ಜಗತ್ತನ್ನು ಉಳಿಸಲು ವಿಷವನ್ನು ಕುಡಿದ ಶಿವ ಬುಡಕಟ್ಟು ಜನಾಂಗಕ್ಕೆ (tribal Community) ಸೇರಿದವ ಎಂದು ಮಧ್ಯಪ್ರದೇಶದ ಶಾಸಕರೊಬ್ಬರು ‘ಸ್ಫೋಟಕ’ ಹೇಳಿಕೆ ನೀಡಿದ್ದಾರೆ. 

ಭೋಪಾಲ್‌: ಜಗತ್ತನ್ನು ಉಳಿಸಲು ವಿಷವನ್ನು ಕುಡಿದ ಶಿವ ಬುಡಕಟ್ಟು ಜನಾಂಗಕ್ಕೆ (tribal Community) ಸೇರಿದವ ಎಂದು ಮಧ್ಯಪ್ರದೇಶದ ಶಾಸಕರೊಬ್ಬರು ‘ಸ್ಫೋಟಕ’ ಹೇಳಿಕೆ ನೀಡಿದ್ದಾರೆ. ಮಂಗಳವಾರ ತಮ್ಮ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಅರ್ಜುನ್‌ ಸಿಂಗ್‌ ಕಾಕೋಡಿಯಾ (MLA Arjun Singh Kakodia), ‘ಸಮುದ್ರ ಮಂಥನದ ಸಮಯದಲ್ಲಿ ಅಮೃತ ಹಾಗೂ ವಿಷ ಎರಡೂ ಉದ್ಭವಿಸಿದವು. ಆಗ ಬುದ್ಧಿವಂತರು ಅಮೃತವನ್ನು ಕುಡಿದರು. ವಿಷ ಹಾಗೆಯೇ ಉಳಿಯಿತು. ಅದನ್ನು ಕುಡಿದ ಶಿವ ಜಗತ್ತನ್ನು ಉಳಿಸಿದ. ಶಿವ ಬೋಲೆ ಭಂಡಾರಿ ಬುಡಕಟ್ಟಿಗೆ ಸೇರಿದವನು. ಹಾಗಾಗಿಯೇ ಆ ಬುಡಕಟ್ಟನ್ನು ನಾವು ಇಂದಿಗೂ ಗೌರವಿಸುತ್ತೇವೆ’ ಎಂದು ಹೇಳಿದರು. ಇದಕ್ಕೂ ಮೊದಲು ಕಳೆದ ತಿಂಗಳು ಹನುಮಂತನೂ ಸಹ ಬುಡಕಟ್ಟು ಜನಾಂಗಕ್ಕೆ ಸೇರಿದವನು ಎಂದು ಅರ್ಜುನ್‌ ಸಿಂಗ್‌ ಹೇಳಿದ್ದರು.

Add Asianetnews Kannada as a Preferred SourcegooglePreferred

ಇಡೀ ಭೂ ಲೋಕದ ರಕ್ಷಕನಾದ ಶಿವ. ಅವನನ್ನು ಮಹಾದೇವ, ದೇವರ ದೇವ ಎಂದು ಕರೆಯಲಾಗುತ್ತದೆ. ಹಿಂದೂಗಳು ಶಿವನನ್ನು ಮುಖ್ಯವಾಗಿ ಲಿಂಗದ ರೂಪದಲ್ಲಿ ಪೂಜಿಸುತ್ತಾರೆ. ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ, ಮುಖ್ಯವಾಗಿ ಲಿಂಗದ ಮೇಲೆ ತಾಮ್ರದ ಪಾತ್ರೆ ನೇತಾಡುತ್ತದೆ ಮತ್ತು ಅದರ ಮೇಲೆ ನಿಯಮಿತ ಮಧ್ಯಂತರದಲ್ಲಿ ನೀರು/ಹಾಲು ತೊಟ್ಟಿಕ್ಕುತ್ತದೆ. ಅಲ್ಲದೆ, ಭಕ್ತರು ಅದರ ಮೇಲೆ ನೀರು ಮತ್ತು ಹಾಲು ಸುರಿಯುತ್ತಾರೆ. ನೀರು ಹನಿ ಹನಿಯಾಗಿ ಶಿವನ ತಲೆ ಮೇಲೆ ಏಕೆ ಜಿನುಗುತ್ತಿರುತ್ತದೆ?

Amarnath Yatra 2023: ಹಿಮದ ಶಿವಲಿಂಗದ ಮೊದಲ ಫೋಟೋ ವೈರಲ್, ಈ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?

ಶಿವಲಿಂಗದ ಮೇಲೆ ನೀರು ಏಕೆ ಜಿನುಗುತ್ತಿರುತ್ತದೆ?

ಶಿವಪುರಾಣ ಮತ್ತು ಇತರ ಧಾರ್ಮಿಕ ಗ್ರಂಥಗಳ ಪ್ರಕಾರ, ಕಲಶದಿಂದ ತೊಟ್ಟಿಕ್ಕುವ ನೀರು ಸಾಗರದ ಮಂಥನಕ್ಕೆ ಸಂಬಂಧಿಸಿದೆ. ದೇವತೆಗಳು ಮತ್ತು ಅಸುರರ ನಡುವೆ ಸಾಗರವು ಮಂಥನವಾದಾಗ ಅಮೃತವು ಹೊರ ಬರುವ ಮೊದಲು ಹಾಲಾಹಲದ ವಿಷದ ಪಾತ್ರೆಯು ಹೊರಬಂದಿತು. ಹಾಲಾಹಲದ ವಿಷದ ಕುಂಡ ಹೊರಬಂದಾಗ, ಈ ವಿಷವನ್ನು ಈಗ ಏನು ಮಾಡಬೇಕೆಂದು ಎಲ್ಲಾ ದೇವತೆಗಳು ಮತ್ತು ಅಸುರರು ಚಿಂತಿತರಾದರು. ಸಾಗರ ಮಂಥನದ ನಿಯಮದ ಪ್ರಕಾರ, ಯಾರಾದರೂ ವಿಷವನ್ನು ಧರಿಸಿದಾಗ ಮಾತ್ರ ಮಂಥನದಿಂದ ಕೇವಲ ಅಮೃತವು ಹೊರಹೊಮ್ಮುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೇವತೆ ಮತ್ತು ಅಸುರನ ಸಲಹೆ ಮತ್ತು ಸಂಭಾಷಣೆಯ ನಂತರ, ಎಲ್ಲರೂ ಶಿವನನ್ನು ನೆನಪಿಸಿಕೊಂಡರು ಮತ್ತು ಎಲ್ಲರೂ ಶಿವನಿಗೆ ವಿಷವನ್ನು ಕುಡಿಯಲು ಪ್ರಾರ್ಥಿಸಿದರು. ಏಕೆಂದರೆ, ಆ ವಿಷ ಇಡೀ ಬ್ರಹ್ಮಾಂಡವನ್ನು ನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿತ್ತು. ಅಂಥ ವಿಷವನ್ನು ಶಿವನ ಹೊರತಾಗಿ ಮತ್ಯಾರಿಗೂ ತೆದುಕೊಳ್ಳುವ ಶಕ್ತಿ ಇರಲಿಲ್ಲ.

 ಶಿವನು ದೇವತೆಗಳು ಮತ್ತು ಅಸುರರ ಪ್ರಾರ್ಥನೆಯನ್ನು ಸ್ವೀಕರಿಸಿ ವಿಷವನ್ನು ಸೇವಿಸಿದನು. ವಿಷವನ್ನು ಕುಡಿದ ನಂತರ, ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗಿತು. ಅಲ್ಲಿಂದ ಕೆಳಗೆ ಹೋಗದಂತೆ ಪಾರ್ವತಿ ದೇವಿ ತಡೆದಳು. ಆದರೂ ಅವನ ಇಡೀ ದೇಹವು ಉರಿಯಲು ಪ್ರಾರಂಭಿಸಿತು. ನಂತರ ಅವರ ತಲೆ ಮತ್ತು ದೇಹವನ್ನು ತಂಪಾಗಿಸಲು ಮತ್ತು ಶಾಂತಗೊಳಿಸಲು ಜಲಾಭಿಷೇಕವನ್ನು ಮಾಡಲಾಯಿತು. ನೀರನ್ನು ಸುರಿಯುವ ಮೂಲಕ, ಅವನು ಸುಡುವ ಸಂವೇದನೆಯಿಂದ ಪರಿಹಾರವನ್ನು ಪಡೆದನು. ನಂತರದಿಂದ ಶಿವನಿಗೆ ಜಲಾಭಿಷೇಕ ತುಂಬಾ ಇಷ್ಟವಾಯಿತು. ವಿಷವನ್ನು ಸೇವಿಸಿದ ನಂತರ ಅವನ ಗಂಟಲು ನೀಲಿ ಬಣ್ಣಕ್ಕೆ ತಿರುಗಿದ್ದರಿಂದ ಶಿವನಿಗೆ ನೀಲಕಂಠ ಎಂದು ಹೆಸರಿಸಲಾಯಿತು.

ಕಳೆದ 50 ವರ್ಷಗಳಿಂದ ಎತ್ತಿದ ಕೈ ಇಳಿಸೇ ಇಲ್ಲ ಈ ಹಠಯೋಗಿ! ಇದು ಶಿವನಿಗೆ ಶಾಶ್ವತ ನಮಸ್ಕಾರವಂತೆ!

Scroll to load tweet…