'ಗ್ಯಾರೆಂಟಿ'ಯಿಂದ ಸಂಕಷ್ಟಕ್ಕೆ ಸಿಲುಕಿರೋ KSRTCಗೆ ಸುಪ್ರೀಂನಿಂದ ಬಿಗ್​ ಶಾಕ್​! ಖಾಸಗಿ ಬಸ್​ಗಳು ಫುಲ್​ ಖುಷ್​

'ಗ್ಯಾರೆಂಟಿ'ಯಿಂದ ಇದಾಲೇ ಸಂಕಷ್ಟಕ್ಕೆ ಸಿಲುಕಿರೋ KSRTC ದಿಢೀರನೆ ಪ್ರಯಾಣದ ವೆಚ್ಚವನ್ನು ಒಂದೂವರೆ ಪಟ್ಟು ಮಾಡಿ ಪ್ರಯಾಣಿಕರಿಗೆ ಆಘಾತ ನೀಡಿರುವ ಬೆನ್ನಲ್ಲೇ ಸುಪ್ರೀಂನಿಂದ ಬಿಗ್​ ಶಾಕ್ ಎದುರಾಗಿದೆ. 
 

Supreme Court approves 2003 law dismantling KSRTCs monopoly over bus operations in Karnataka suc

ಇದಾಗಲೇ ಗ್ಯಾರೆಂಟಿಯ ಸುಳಿಯಲ್ಲಿ ಸಿಲುಕಿ ಕೆಎಸ್​ಆರ್​ಟಿಸಿಗೆ ಭಾರಿ ನಷ್ಟ ಉಂಟಾಗಿರುವ ವಿಷಯ ಇದಾಗಲೇ ಬೆಳಕಿಗೆ ಬಂದಿದೆ. ಕಳೆದ ಡಿಸೆಂಬರ್​ನಲ್ಲಿ ಕೆಎಸ್​ಆರ್​ಟಿಸಿ 295 ಕೋಟಿ ನಷ್ಟ ಆಗಿದೆ ಎಂದು ತೋರಿಸಿದೆ. ಅದೇ ಇನ್ನೊಂದೆಡೆ, ಇದಾಗಲೇ ಚಾಲಕರು ಮತ್ತು ನಿರ್ವಾಹಕರು ಸಂಬಳ ಹೆಚ್ಚಳಕ್ಕೆ ಪ್ರತಿಭಟನೆಯನ್ನೂ ಮಾಡಿಯಾಗಿದೆ. ಇವೆಲ್ಲ ಹೊಡೆತಕ್ಕೆ ಸಿಕ್ಕಿ ಬಸ್ಸಿನ ಟಿಕೆಟ್​ ದರವನ್ನು ದಿಢೀರ್​ನೆ ಏರಿಸಿ, ನಷ್ಟವನ್ನು ತುಂಬಿಸಿಕೊಳ್ಳುವ ಪ್ರಯತ್ನದಲ್ಲಿದೆ ಕೆಎಸ್​​ಆರ್​ಟಿಸಿ. ಒಂದೆಡೆ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟು, ದೂರದ ಊರುಗಳಿಗೆ ಹೋಗುವ ರಾಜಹಂಸ, ಸ್ಲೀಪರ್​  ಕೋಚ್​ ಬಸ್​​ಗಳಿಗೆ ಒಂದೂವರೆ ಪಟ್ಟು ರೇಟ್​ ಆಗಿದೆ. ಕೆಲವು ಊರುಗಳಿಗೆ ಇದ್ದ ರಾಜಹಂಸ ಬಸ್​ ಅನ್ನು ರದ್ದು ಮಾಡಿ, ಸ್ಲೀಪರ್​  ಕೋಚ್​ ಹಾಕುವ ಮೂಲಕ, ಈ ಹೆಚ್ಚುವರಿ ಹಣ ತೆರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಇದಾಗಲೇ, ಕೆಎಸ್​ಆರ್​ಟಿಸಿ ಬಸ್​ ದರಕ್ಕೆ ಪೈಪೋಟಿ ನೀಡುತ್ತಿರುವ ಕೆಲವು ಖಾಸಗಿ ಬಸ್​ಗಳು, ಅದಕ್ಕಿಂತ ಕಡಿಮೆ ದರವನ್ನು ಇಟ್ಟು, ಪ್ರಯಾಣಿಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಇವೆಲ್ಲವುಗಳ ನಡುವೆಯೇ, ಕೆಎಸ್​ಆರ್​ಟಿಸಿಗೆ ಬಿಗ್​ ಶಾಕ್​ ಒಂದನ್ನು ಸುಪ್ರೀಂಕೋರ್ಟ್​ ನೀಡಿದೆ. 2003ರಲ್ಲಿ ಎಸ್​.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾರಿಗೆ ಬಸ್​ಗೆ ಸಂಬಂಧಿಸಿದಂತೆ ಇದ್ದ ಕಾಯ್ದೆಗೆ ಸುಪ್ರೀಂಕೋರ್ಟ್​ ಅಸ್ತು ಎಂದಿದೆ. ಈ ಮೂಲಕ KSRTCಯ ಏಕಸ್ವಾಮ್ಯವನ್ನು ತೆಗೆದುಹಾಕಿದೆ.

ಗೃಹ ಸಾಲ ಇದ್ಯಾ? ಪಡೆಯೋ ಪ್ಲ್ಯಾನ್​ ಮಾಡಿದ್ದೀರಾ? RBI ಹೊಸ ರೂಲ್ಸ್​ನಿಂದ EMI ಎಷ್ಟು ಕಡಿಮೆ ಆಗತ್ತೆ ನೋಡಿ!

ಇದರ ಬಗ್ಗೆ ಸುಲಭದಲ್ಲಿ ಹೇಳಬೇಕು ಎಂದಾದರೆ, ಇನ್ನು ಮುಂದೆ ಖಾಸಗಿ ಬಸ್​ಗಳು ಯಾವ ಊರುಗಳಿಗೆ, ಯಾವ ಪ್ರದೇಶಗಳಿಗೆ ಬೇಕಾದರೂ ಹೋಗಬಹುದಾಗಿದೆ. ಇಲ್ಲಿಯವರೆಗೆ ಇದ್ದ ನಿಯಮ ಏನೆಂದರೆ, ಖಾಸಗಿ ಬಸ್​ಗಳಿಗೆ ಎಲ್ಲಾ ರೂಟ್​ಗಳಲ್ಲಿ ಕೆಎಸ್​ಆರ್​ಟಿಸಿ ಅವಕಾಶ ನೀಡುತ್ತಿರಲಿಲ್ಲ. ಎಲ್ಲಿ ಜನಸಂಖ್ಯೆ ಕಡಿಮೆ ಇದೆ, ವರ್ಕ್​ಔಟ್​ ಆಗುವುದಿಲ್ಲ ಎನ್ನುವ ಕೆಲವು ಕಡೆಗಳಲ್ಲಿ ಖಾಸಗಿ ಬಸ್​ಗಳಿಗೆ ಸರ್ಕಾರ ಅನುಮತಿ ನೀಡುತ್ತಿತ್ತು. ಕೆಲವೇ ಕೆಲವು ಊರುಗಳಿಗೆ ಮಾತ್ರ ಖಾಸಗಿ ಮತ್ತು ಕೆಎಸ್​ಆರ್​ಟಿಸಿ ಬಸ್​ ಈಗ ಚಲಿಸುತ್ತಿವೆಯಾದರೂ, ಎಷ್ಟೋ ರೂಟ್​ಗಳಲ್ಲಿ ಜನರು ಸರ್ಕಾರಿ ಬಸ್​ಗೆ ಕಾದು ಕುಳಿತುಕೊಳ್ಳುವ ಅನಿವಾರ್ಯತೆ ಇದೆ. 

ಅದೂ ಈಗ ಶಕ್ತಿ ಯೋಜನೆಯಿಂದಾಗಿ ಕೆಲವು ರೂಟ್​ಗಳಲ್ಲಿ ಬಸ್​ ಸಂಚಾರವನ್ನೇ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಪಾಡು ಕೇಳುವುದೇ ಬೇಡ. ಇದೀಗ ಸುಪ್ರೀಂಕೋರ್ಟ್​ ತೀರ್ಪಿನ ಅನ್ವಯ ಎಲ್ಲದ್ದಕ್ಕೂ ಕಡಿವಾಣ ಬಿದ್ದಿದೆ. ಖಾಸಗಿ ಬಸ್​ಗಳ ಜೊತೆ ಕೆಎಸ್​ಆರ್​ಟಿಸಿ ದರ ಸೇರಿದಂತೆ ಎಲ್ಲವುಗಳಲ್ಲಿಯೂ ಕಾಂಪೀಟ್​ ಮಾಡಲೇಬೇಕಿದೆ. ಸುಪ್ರೀಂಕೋರ್ಟ್​ ಆದೇಶದ ಅನ್ವಯ ಇದೀಗ ಖಾಸಗಿ ಬಸ್​ಗಳು ಎಲ್ಲಾ ರೂಟ್​ಗಳಲ್ಲಿಯೂ ಸಂಚರಿಸಲು ಅನುಮತಿ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಜನರು ಖಾಸಗಿ ಬಸ್​ನತ್ತ ಮುಖ ಮಾಡುವ ಸಾಧ್ಯತೆ ಇದೆ. ಉಚಿತ ಪ್ರಯಾಣ ಬಯಸುವವರು ಕೆಎಸ್​ಆರ್​ಟಿಸಿ ಮೊರೆ ಹೋದರೆ, ಉಳಿದವರು ಖಾಸಗಿ ಬಸ್​ಗಳತ್ತ ಒಲವು ತೋರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇದು ಕೆಎಸ್​ಆರ್​ಟಿಸಿಗೆ ಬಿಗ್​ ಶಾಕ್​ ಆಗಿದೆ. ಅಷ್ಟೇ ಅಲ್ಲದೇ ರಾಜಹಂಸ, ಸ್ಲೀಪರ್​ ಕೋಚ್​ಗಳ ದರವನ್ನು ಕಂಡು ಇದಾಗಲೇ ಶಾಕ್​ಗೆ ಒಳಗಾಗಿರುವ ಪ್ರಯಾಣಿಕರನ್ನು ಗಮನದಲ್ಲಿ ಇಟ್ಟುಕೊಂಡು ಖಾಸಗಿ ಬಸ್​ಗಳು ಎಲ್ಲಾ ರೂಟ್​ಗಳಲ್ಲಿ ಕಡಿಮೆ ದರ ನಿಗದಿ ಮಾಡುವ ಸಾಧ್ಯತೆಯೂ ಇದೆ. 

ವಕ್ಫ್​ ಆಸ್ತಿ ಕಬಳಿಕೆ ಆರೋಪಕ್ಕೆ 'ಸುಪ್ರೀಂ' ಮಾಸ್ಟರ್​ಸ್ಟ್ರೋಕ್​? ಸ್ಥಿರಾಸ್ತಿ ಮಾಲೀಕತ್ವದ ಕುರಿತು ಮಹತ್ವದ ತೀರ್ಪು
 

Latest Videos
Follow Us:
Download App:
  • android
  • ios