ಪತ್ರಕರ್ತರೂ ಕೊರೋನಾ ವಾರಿಯರ್ಸ್: ಸೋಂಕಿನಿಂದ ಸತ್ತರೆ ಕುಟುಂಬಕ್ಕೆ 15 ಲಕ್ಷ
ಕಾರ್ಯನಿರತ ಪತ್ರಕರ್ತರೂ ಕೊರೋನಾ ವಾರಿಯರ್ಸ್ | ಜರ್ನಲಿಸ್ಟ್ಗಳು ಕೊರೋನಾ ವಾರಿಯರ್ಸ್ ಎಂದು ಪರಿಗಣನೆ
ಒಡಿಶಾ(ಮೇ.02): ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ರಾಜ್ಯದ ಎಲ್ಲಾ ಕಾರ್ಯನಿರತ ಪತ್ರಕರ್ತರನ್ನು ಮುಂಚೂಣಿಯ COVID-19 ಯೋಧರು ಎಂದು ಘೋಷಿಸಿದ್ದಾರೆ.
"ಕಾರ್ಯನಿರತ ಪತ್ರಕರ್ತರು ತಡೆರಹಿತ ಸುದ್ದಿ ಫೀಡ್ ನೀಡುವ ಮೂಲಕ ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಜನರು COVID-19 ಸಂಬಂಧಿತ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತಾರೆ ಎಂದು ಪಟ್ನಾಯಕ್ ಹೇಳಿದ್ದಾರೆ.
ದೇವರನಾಡಿನಲ್ಲಿ ಆಡಳಿತರೂಢ ಪಕ್ಷ ಮತ್ತೆ ಅಧಿಕಾರಕ್ಕೆ: ನಾಲ್ಕು ದಶಕದ ಇತಿಹಾಸ!
COVID-19 ನಿಂದ ಸಾಯುವ ಪತ್ರಕರ್ತರ ರಕ್ತಸಂಬಂಧಿಗಳಿಗೆ ₹ 15 ಲಕ್ಷದ ಪರಿಹಾರ ಒದಗಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಈ ಮೂಲಕ ಹಗಲಿರುಳು ದುಡಿಯುತ್ತಿರುವ ಪತ್ರಕರ್ತರಿಗೆ ಭದ್ರತೆ ಸಿಕ್ಕಂತಾಗಿದೆ.