30 ಜನರ ಬಿಟ್ಟು 5 ಗಂಟೆ ಮೊದಲೇ ಸಿಂಗಾಪುರಕ್ಕೆ ಹಾರಿದ ವಿಮಾನ
ಸ್ಕೂಟ್ಸ್ ಏರ್ಲೈನ್ಸ್ಗೆ ಸೇರಿದ ವಿಮಾನವೊಂದು30 ಪ್ರಯಾಣಿಕರನ್ನು ಅಮೃತಸರ ವಿಮಾನ ನಿಲ್ದಾಣದಲ್ಲೇ ಬಿಟ್ಟು, 5 ಗಂಟೆ ಮುಂಚಿತವಾಗಿಯೇ ಸಿಂಗಾಪುರಕ್ಕೆ ತೆರಳಿದ ಘಟನೆ ಬುಧವಾರ ನಡೆದಿದೆ.

ನವದೆಹಲಿ: ಸ್ಕೂಟ್ಸ್ ಏರ್ಲೈನ್ಸ್ಗೆ ಸೇರಿದ ವಿಮಾನವೊಂದು30 ಪ್ರಯಾಣಿಕರನ್ನು ಅಮೃತಸರ ವಿಮಾನ ನಿಲ್ದಾಣದಲ್ಲೇ ಬಿಟ್ಟು, 5 ಗಂಟೆ ಮುಂಚಿತವಾಗಿಯೇ ಸಿಂಗಾಪುರಕ್ಕೆ ತೆರಳಿದ ಘಟನೆ ಬುಧವಾರ ನಡೆದಿದೆ. ಈ ಕುರಿತು ವರದಿಗೆ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ನೋಟಿಸ್ ಜಾರಿ ಮಾಡಿದೆ. ಈ ನಡುವೆ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಕಂಪನಿ, ವಿಮಾನ ರಾತ್ರಿ 7.55ಕ್ಕೆ ಹೊರಡಬೇಕಿತ್ತು. ಆದರೆ ಅಷ್ಟು ಹೊತ್ತಿಗೆ ಪ್ರತಿಕೂಲ ಹವಾಮಾನದ ವರದಿ ಇದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 3.45ಕ್ಕೆ ವಿಮಾನ ಸಂಚಾರ ಕೈಗೊಂಡಿತು. ಪ್ರಯಾಣಿಕರಿಗೆ, ಏಜೆಂಟರಿಗೆ ಈ ಕುರಿತು ಮೊದಲೇ ಮಾಹಿತಿ ನೀಡಲಾಗಿತ್ತು. ಆದರೆ ಕೆಲ ಏಜೆಂಟ್ಗಳು ಮಾಹಿತಿ ಹಂಚಿಕೊಳ್ಳದ ಕಾರಣ ಘಟನೆ ಸಂಭವಿಸಿದೆ ಎಂದು ಹೇಳಿದೆ. ವಾರದ ಹಿಂದೆ ಗೋಫಸ್ಟ್ ವಿಮಾನ ಕೂಡಾ ಬೆಂಗಳೂರಿನಲ್ಲಿ 55 ಪ್ರಯಾಣಿಕರನ್ನು ಬಿಟ್ಟು ದೆಹಲಿಗೆ ತೆರಳಿತ್ತು.
1,508 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ: ಗೋ ಫಸ್ಟ್ನಿಂದ ಇಂಡಿಪೆಂಡೆನ್ಸ್ ಡೇ ಸೇಲ್
ಬೆಂಗಳೂರು ವಿಮಾನ ನಿಲ್ದಾಣದಲ್ಲಿ Happy Journey ಹೇಳೋ ಸ್ವೀಪರ್, ನೀವು ಥ್ಯಾಂಕ್ಸ್ ಹೇಳ್ತೀರಾ?