಸಿದ್ದು, ಕೋಪಗೊಂಡ ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯಿಂದ ದೂರ ತೆಗೆದುಕೊಂಡು ಹೋಗಿದ್ದಾರೆ. ಹುಲಿ ಯಾರಿಗೂ ಹಾನಿ ಮಾಡದೆ ಮತ್ತೆ ಕಾಡಿಗೆ ಹೋದರೂ ಪ್ರವಾಸಿಗರು ಬೆಚ್ಚಿ ಬಿದ್ದಿದ್ದು, ಹಲವರು ಜೋರಾಗಿ ಕಿರುಚಿದ್ದಾರೆ.

ಇದನ್ನೂ ಓದಿ: 5 ವರ್ಷದ ಹುಡುಗಿಗೆ 95 ವರ್ಷವಾದ್ರೆ ಹೇಗೆ ಕಾಣ್ತಾಳೆ: AI ವೈರಲ್‌ ವಿಡಿಯೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ