05:15 PM (IST) Jun 04

ವಾರಾಣಾಸಿಯಲ್ಲಿ ಪ್ರಧಾನಿ ಮೋದಿಗೆ ಗೆಲವು

ಕಳೆದ ಸಲ 4 ಲಕ್ಷ 89 ಸಾವಿರ ಅಂತರದಿಂದ ಗೆದ್ದಿದ್ದು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಾಣಾಸಿಯಿಂದ 1 ಲಕ್ಷದ 52 ಸಾವಿರ ಮತಗಳಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಮೊದಲ ಕೆಲವು ಸುತ್ತು ಮತ ಎಣಿಕೆ ನಂತರ ಮುನ್ನಡೆ ಕಾಯ್ದಕೊಂಡಿದ್ದು, ಮೋದಿಯ ಗೆಲವು ಎಲ್ಲಿ ಪ್ರಯಾಸ ಆಗುವುದೋ ಎಂಬ ಭಯ ಹುಟ್ಟಿಸುವಂತೆ ಮಾಡಿತ್ತು. 

04:53 PM (IST) Jun 04

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಲಿಸಿದ ಕಿಶೋರಿ ಲಾಲ್‌ ಸೋಶಿಯಲ್ ಮೀಡಿಯಾದಲ್ಲಿ ಫುಲ್‌ ಟ್ರೆಂಡಿಂಗ್‌

ಕೇಂದ್ರ ಸಚಿವೆ, ಬಿಜೆಪಿಯ ಸ್ಟಾರ್ ಪ್ರಚಾರಕಿ ಸ್ಮೃತಿ ಇರಾನಿ ಅವರನ್ನು ಅಮೇಥಿಯಲ್ಲಿ ಭಾರಿ ಮತಗಳ ಅಂತರದಿಂದ ಸೋಲಿಸಿರುವ ಕಾಂಗ್ರೆಸ್ ನಾಯಕ, ಗಾಂಧಿ ಮನೆತನಕ್ಕೆ ನಿಷ್ಠಾವಂತನಾಗಿರುವ ಕಿಶೋರಿ ಲಾಲ್ ಶರ್ಮಾ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

03:32 PM (IST) Jun 04

ನಿತೀಶ್‌ ಕುಮಾರ್‌ಗೆ ಉಪಪ್ರಧಾನಿ, ಆಂಧ್ರಗೆ ವಿಶೇಷ ಸ್ಥಾನಮಾನ: ಇಂಡಿ ಒಕ್ಕೂಟದಿಂದ ಬಿಗ್‌ ಆಫರ್‌

ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಹಾಗೂ ಟಿಡಿಪಿಗೆ ಇಂಡಿಯಾ ಒಕ್ಕೂಟ ಬಿಗ್‌ ಆಫರ್‌ಅನ್ನು ನೀಡಿದ್ದು ತಮ್ಮ ಜೊತೆ ಕೈ ಜೋಡಿಸಿ ಸರ್ಕಾರ ರಚಿಸಲು ನೆರವಾಗುವಂತೆ ಮನವಿ ಮಾಡಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

03:17 PM (IST) Jun 04

ರಾಮಜನ್ಮ ಭೂಮಿ ಆಯೋಧ್ಯೆಯಲ್ಲೇ ಬಿಜೆಪಿಗೆ ಹಿನ್ನಡೆ, ಇಂಡಿಯಾ ಮೈತ್ರಿಗೆ ಅಭೂತಪೂರ್ವ ಮುನ್ನಡೆ!

ಉತ್ತರ ಪ್ರದೇಶದಲ್ಲಿ ಬಿಜೆಪಿ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ. ಇಂಡಿಯಾ ಒಕ್ಕೂಟ ಭಾರಿ ಮುನ್ನಡೆ ಪಡೆದುಕೊಂಡಿದೆ. ಪ್ರಮುಖವಾಗಿ ಆಯೋಧ್ಯೆ ರಾಮಮಂದಿರ ಒಳಗೊಂಡ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿನತ್ತ ಮುಖಮಾಡಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

03:14 PM (IST) Jun 04

ಬಿಜೆಪಿಯ ಸ್ಟಾರ್ ನಾಯಕಿ ಸ್ಮೃತಿ ಇರಾನಿಗೆ ಹೀನಾಯ ಸೋಲು; ಗೆದ್ದ ಕಾಂಗ್ರೆಸ್

Amethi Lok sabha Election Results: ಸ್ಮೃತಿ ಇರಾನಿ ಸಹ ಅಮೇಥಿಯಲ್ಲಿ ಸ್ಪರ್ಧೆ ಮಾಡುವಂತೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದರು. ಅಂತಿಮವಾಗಿ ಕಾಂಗ್ರೆಸ್ ಸ್ಥಳೀಯ ಮುಖಂಡ ಕಿಶೋರಿ ಲಾಲ್ ಶರ್ಮಾ ಅವರಿಗೆ ಟಿಕೆಟ್ ನೀಡಿತ್ತು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

03:12 PM (IST) Jun 04

ನಿತೀಶ್ ಕುಮಾರ್‌ಗೆ ಉಪ ಪ್ರಧಾನಿ ಆಫರ್ ಕೊಟ್ಟ ಇಂಡಿ ಒಕ್ಕೂಟ

ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಇಂಡಿ ಒಕ್ಕಟೂ ಆ್ಯಕ್ಟಿವ್ ಆಗಿದ್ದು, ಎನ್‌ಡಿಎ ಮೈತ್ರಿ ಪಕ್ಷಗಳ ಮುಖ್ಯಸ್ಥರಿಗೆ ಬಿಗ್ ಆಫರ್ ನೀಡುತ್ತಿದ್ದು, ಬಿಹಾರ ಮುಖ್ಯಮಮಂತ್ರಿ ನಿತೀಶ್ ಕುಮಾರ್‌ಗೆ ಉಪ್ ಪ್ರಧಾನಿ ಮಾಡುವ ಆಮಿಷ ಒಡ್ಡಿದೆ. ಈಗಾಗಲೇ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಎನ್‌ಡಿಎ ಮೈತ್ರಿಯೊಂದಿಗೆ ಆಂಧ್ರದಲ್ಲಿ ಸರಕಾರ ರಚಿಸುವ ಭರವಸೆ ನೀಡಿದ್ದು, ಕೇಂದ್ರದಲ್ಲಿ ಬೆಂಬಲಿಸುವುದುಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ, ನಿತೀಶ್ ಕುಮಾರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು. 

01:59 PM (IST) Jun 04

ನವೀನ್ ಪಟ್ನಾಯಕ್ ಕೋಟೆಗೆ ಬಜೆಪಿ ಎಂಟ್ರಿ: ಮ್ಯಾಜಿಕ್ ನಂಬರ್‌ನತ್ತ ಕಮಲ ಪಡೆ

BJP reaches Majority Mark: ಮಧ್ಯಾಹ್ನ 12 ಗಂಟೆಯ ಟ್ರೆಂಡ್ ಪ್ರಕಾರ, ಬಿಜೆಪಿ 17 ಲೋಕಸಭಾ ಕ್ಷೇತ್ರ ಹಾಗೂ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತ್ತ ಬಿಜೆಡಿ 3 ಲೋಕಸಭಾ ಮತ್ತು 57 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

01:53 PM (IST) Jun 04

ಕಿಂಗ್ ಮೇಕರ್ ನಾಯ್ಡು: ಚಂದ್ರ ಬಾಬು ನಾಯ್ಡು ಜೊತೆ ಮೋದಿ ಮಾತುಕತೆ

ಚಂದ್ರ ಬಾಬು ನಾಯ್ಡು ಜೊತೆ ಪ್ರಧಾನಿ ಮೋದಿ ಮಾತುಕತೆ. ದೂರವಾಣಿ ಮೂಲಕ ಮಾತುಕತೆ ನಡೆಸಿದ ಪ್ರಧಾನಿ ಮೋದಿ. NDA ಮೈತ್ರಿಕೂಟದಲ್ಲಿ ಇರುವಂತೆ ಮನವಿ. ಕೂಡಲೇ ದೆಹಲಿಗೆ ಬರುವಂತೆ ಮನವಿ. ಈಗಾಗ್ಲೇ NDA ಮೈತ್ರಿಕೂಟದ ಭಾಗವಾಗಿರುವ ಚಂದ್ರ ಬಾಬು ನಾಯ್ಡು. NDA ಮೈತ್ರಿಕೂಟದಲ್ಲಿದ್ದರೂ, ಇಂಡಿ ಮೈತ್ರಿಕೂಟದಿಂದ ನಾಯ್ಡುಗೆ ಆಹ್ವಾನ. ಸದ್ಯ ಆಂಧ್ರದಲ್ಲಿ 20-22 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ TDP ಪಕ್ಷ

01:40 PM (IST) Jun 04

ಜೆಡಿಎಸ್ ಭದ್ರಕೋಟೆ ಮಂಡ್ಯ ಉಳಿಸಿಕೊಂಡ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು ಬರೋಬ್ಬರಿ 2 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

01:34 PM (IST) Jun 04

ಎನ್‌ಡಿಎಗೆ ಕಡಿಮೆ ಸ್ಥಾನ ಹಿನ್ನಲೆ, ಹೃದಯಾಘಾತದಿಂದ ವ್ಯಕ್ತಿ ಸಾವು

ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎಗೆ ಕಡಿಮೆ ಸ್ಥಾನ ಬಂದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವು ಕಂಡಿದ್ದಾನೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

01:22 PM (IST) Jun 04

ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್, ಪತ್ನಿ ಡಿಂಪಲ್ ಯಾದವ್ ಗೆಲವು ಬಹುತೇಕ ಖಚಿತ

ಉತ್ತರ ಪ್ರದೇಶದಲ್ಲಿ ಇಂಡಿ ಮೈತ್ರಿಕೂಟ ಕಮಾಲ್ ಮಾಡುತ್ತಿದ್ದು, ಬಿಜೆಪಿಗೆ ಸೆಡ್ಡು ಹೊಡೆದಿದೆ. ಸಮಾಜವಾದಿ ಪಕ್ಷ ಮೇಲೆದಿದ್ದಿದ್ದು, ಕಾಂಗ್ರೆಸ್‌ಗೂ ಮರು ಜನ್ಮ ಸಿಕ್ಕಂತಾಗಿದೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಪತ್ನಿ ಡಿಂಪಲ್ ಯಾದವ್ ಮುನ್ನಡೆ ಕಾಯ್ದುಕೊಂಡಿದ್ದು, ಗೆಲ್ಲುವುದು ಬಹುತೇಕ ಖಚಿತವಾಗಿದೆ. 

01:08 PM (IST) Jun 04

ಲಕ್ಷಾಂತರ ಮತಗಳಿಂದ ಮತ್ತೆ ಗೆದ್ದು ಹೀಗಿದ ಎಂಪಿ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಆಶೀರ್ವಾದದಿಂದ ಬಹಳ ದೊಡ್ಡ ಅಂತರದಿಂದ ಗೆಲುವಾಗ್ತಿದೆ ಕ್ಷೇತ್ರದ ಜನರು ಒಬ್ಬ ಯುವಕನ ಮೇಲೆ ಪ್ರೀತಿ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ ಎಂದು ದಕ್ಷಿಣ ಕ್ಷೇತ್ರದ ಜನರಿಗೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಧನ್ಯವಾದಗಳನ್ನ ತಿಳಿಸಿದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

01:01 PM (IST) Jun 04

ಬಿಜೆಪಿಯ ಅಣ್ಣಾಮಲೈಗೆ ಕೊಯಮತ್ತೂರಿನಲ್ಲಿ ಡಿಎಂಕೆಯ ಗಣಪತಿ ವಿರುದ್ಧ ಸೋಲು

ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವ ವಿಶ್ವಾಸ ಹೊಂದಿದ್ದ ಬಿಜೆಪಿಗೆ ಮುಖಭಂಗವಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಡಿಎಂಕೆ ಅಭ್ಯರ್ಥಿ ಗಣಪತಿ ವಿರುದ್ಧ 17 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. 

12:30 PM (IST) Jun 04

ಬಾರಾಮತಿ ಲೋಕಸಭಾ ಕ್ಷೇತ್ರ: ಅತ್ತಿಗೆಯ ಹಿಂದಿಕ್ಕಿ ಗೆಲುವಿನತ್ತ ಸುಪ್ರಿಯಾ ಸುಲೆ ದಾಪುಗಾಲು

ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಅತ್ತಿಗೆ ನಾದಿನಿಯರ ಸ್ಪರ್ದೆಯಿಂದ ತೀವ್ರ ಕುತೂಹಲ ಕೆರಳಿಸಿತ್ತು. ಈ ಕ್ಷೇತ್ರದಲ್ಲಿ ಈಗ ಅತ್ತಿಗೆ ಹಾಗೂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಹಿಂದಿಕ್ಕಿ ಸುಪ್ರೀಯಾ ಸುಲೆ ಮುನ್ನಡೆ ಸಾಧಿಸಿದ್ದಾರೆ

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

12:02 PM (IST) Jun 04

ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಸರಳ ಬಹುಮತ

ನಿಚ್ಛಳ ಬಹುಮಂತ ಅದರಲ್ಲಿಯೂ 400 ಕ್ಷೇತ್ರಗಳ ಗೆಲುವಿನೊಂದಿಗೆ ಎನ್‌ಡಿಎ ಮೈತ್ರಿಕೂಟ ಸರಕಾರ ರಚಿಸಲಿದೆ ಎಂಬ ನಂಬಿಕೆ ಸುಳ್ಳಾಗುತ್ತಿದ್ದು, ಸರಳ ಬಹುಮತದೊಂದಿಗೆ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಇನ್ನೂ 300 ಕ್ಷೇತ್ರಗಳನ್ನೂ ಗೆಲ್ಲದ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಉತ್ತರ ಪ್ರದೇಶದಲ್ಲಿಯೇ ಮತದಾರ ಕೈ ಕೊಟ್ಟಿದ್ದು ದೊಡ್ಡ ಪೆಟ್ಟು ಬಿದ್ದಂತಾಗಿದೆ. 

12:02 PM (IST) Jun 04

ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಸರಳ ಬಹುಮತ

ನಿಚ್ಛಳ ಬಹುಮಂತ ಅದರಲ್ಲಿಯೂ 400 ಕ್ಷೇತ್ರಗಳ ಗೆಲುವಿನೊಂದಿಗೆ ಎನ್‌ಡಿಎ ಮೈತ್ರಿಕೂಟ ಸರಕಾರ ರಚಿಸಲಿದೆ ಎಂಬ ನಂಬಿಕೆ ಸುಳ್ಳಾಗುತ್ತಿದ್ದು, ಸರಳ ಬಹುಮತದೊಂದಿಗೆ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಇನ್ನೂ 300 ಕ್ಷೇತ್ರಗಳನ್ನೂ ಗೆಲ್ಲದ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಉತ್ತರ ಪ್ರದೇಶದಲ್ಲಿಯೇ ಮತದಾರ ಕೈ ಕೊಟ್ಟಿದ್ದು ದೊಡ್ಡ ಪೆಟ್ಟು ಬಿದ್ದಂತಾಗಿದೆ. 

11:31 AM (IST) Jun 04

Exit Poll ಹೇಳಿದ್ದೆಲ್ಲಾ ಸುಳ್ಳಾಗುತ್ತಾ?

ಬಹುತೇಕ ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಜಿಎ 360 ಕ್ಷೇತ್ರಗಳನ್ನು ಗೆಲ್ಲುವುದಾಗಿ ಹೇಳಿತ್ತು, ಇದೀಗ ಎನ್‌ಡಿಎ ಮೈತ್ರಿಕೂಟ ಸರಕಾರ ರಚಿಸೋದು ಬಹುತೇಕ ಖಚಿತವಾದರೂ, ಈ ನಂಬರ್ ತಲುಪುತ್ತಾ ಎನ್ನೋದು ಅನುಮಾನ ವ್ಯಕ್ತವಾಗುತ್ತಿದೆ. 

Scroll to load tweet…
11:28 AM (IST) Jun 04

ಆಂಧ್ರ ಪ್ರದೇಶ: ಬಿಜೆಪಿ-ಟಿಡಿಪಿ ಸರಕಾರ ರಚಿಸೋದು ಬಹುತೇಕ ಖಚಿತ!

ಆಂಧ್ರ ಪ್ರದೇಶ ವಿಧಾನ ಸುಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು. ಟಿಡಿಪಿ-ಬಿಜೆಪಿ ಮೈತ್ರಿ ಕೂಟ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ. 

Scroll to load tweet…
10:52 AM (IST) Jun 04

ಮಾಜಿ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಜೌಹಾಣ್‌ಗೆ 1.8 ಲಕ್ಷ ಮತಗಳ ಮುನ್ನಡೆ

 ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ, ವಿದಿಶಾ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಿಂಗ್ ಚೌಹಾಣ್ ಅವರು 1,88,350 ಮತಗಳ ಮುನ್ನಡೆ ಕಾಯ್ದು ಕೊಂಡಿದ್ದು, ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಆಗೋ ಲಕ್ಷಣಗಳು ಕಾಣಿಸುತ್ತಿವೆ.

Scroll to load tweet…
10:42 AM (IST) Jun 04

ಕಂಗನಾಗೆ 30 ಸಾವಿರ ಮತಗಳ ಮುನ್ನಡೆ, ದೇವರಿಗೆ ಪೂಜಿಸಿದ ನಟಿ

ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸಿರುವ ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಸುಮಾರು 30 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದು, ಮನೆ ದೇವರಿಗೆ ಪೂಜಿಸಿದರು. 

Scroll to load tweet…