‘ದೇವರಿಗೆಂದು ಭಕ್ತರು ನೀಡುವ ಕಾಣಿಕೆಯನ್ನು ದೇವಸ್ಥಾನದ ಕಾರ್ಯಗಳಿಗಷ್ಟೇ ಬಳಸಬೇಕು. ದೇವಾಲಯಗಳ ದುಡ್ಡನ್ನು ಅನ್ಯ ಕಾರ್ಯಕ್ಕೆ ಬಳಸುವ ಕ್ರಮ ಅಕ್ರಮ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕ ಗಡಿಯಲ್ಲಿರುವ ಕೇರಳದ ತಿರುನೆಲ್ಲಿ ದೇವಾಲಯದ ಪ್ರಕರಣವೊಂದರಲ್ಲಿ ಈ ಮಹತ್ವದ ಆದೇಶವನ್ನು ಕೋರ್ಟ್ ನೀಡಿದೆ.
ನವದೆಹಲಿ : ‘ದೇವರಿಗೆಂದು ಭಕ್ತರು ನೀಡುವ ಕಾಣಿಕೆಯನ್ನು ದೇವಸ್ಥಾನದ ಕಾರ್ಯಗಳಿಗಷ್ಟೇ ಬಳಸಬೇಕು. ದೇವಾಲಯಗಳ ದುಡ್ಡನ್ನು ಅನ್ಯ ಕಾರ್ಯಕ್ಕೆ ಬಳಸುವ ಕ್ರಮ ಅಕ್ರಮ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕ ಗಡಿಯಲ್ಲಿರುವ ಕೇರಳದ ತಿರುನೆಲ್ಲಿ ದೇವಾಲಯದ ಪ್ರಕರಣವೊಂದರಲ್ಲಿ ಈ ಮಹತ್ವದ ಆದೇಶವನ್ನು ಕೋರ್ಟ್ ನೀಡಿದೆ.
‘ಸಹಕಾರಿ ಬ್ಯಾಂಕುಗಳನ್ನು ಉಳಿಸಲು ದೇವಸ್ಥಾನಕ್ಕೆ ಸೇರಿದ ಹಣ ಬಳಕೆ
‘ಸಹಕಾರಿ ಬ್ಯಾಂಕುಗಳನ್ನು ಉಳಿಸಲು ದೇವಸ್ಥಾನಕ್ಕೆ ಸೇರಿದ ಹಣ ಬಳಸಲಾಗಿದೆ’ ಎಂಬ ಅರ್ಜಿ ವಿಚಾರಣೆನ ನಡೆಸಿದ ಪೀಠ ಈ ಆದೇಶ ಹೊರಡಿಸಿದೆ.
ಈ ಹಿಂದೆ 5 ಸಹಕಾರಿ ಬ್ಯಾಂಕ್ಗಳಲ್ಲಿ ಎಫ್ಡಿ ರೂಪದಲ್ಲಿದ್ದ ಠೇವಣಿಯನ್ನು ಮರಳಿಸಲು ಅವುಗಳು ಹಿಂದೇಟು ಹಾಕಿದ್ದನ್ನು ಗಮನಿಸಿದ್ದ ಕೇರಳ ಹೈಕೋರ್ಟ್, 2 ತಿಂಗಳಲ್ಲಿ ಅದನ್ನು ತಿರುನೆಲ್ಲಿ ದೇವಸ್ಥಾನ ದೇವಸ್ವಂಗೆ ಹಿಂದಿರುಗಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಾನಂತವಾಡಿ ಕೋ-ಆಪರೇಟಿವ್ ಅರ್ಬನ್ ಸೊಸೈಟಿ ಲಿ. ಮತ್ತು ತಿರುನೆಲ್ಲಿ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.
ದೇವರಿಗೆ ಸೇರಿದ ಹಣವನ್ನು ದೇವಸ್ಥಾನದ ಕೆಲಸಗಳಿಗಾಗಿ ಉಳಿಸಿ
ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸಿಜೆಐ ನ್ಯಾ। ಸೂರ್ಯಕಾಂತ್ ಮತ್ತು ನ್ಯಾ। ಜಯಮಾಲ್ಯ ಬಾಗ್ಚಿ ಅವರ ಪೀಠ, ‘ದೇವರಿಗೆ ಸೇರಿದ ಹಣವನ್ನು ದೇವಸ್ಥಾನದ ಕೆಲಸಗಳಿಗಾಗಿ ಉಳಿಸಿ, ಬಳಸಬೇಕು. ಬೇಕಿದ್ದರೆ ಹಣ ಮರಳಿಸುವ ಅವಧಿಯನ್ನು ವಿಸ್ತರಿಸುವಂತೆ ಹೈಕೋರ್ಟ್ಗೆ ಮನವಿ ಮಾಡಿ’ ಎಂದು ನಿರ್ದೇಶಿಸಿದೆ.


