Asianet Suvarna News Asianet Suvarna News

Munawar Faruqui ಬೆಂಗಳೂರು ಕಾರ್ಯಕ್ರಮ ರದ್ದು: ಸಂಘಟಕರಿಗೆ ಪೋಲಿಸರ ಪತ್ರ!

*ಮುನಾವರ್‌ ಫಾರೂಕಿ ಬೆಂಗಳೂರು ಶೋ ರದ್ದು
*ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ  ಆರೋಪ
*ಟ್ವೀಟರ್‌ ಮೂಲಕ ಮುನಾವರ್ ಫಾರುಕಿ ಪ್ರತಿಕ್ರಿಯೆ

Munawar Faruqui show cancelled in Bengaluru comedian  reacts on twitter mnj
Author
Bengaluru, First Published Nov 28, 2021, 1:17 PM IST

ಬೆಂಗಳೂರು(ನ.28): ಇಂದು (ನವೆಂಬರ್ 28) ಗುಡ್ ಶೆಫರ್ಡ್ ಸಭಾಂಗಣದಲ್ಲಿ (Good Shepherd auditorium) ನಡೆಯಬೇಕಿದ್ದ ಹಾಸ್ಯಗಾರ ಮುನಾವರ್ ಫಾರೂಕಿ (Munawar Faruqui) ಅವರ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಬೆಂಗಳೂರು ಪೊಲೀಸರು (Bengaluru Police) ಸೂಚನೆ ನೀಡಿದ್ದಾರೆ. ಸಂಘಟಕರಿಗೆ ಬರೆದ ಪತ್ರದಲ್ಲಿ, "ಹಲವಾರು ಸಂಘಟನೆಗಳು ಈ ಸ್ಟ್ಯಾಂಡ್-ಅಪ್ ಕಾಮಿಡಿ ಶೋ (Stand up comedy) ಅನ್ನು ವಿರೋಧಿಸುತ್ತಿವೆ. ಇದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು. ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು  ಮಾಹಿತಿ ಇದೆ" ಎಂದು ತಿಳಿಸಲಾಗಿದೆ. ಬಜರಂಗದಳದ ಬೆದರಿಕೆಯಿಂದಾಗಿ ಕಳೆದ ತಿಂಗಳು ಮುಂಬೈನಲ್ಲಿ ಫಾರೂಕಿ ಇದೇ ರೀತಿಯ ಕಾರ್ಯಕ್ರಮ ರದ್ದುಗೊಂಡಿತ್ತು.

ಮುನಾವರ್ ಫಾರೂಕಿ ವಿವಾದಾತ್ಮಕ ವ್ಯಕ್ತಿಯಾಗಿದ್ದು, ಇತರ ಧರ್ಮಗಳ ದೇವರುಗಳ ಬಗ್ಗೆ ಹೇಳಿಕೆ ನೀಡಿದ್ದಾಗಿ ತಿಳಿದುಬಂದಿದೆ. ಅನೇಕ ರಾಜ್ಯಗಳು ಅವರ ಹಾಸ್ಯ ಕಾರ್ಯಕ್ರಮಗಳನ್ನು ನಿಷೇಧಿಸಿವೆ. ಈತನ ವಿರುದ್ಧ ಮಧ್ಯಪ್ರದೇಶದಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಇತರ ರಾಜ್ಯಗಳಲ್ಲೂ ಆತನ ವಿರುದ್ಧ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ ಎಂದು ಅಶೋಕ್ ನಗರ ಪೊಲೀಸರು ಕಳುಹಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.  

#MeToo case: ವಿಚಾರಣೆಗೆ ಹಾಜರಾಗಲು ನಾತಿಚರಾಮಿ ನಟಿಗೆ ನೋಟಿಸ್!

ಅದರಂತೆ ಭಾನುವಾರ ಬೆಳಗ್ಗೆ ಕಾರ್ಯಕ್ರಮ ರದ್ದಾಗಿದೆ. ನಿರಂತರವಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಗುಜರಾತ್‌ (Gujarat) ಮೂಲದ ಹಾಸ್ಯಗಾರ ಮುನಾವರ್ ಫಾರುಕಿಯ ಡೊಂಗ್ರಿ ಟು ನೋವೇರ್  (Dongri to nowhere) ಹೆಸರಿನಲ್ಲಿ ಬೆಂಗಳೂರಿನಲ್ಲಿ ನ. 28ರ  ರಾತ್ರಿ 10.30ಕ್ಕೆ ಗುಡ್ ಶೆಫರ್ಡ್ ಸಭಾಂಗಣದಲ್ಲಿ (Auditorium) ಕಾರ್ಯಕ್ರಮ ನಿಯೋಜನೆಯಾಗಿತ್ತು. ಈ ಕಾರ್ಯಕ್ರಮಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಹೇಳಲಾಗಿದೆ. ಈ ವರ್ಷದ ಆರಂಭದಲ್ಲಿ, ಫಾರುಕಿ ಅವರ ಹಾಸ್ಯ ಗೋಷ್ಠಿಯೊಂದರಲ್ಲಿ "ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ" ಕಾರಣಕ್ಕಾಗಿ ಬಂಧಿಸಲಾಗಿತ್ತು. ಫಾರೂಕಿ ಒಂದು ತಿಂಗಳ ಸೆರೆಮನೆವಾಸ ಅನುಭವಿಸಿದ್ದರು.

ಟ್ವೀಟರ್‌ ಮೂಲಕ ಮುನಾವರ್ ಫಾರುಕಿ ಪ್ರತಿಕ್ರಿಯೆ!

ಈ ಬಗ್ಗೆ ಟ್ವೀಟರ್‌ (Twitter) ಮೂಲಕ  ಹಾಸ್ಯಗಾರ ಮುನಾವರ್ ಫಾರುಕಿ ಭಾನುವಾರ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ. 600 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ ಭಾನುವಾರದ ಅವರ ಪ್ರದರ್ಶನವನ್ನು ಸ್ಥಳವನ್ನು ಧ್ವಂಸಗೊಳಿಸುವ ಬೆದರಿಕೆಯ ಮೇರೆಗೆ ರದ್ದುಪಡಿಸಲಾಗಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಟ್ವೀಟ್‌ನಲ್ಲಿ ಅವರು, "ನಫ್ರತ್ ಜೀತಾ ಹೈ, ಕಲಾವಿದ ಹಾರ್ ಗಯಾ. [ದ್ವೇಷ ಜಯಿಸಿದೆ, ಕಲಾವಿದ ಸೋತಿದ್ದಾನೆ]. ನಾನು ಮುಗಿಸಿದ್ದೇನೆ! ವಿದಾಯ! ಅನ್ಯಾಯ. ತಮಾಷೆ ಮಾಡಿದ್ದಕ್ಕಾಗಿ ನನ್ನನ್ನು ಜೈಲಿಗೆ ಹಾಕಿದ್ದರಿಂದ ಹಿಡಿದು ಯಾವುದೇ ತೊಂದರೆಯಿಲ್ಲದ ನನ್ನ ಕಾರ್ಯಕ್ರಮವನ್ನು ರದ್ದುಪಡಿಸುವವರೆಗೂ... ಇದು ಅನ್ಯಾಯ" ಎಂದು ಅವರು ಬರೆದಿದ್ದಾರೆ. "ಇದು ಅಂತ್ಯ ಎಂದು ನಾನು ಭಾವಿಸುತ್ತೇನೆ. ನನ್ನ ಹೆಸರು ಮುನಾವರ್ ಫಾರುಕಿ. ಇಲ್ಲಿಗೆ ನನ್ನ ಸಮಯ ಮುಕ್ತಾಯ. ನೀವು ಅದ್ಭುತ ಪ್ರೇಕ್ಷಕರಾಗಿದ್ದೀರಿ. ಧನ್ಯವಾದ. ನಾನು ಮುಗಿಸಿದ್ದೇನೆ,"  ಎಂದು ಅವರು ಬರೆದಿದ್ದಾರೆ.

 

 

Vir Das: ಹಣವಿಲ್ಲದೆ ATM ಮುಂದೆ ನಿಂತು ಅಳುತ್ತಿದ್ದೆ, ಕಷ್ಟದ ದಿನಗಳ ನೆನಪಿಸಿಕೊಂಡ ಖ್ಯಾತ Comedian

ಸ್ಟ್ಯಾಂಡಪ್ ಕಾಮಿಡಿಯನ್ ವೀರ್ ದಾಸ್(Vir Das) ಅವರು ನೆಟ್‌ಫ್ಲಿಕ್ಸ್ ಸರಣಿ, ಮೇಡ್ ಅನ್ನು ವೀಕ್ಷಿಸಿದ ನಂತರ ಅವರು ಅನುಭವಿಸಿದ ಭಾವನೆಗಳನ್ನು ಬಹಿರಂಗಪಡಿಸುವ ಪೋಸ್ಟ್ ಬರೆದು ಅದನ್ನು ಶೇರ್ ಮಾಡಿದ್ದಾರೆ. ನಟನು ತನ್ನ ಜೀವನದ ಅತ್ಯಂತ ಕಷ್ಟದ ದಿನಗಳ ನೆನಪಿಸುವ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ. 2002 ರಲ್ಲಿ 31ನೇ ಅಕ್ಟೋಬರ್‌ನಲ್ಲಿ ಅವರು ಚಿಕಾಗೋದಲ್ಲಿದ್ದಾಗ ನಡೆದ ಘಟನೆ ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಬಾಕಿಯನ್ನು ಪಾವತಿಸಲು ಹಣವಿಲ್ಲದಿದ್ದ ಆ ಒಂದು ಹಂತವನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ. ನಂತರ ಕ್ರೆಡಿಟ್ ಕಾರ್ಡ್ ಏಜೆಂಟ್‌ಗಳಿಂದ ಬೆದರಿಕೆ ಕರೆಗಳು ಬಂದಿದ್ದವು ಎಂದಿದ್ದಾರೆ.

Samantha: ವಿಚ್ಚೇದನ ನಂತ್ರ ಮೊದಲ ಬಾರಿ ಮಾಜಿ ಮಾವನ ಸ್ಟುಡಿಯೋಗೆ ಬಂದ ನಟಿ

ಮಧ್ಯರಾತ್ರಿ 2 ಗಂಟೆಗೆ ತನ್ನ ಖಾತೆಯಲ್ಲಿ ಕೇವಲ 8 ಡಾಲರ್‌ನೊಂದಿಗೆ ಎಟಿಎಂ ಹೊರಗೆ ಅಳುತ್ತಿದ್ದ ಸಮಯವನ್ನು ನಟ ಹಂಚಿಕೊಂಡಿದ್ದಾರೆ. ನಾನು ಮೈಡ್ ನೋಡಿದೆ. ಇದು ಉತ್ಕೃಷ್ಟವಾಗಿದೆ. ನಾನು ಮೂರು ರಾತ್ರಿಗಳಲ್ಲಿ ಮಲಗಿಲ್ಲ ಎಂದಿದ್ದಾರೆ. ಮೈಡ್ ನೋಡುವುದು ನನಗೆ ಆತಂಕವನ್ನು ನೀಡಿತು. ನನ್ನ ಅತ್ಯಂತ ಕಷ್ಟದ ದಿನಗಳು ಚಿಕಾಗೋ 2002 ಆಗಿರಬಹುದು. ಯಾವುದೇ ವಿಮೆ ಇಲ್ಲ, ಬಾಡಿಗೆ ತಡ, ಕ್ರೆಡಿಟ್ ಕಾರ್ಡ್ ಏಜೆಂಟ್‌ಗಳು ಪ್ರತಿದಿನ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು, ನನ್ನ ಖಾತೆಯಲ್ಲಿ 8$ ಜೊತೆಗೆ 2 ಗಂಟೆಗೆ ATM ಹೊರಗೆ ಅಳುತ್ತಿದ್ದೆ ಎಂದಿದ್ದಾರೆ ವೀರ್..

Follow Us:
Download App:
  • android
  • ios