Asianet Suvarna News Asianet Suvarna News

ದೇಶದ ಶೇ.99ರಷ್ಟು ಮುಸ್ಲಿಮರ ಪೂವರ್ಜರು ಹಿಂದುಸ್ತಾನಿಗಳು: RSS ನಾಯಕ ಇಂದ್ರೇಶ್‌ ಕುಮಾರ್!

ಥಾಣೆ ಜಿಲ್ಲೆಯ ಉತ್ತಾನ್‌ನಲ್ಲಿರುವ ರಾಂಭೌ ಮಲ್ಗಿ ಪ್ರಬೋಧಿನಿಯಲ್ಲಿ ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಕಾರ್ಯಕರ್ತರ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರು ಈ ಮಾತನ್ನು ಹೇಳಿದ್ದಾರೆ.
 

RSS leader Indresh Kumar says 99 per cent Muslims in India are Hindustani by their ancestry culture and motherland san
Author
First Published Nov 13, 2022, 9:11 PM IST

ಥಾಣೆ (ನ.13): ಭಾರತದಲ್ಲಿರುವ ಶೇ.99ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ತಾಯ್ನಾಡಿನಿಂದ "ಹಿಂದೂಸ್ತಾನಿ" ಆಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಾಯಕ ಇಂದ್ರೇಶ್ ಕುಮಾರ್ ಭಾನುವಾರ ಹೇಳಿದ್ದಾರೆ. ಭಾರತೀಯರಿಗೆ ಸಾಮಾನ್ಯ ಪೂರ್ವಜರಿದ್ದಾರೆ, ಆದ್ದರಿಂದ ಅವರ ಡಿಎನ್‌ಎ ಸಾಮಾನ್ಯವಾಗಿದೆ ಎಂದು ಈ ಹಿಂದೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಅವರು ಬೆಂಬಲಿಸಿದ್ದಾರೆ.  ಥಾಣೆ ಜಿಲ್ಲೆಯ ಉತ್ತಾನ್‌ನಲ್ಲಿರುವ ರಾಂಭೌ ಮಲ್ಗಿ ಪ್ರಬೋಧಿನಿಯಲ್ಲಿ ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಕಾರ್ಯಕರ್ತರ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಇಂದ್ರಕುಮಾರ್ ಮಾತನಾಡುವ ವೇಳೆ ಇದನ್ನು ತಿಳಿಸಿದ್ದಾರೆ.  "ಪವಿತ್ರ ಕುರಾನ್‌ನ ನಿರ್ದೇಶನಗಳು ಮತ್ತು ತತ್ವಗಳ ಪ್ರಕಾರ ನಾವು ನಮ್ಮ ರಾಷ್ಟ್ರದ ಕಡೆಗೆ ನಮ್ಮ ಕರ್ತವ್ಯವನ್ನು ಸರ್ವೋಚ್ಚ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪರಿಗಣಿಸಬೇಕು" ಎಂದು ಕುಮಾರ್ ಉಲ್ಲೇಖಿಸಿದ್ದಾರೆ.

"ಭಾರತದಲ್ಲಿ ಶೇಕಡಾ 99ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ತಾಯ್ನಾಡಿನಿಂದ ಹಿಂದೂಸ್ತಾನಿಯಾಗಿದ್ದಾರೆ" ಎಂದು ಅವರು ಈ ವೇಳೆ ಹೇಳಿದ್ದಾರೆ. ಪ್ರಕಟಣೆಯ ಪ್ರಕಾರ, ಕುಮಾರ್ ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ, "ಡಿ ಎಂದರೆ ನಾವು ಪ್ರತಿದಿನ ಪಡೆಯುವ ಕನಸುಗಳು, ಎನ್ ಎಂದರೆ ಸ್ಥಳೀಯ ರಾಷ್ಟ್ರ ಮತ್ತು ಎ ಪೂರ್ವಜರನ್ನು ಪ್ರತಿನಿಧಿಸುತ್ತದೆ. ನಾವೆಲ್ಲರೂ ನಮ್ಮ ಮಾತೃಭಾಷೆಯಲ್ಲಿ ಕನಸು ಕಾಣುತ್ತೇವೆ' ಎಂದು ಅವರು ಹೇಳಿದ್ದಾರೆ.

ನಾನು RSS ಕೈ ಗೊಂಬೇನೂ ಅಲ್ಲ ಕಾಲು ಗೊಂಬೇನೂ ಅಲ್ಲ: ಆರಗ ಜ್ಞಾನೇಂದ್ರ

"ನಾವು ಸಾಮಾನ್ಯ ಪೂರ್ವಜರನ್ನು ಹೊಂದಿದ್ದೇವೆ ಮತ್ತು ಸಾಮಾನ್ಯ ಸ್ಥಳೀಯ ರಾಷ್ಟ್ರವನ್ನು ಹಂಚಿಕೊಳ್ಳುತ್ತೇವೆ, ಇದು ನಮಗೆಲ್ಲರಿಗೂ ಸಾಮಾನ್ಯ ಡಿಎನ್ಎಯನ್ನು ಹಂಚಿಕೊಳ್ಳುವಂತೆ ಮಾಡುತ್ತದೆ" ಎಂದು ಆರೆಸ್ಸೆಸ್‌ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿರುವ  ಇಂದ್ರೇಶ್‌ ಕುಮಾರ್ ಹೇಳಿದ್ದಾರೆ. ಮಹಿಳಾ ಕಾರ್ಯಕರ್ತರು ಸೇರಿದಂತೆ ರಾಜ್ಯದ 40ಕ್ಕೂ ಹೆಚ್ಚು ಸ್ಥಳಗಳಿಂದ ಒಟ್ಟು 250 ಕಾರ್ಯಕರ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಮಿಳುನಾಡಿನಲ್ಲಿ ಆರೆಸ್ಸೆಸ್‌ ಮೆರವಣಿಗೆ ಮುಂದೂಡಿಕೆ, ಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ!

Follow Us:
Download App:
  • android
  • ios