Asianet Suvarna News Asianet Suvarna News

Russia Ukraine War: ಆಪರೇಷನ್‌ ಗಂಗಾ ಮೋದಿ ಛಲಕ್ಕೆ ಸಾಕ್ಷಿ: ವಿದೇಶಾಂಗ ಸಚಿವ ಎಸ್‌.ಜೈಶಂಕರ್‌

ಸಂಘರ್ಷದ ನಡುವೆಯೂ 20000 ಜನರ ರಕ್ಷಣೆಗೆ ಪ್ರಧಾನಿ ಸಹಾನುಭೂತಿ ಕಾರಣ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರತಿಪಾದಿಸಿದ್ದಾರೆ.

Russia Ukraine war PM Narendra Modi Personal Intervention made Operation Ganga Possible S Jaishankar mnj
Author
Bengaluru, First Published Apr 7, 2022, 8:06 AM IST | Last Updated Apr 7, 2022, 8:06 AM IST

ನವದೆಹಲಿ (ಏ. 07): ಉಕ್ರೇನ್‌ ಹಾಗೂ ರಷ್ಯಾ ಯುದ್ಧ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪ್ರದರ್ಶಿಸಿದ ಛಾತಿಯಿಂದಾಗಿಯೇ, ಯುದ್ಧದ ನಡುವೆಯೂ 20000 ಭಾರತೀಯರನ್ನು ರಕ್ಷಣೆ ಮಾಡುವುದು ಸಾಧ್ಯವಾಯಿತು ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರತಿಪಾದಿಸಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಉಕ್ರೇನ್‌ ವಿಷಯವಾಗಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದಲೇ ಆಪರೇಶನ್‌ ಗಂಗಾ ಸಫಲವಾಯಿತು.

ಮೋದಿ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಗೂ ಉಕ್ರೇನಿನ ಅಧ್ಯಕ್ಷ ಜೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ಫಲವಾಗಿ ಕದನ ವಿರಾಮದ ಸತತ ಉಲ್ಲಂಘನೆ ನಡುವೆಯೂ ಸಂಘರ್ಷ ವಲಯವಾದ ಸುಮಿ ಹಾಗೂ ಖಾರ್ಕೀವ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ತೆರವು ಸಾಧ್ಯವಾಯಿತು’ ಎಂದರು.

ಭಾರತವು ಯುದ್ಧಪೀಡಿತ ಉಕ್ರೇನಿನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಿದ ಮೊದಲ ದೇಶವಾಗಿದೆ. ಹಲವಾರು ದೇಶಗಳು ಭಾರತದಿಂದ ಪ್ರೇರಣೆ ಪಡೆದು ಇಂತಹ ಕಾರ್ಯಾಚರಣೆಯನ್ನು ಆರಂಭಿಸಿದವು. ಭಾರತವು ಆಪರೇಶನ್‌ ಗಂಗಾದಡಿಯಲ್ಲಿ 90 ವಿಮಾನಗಳ ಮೂಲಕ ದೇಶದ ನಾಗರಿಕರನ್ನು ಮರಳಿ ಕರೆತಂದಿದ್ದ ಪ್ರೇರಣೆಯಿಂದಾಗಿ ಇನ್ನೊಂದು ದೇಶದ ವಿದೇಶಾಂಗ ಸಚಿವರು ಕೂಡಾ ಅವರ ಸರ್ಕಾರದ ನೆರವಿನೊಂದಿಗೆ 2 ವಿಮಾನಗಳಲ್ಲಿ ನಾಗರಿಕರನ್ನು ಮರಳಿ ತಂದರು. ಭಾರತವು ಕೇವಲ ಆರ್ಥಿಕವಾಗಿ ಆತ್ಮನಿರ್ಭರವೆನಿಸಿಲ್ಲ. ಆಪರೇಶನ್‌ ಗಂಗಾದಂತಹ ಕ್ಲಿಷ್ಟಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿಭಾಯಿಸಿಯೂ ಜಗತ್ತು ತನ್ನತ್ತ ತಿರುಗಿ ನೀಡುವಂತೆ ಮಾಡಿದೆ’ ಎಂದರು.

ಇದನ್ನೂ ಓದಿ: ಭಾರತ ಹಿಂದೆಂದಿಗಿಂತಲೂ ಈಗ ಹೆಚ್ಚು ಸದೃಢ: ಪ್ರಧಾನಿ ಮೋದಿ

ನಡುವಿನ ಬಿಕ್ಕಟ್ಟಿನಲ್ಲಿ ಭಾರತವು ಶಾಂತಿಯ ಪರವಾಗಿದೆ ಹಾಗೂ ಭೀಕರ ಯುದ್ಧವನ್ನು ಕೂಡಲೇ ನಿಲ್ಲಿಸಲು ಕರೆ ನೀಡುತ್ತದೆ. ಇದೇ ವೇಳೆ ಉಕ್ರೇನಿನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡವನ್ನು ಭಾರತವು ವಿರೋಧಿಸುತ್ತದೆ. ಅಲ್ಲದೇ ಈ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸುತ್ತದೆ ಎಂದು ಜೈಶಂಕರ್‌ ಹೇಳಿದರು.

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ನೆರೆಯ ದೇಶಗಳಲ್ಲೇ ಶಿಕ್ಷಣ ಚಾನ್ಸ್‌: ಯುದ್ಧ ಪೀಡಿತ ಉಕ್ರೇನಿನಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಸ್ಥಳಾಂತರಗೊಂಡಿರುವ ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದುವರೆಸಲು ನೆರವು ನೀಡುವಂತೆ ಹಂಗೇರಿ, ರೊಮೇನಿಯಾ, ಕಜಕಿಸ್ತಾನ ಮತ್ತು ಪೋಲೆಂಡ್‌ ಬಳಿ ಭಾರತ ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಬುಧವಾರ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಉಕ್ರೇನ್‌ ಪರಿಸ್ಥಿತಿ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು ‘ಉಕ್ರೇನಿಂದ ಸ್ಥಳಾಂತರಗೊಂಡ ವೈದ್ಯ ವಿದ್ಯಾರ್ಥಿಗಳು ಹಂಗೇರಿ ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್‌ ಪೂರ್ಣಗೊಳಿಸಲು ಆ ದೇಶವು ಅನುಮತಿ ನೀಡಿದೆ. ಬೇರೆ ದೇಶಗಳೂ ಇಂಥದ್ದೇ ಪ್ರಸ್ತಾಪ ಮುಂದಿಟ್ಟಿವೆ. ಹಂಗೇರಿ, ರೊಮೇನಿಯಾ, ಕಜಕಿಸ್ತಾನ ಮತ್ತು ಪೋಲೆಂಡ್‌ ದೇಶಗಳಲ್ಲೂ ಉಕ್ರೇನ್‌ ರೀತಿಯ ಶಿಕ್ಷಣ ವ್ಯವಸ್ಥೆ ಇರುವ ಕಾರಣ ಭಾರತದ ಅತಂತ್ರ ವಿದ್ಯಾರ್ಥಿಗಳಿಗೆ ನೆರವು ನೀಡುವಂತೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಭಾರತದಲ್ಲಿ ಬಡತನ ಏರಿಕೆ ತಡೆದ ಮೋದಿ ಧಾನ್ಯ ಸ್ಕೀಂ

ಇದೇ ವೇಳೆ , ವೈದ್ಯ ಪದವಿಯ ಪ್ರಮುಖ 2 ಪರೀಕ್ಷೆಗಳನ್ನು ಬರೆಯುವುದರಿಂದ ಉಕ್ರೇನ್‌ ಸರ್ಕಾರ ಕೂಡಾ ವಿನಾಯಿತಿ ನೀಡಿದೆ. ಜೊತೆಗೆ ಮೂರರಿಂದ ನಾಲ್ಕನೇ ವರ್ಷಕ್ಕೆ ಬಡ್ತಿ ನೀಡುವುದರಲ್ಲೂ ಕೆಲವೊಂದು ವಿನಾಯ್ತಿ ಪ್ರಕಟಿಸಿದೆ. 6ನೇ ವರ್ಷದ ವಿದ್ಯಾರ್ಥಿಗಳಿಗೆ ಕಡ್ಡಾಯ ಸಿಆರ್‌ಒಸಿ ಪರೀಕ್ಷೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios