ಹಿಮಾಚಲ ಪ್ರದೇಶ ಭೂಕುಸಿತದಲ್ಲಿ ಸಾವನ್ನಪ್ಪಿದ್ದ ಡಾ. ದೀಪಾ ಕೆಲವೇ ನಿಮಿಷ ಮೊದಲು ಚಂದದ ಫೋಟೋ ಟ್ವೀಟ್ ಮಾಡಿದ್ದ ವೈದ್ಯೆ

ನವದೆಹಲಿ(ಜು.26): ಹಿಮಾಚಲ ಪ್ರದೇಶದ ಪರ್ವತ ಕಿನ್ನೌರ್ ಜಿಲ್ಲೆಯಲ್ಲಿ ಭೂಕುಸಿತದಿಂದ ವಾಹನಗಳ ಮೇಲೆ ಬಂಡೆಗಳು ಬಿದ್ದು ಸಾವನ್ನಪ್ಪಿದ ಒಂಬತ್ತು ಪ್ರವಾಸಿಗರಲ್ಲಿ ಜೈಪುರದ ಆಯುರ್ವೇದ ವೈದ್ಯರೊಬ್ಬರು ಸೇರಿದ್ದಾರೆ. ದುರಂತದ ಕೆಲವೇ ನಿಮಿಷಗಳ ಮೊದಲು ಪೋಸ್ಟ್ ಮಾಡಿದ ಡಾ. ದೀಪಾ ಶರ್ಮಾ ಅವರ ಕೊನೆಯ ಟ್ವೀಟ್‌ ಈಗ ವೈರಲ್ ಆಗಿದೆ.

Add Asianetnews Kannada as a Preferred SourcegooglePreferred

ನಾಗರಿಕರಿಗೆ ಅವಕಾಶವಿರುವ ಭಾರತದ ಕೊನೆಯ ಪ್ರದೇಶದಲ್ಲಿ ನಿಂತಿದ್ದೇನೆ ಎಂದು ದೀಪಾ ಕ್ಯಾಪ್ಶನ್ ಕೊಟ್ಟಿದ್ದಾರೆ. ಹಿಮಾಚಲ ಪ್ರವಾಸದ ಸುಂದರವಾದ ಫೋಟೋಸ್ ಟ್ವಿಟ್ಟರ್ ಫೀಡ್ ಮಾಡಿರುವ 34 ವರ್ಷದ ವೈದ್ಯೆ ನಾಗಸ್ತಿ ಐಟಿಬಿಪಿ ಚೆಕ್-ಪೋಸ್ಟ್ನಲ್ಲಿ ಮಧ್ಯಾಹ್ನ 12.59 ಕ್ಕೆ ತನ್ನ ಕೊನೆಯ ಪೋಸ್ಟ್ನಲ್ಲಿ ಕ್ಯಾಮೆರಾಗೆ ಸಂತೋಷದಿಂದ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಎಂ.ಎಸ್.ಶರ್ಮಾ ಪ್ರಯಾಣದ ಫೋಟೋವನ್ನು ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ, ಮಧ್ಯಾಹ್ನ 1.25 ಕ್ಕೆ ಸಾಂಗ್ಲಾ-ಚಿಟ್ಕುಲ್ ರಸ್ತೆಯ ಬಸ್ತೇರಿ ಬಳಿ ಭೂಕುಸಿತ ಸಂಭವಿಸಿದೆ.

ಉತ್ತರಾಖಂಡ್ ಯುದ್ಧ ಸ್ಮಾರಕಕ್ಕೆ ಬೇಕಿದೆ ಸಹೃದಯಿಗಳ ಕೊಡುಗೆ!

ಘಟನೆಯ ವಿಡಿಯೋ ತುಣುಕಿನಲ್ಲಿ ದೊಡ್ಡ ಬಂಡೆಗಳು ಒಡೆದು ಕೆಳಗಿನ ಕಣಿವೆಯಲ್ಲಿ ಉರುಳುತ್ತಿರುವುದು ಕಂಡುಬಂತು. ಸೇತುವೆಯ ಒಂದು ಭಾಗವು ಬಂಡೆಯೊಂದನ್ನು ಹೊಡೆದ ನಂತರ ನದಿಯಲ್ಲಿ ಮುಳುಗುತ್ತಿರುವುದನ್ನು ಕಾಣಬಹುದು.

Scroll to load tweet…

ಅಪಘಾತದಲ್ಲಿ ಪ್ರಾಣಹಾನಿ ಸಂಭವಿಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ2 ಲಕ್ಷ ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯದಿಂದ ಗಾಯಗೊಂಡವರಿಗೆ ₹ 50,000 ನೆರವು ನೀಡುವುದಾಗಿ ಮೋದಿ ಘೋಷಿಸಿದ್ದಾರೆ.

Scroll to load tweet…