Asianet Suvarna News Asianet Suvarna News

ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ 50 ಲಕ್ಷ ರೂ. ಆಮಿ​ಷ!

ಹಾಥ್ರಸ್‌ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ 50 ಲಕ್ಷ ಆಮಿ​ಷ!| ಸುಳ್ಳು ಹೇಳಲು ಆಫ​ರ್‌: ಎಫ್‌ಐಆರ್‌

Unruly Elements Offered 50 Lakhs To Hathras Family To Speak Untruths says UP Police pod
Author
Bangalore, First Published Oct 7, 2020, 8:27 AM IST

ಹಾಥ್ರಸ್(ಅ.07‌: ದಲಿತ ಯುವ​ತಿಯ ಅತ್ಯಾ​ಚಾರ ಹಾಗೂ ಕೊಲೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ದಾಖ​ಲಾದ 19 ಎಫ್‌​ಐ​ಆ​ರ್‌​ಗ​ಳ ಪೈಕಿ ಒಂದರಲ್ಲಿ, ‘ಕೆಲವು ದುಷ್ಟಶಕ್ತಿ​ಗಳು ಯುವ​ತಿಯ ಕುಟುಂಬಕ್ಕೆ ಸುಳ್ಳು ಆರೋ​ಪ​ಗ​ಳನ್ನು ಮಾಡು​ವಂತೆ 50 ಲಕ್ಷ ರು. ಹಣದ ಆಮಿಷ ಒಟ್ಟಿ​ದ್ದ​ವು’ ಎಂಬ ಆರೋಪ ಹೊರಿ​ಸ​ಲಾ​ಗಿ​ದೆ.

ಅಲ್ಲದೆ, ಕೆಲವು ಅನಾ​ಮ​ಧೇ​ಯರು ಸರ್ಕಾ​ರದ ವಿರುದ್ಧ ಸಂಚು ನಡೆ​ಸಿ​ದ್ದಾರೆ ಎಂದು ಆರೋ​ಪಿಸಿ ದೇಶ​ದ್ರೋಹ ಪ್ರಕ​ರ​ಣ​ವನ್ನೂ ದಾಖ​ಲಿ​ಸಲಾ​ಗಿ​ದೆ.

‘ದುಷ್ಟಶಕ್ತಿ​ಗಳು ಯುವ​ತಿಯ ಕುಟುಂಬ​ವನ್ನು ಸಂಪ​ರ್ಕಿಸಿ, ‘ಯೋಗಿ ಆದಿ​ತ್ಯ​ನಾಥ್‌ ಸರ್ಕಾ​ರದ ಬಗ್ಗೆ ಸುಳ್ಳು ಆರೋಪ ಮಾಡಿ. 50 ಲಕ್ಷ ರು. ಕೊಡು​ತ್ತೇ​ವೆ’ ಎಂಬ ಪ್ರಲೋ​ಭನೆ ಒಡ್ಡಿ​ದ್ದ​ವು’ ಎಂದು ಪೊಲೀಸ್‌ ಸಬ್‌ ಇನ್ಸ್‌​ಪೆ​ಕ್ಟರ್‌ ನೀಡಿದ ದೂರನ್ನು ಆಧ​ರಿಸಿ ಎಫ್‌​ಐ​ಆರ್‌ ದಾಖ​ಲಿ​ಸ​ಲಾ​ಗಿದೆ. ಆದರೆ ಈ ದುಷ್ಟ​ಶ​ಕ್ತಿ​ಗಳು ಯಾರು ಎಂಬ ಹೆಸ​ರಿ​ಲ್ಲ.

‘ಇದೇ ಸಂದರ್ಭ ಬಳ​ಸಿ​ಕೊಂಡು ಉತ್ತರ ಪ್ರದೇ​ಶ​ದಲ್ಲಿ ಜಾತಿ ಗಲಭೆ ಎಬ್ಬಿ​ಸಲು ಕೆಲವು ಶಕ್ತಿ​ಗಳು ಸಂಚು ನಡೆ​ಸಿ​ದ​ವು​. ಸಾಮಾ​ಜಿ​ಕ ಮಾಧ್ಯಮದ ಮೂಲ​ಕ ಸುಳ್ಳು ಸಂದೇ​ಶ​ಗ​ಳನ್ನು ಹರ​ಡಿ​ದ​ವು​’ ಎಫ್‌​ಐ​ಆ​ರ್‌​ನ​ಲ್ಲಿ​ದೆ.

‘ಅನಾ​ಮಿಕ ಪತ್ರ​ಕ​ರ್ತೆ​ಯೊ​ಬ್ಬರು ಯುವ​ತಿಯ ಸೋದ​ರ​ನನ್ನು ಸಂಪ​ರ್ಕಿಸಿ, ‘ಉ​ತ್ತರ ಪ್ರದೇಶ ಸರ್ಕಾರದ ಬಗ್ಗೆ ನನಗೆ ತೃಪ್ತಿ ಇಲ್ಲ’ ಎಂದು ಹೇಳಿ ಎಂದು ಪುಸ​ಲಾ​ಯಿ​ಸಲು ಯತ್ನಿ​ಸಿ​ದ​ರು’ ಎಂದೂ ಪ್ರಥಮ ವರ್ತ​ಮಾನ ವರ​ದಿ​ಯ​ಲ್ಲಿ​ದೆ.

‘ಸ​ರ್ಕಾ​ರದ ಸಾಧನೆ ಸಹಿ​ಸದ ಕೆಲ​ವರು ರಾಜ್ಯದಲ್ಲಿ ಅಶಾಂತಿ ಮೂಡಿ​ಸಲು ಹಾಥ್ರಸ್‌ ಪ್ರಕ​ರಣ ಬಳ​ಸಿ​ಕೊ​ಳ್ಳು​ತ್ತಿ​ದ್ದಾ​ರೆ’ ಎಂದು ಇತ್ತೀ​ಚೆಗೆ ಮುಖ್ಯ​ಮಂತ್ರಿ ಯೋಗಿ ಆದಿ​ತ್ಯ​ನಾಥ್‌ ದೂರಿದ್ದು ಕೂಡ ಇಲ್ಲಿ ಗಮ​ನಾ​ರ್ಹ.

Follow Us:
Download App:
  • android
  • ios