Asianet Suvarna News Asianet Suvarna News

ಬಿಲ್ಕಿಸ್ ಬಾನೋ ಅತ್ಯಾಚಾರಿಗಳನ್ನು ಸನ್ಮಾನಿಸುವುದು ಹಿಂದೂ ಸಂಸ್ಕೃತಿಯೇ..?: ಶಿವಸೇನೆ

ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳು ಬಿಡುಗಡೆಯಾಗಿದ್ದರೂ ಪ್ರಧಾನಿ ಮೋದಿ, ಅಮಿತ್ ಶಾ ಮೌನ ವಹಿಸಿರುವುದು ಏಕೆ..? ಅವರು ಮುಸ್ಲಿಂ ಎಂಬ ಕಾರಣಕ್ಕಾ ಎಂದು ಸಾಮ್ನಾ ಪ್ರಶ್ನಿಸಿದೆ. 

is felicitating bilkis bano rapists hindu cultuure asks shivsena ash
Author
First Published Aug 28, 2022, 3:54 PM IST

ಬಿಲ್ಕಿಸ್ ಬಾನೋ ಪ್ರಕರಣದಲ್ಲಿ 11 ಅಪರಾಧಿಗಳ ಬಿಡುಗಡೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೌನವವಾಗಿರುವುದನ್ನು ಶಿವಸೇನೆ ಭಾನುವಾರ ಪ್ರಶ್ನಿಸಿದೆ ಮತ್ತು ಅತ್ಯಾಚಾರಿಗಳಿಗೆ ಗೌರವ ಸಲ್ಲಿಸುವುದು "ಹಿಂದೂ ಸಂಸ್ಕೃತಿ" ಎಂದು ಕೇಳಿದೆ. 'ಕಡಕ್ನಾಥ್ ಮುಂಬೈಕರ್' ಬೈಲೈನ್ ಅನ್ನು ಹೊತ್ತಿರುವ ಸೇನಾ ಮುಖವಾಣಿ ಸಾಮ್ನಾದ ರೋಖ್‌ಥೋಕ್ ಅಂಕಣದಲ್ಲಿ, ಈ ಕಮೆಂಟ್‌ಗಳನ್ನು ಮಾಡಲಾಗಿದೆ. ಪ್ರಸ್ತುತ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಮರಾಠಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವುತ್ ಜೈಲಿನಲ್ಲಿದ್ದು, ಅವರ ಬದಲು ಮತ್ತೊಬ್ಬರ ಬೈಲೈನ್‌ ಅನ್ನು ಈ ಲೇಖನ ಹೊಂದಿದೆ.

2002 ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ನಂತರ ಭುಗಿಲೆದ್ದ ಗಲಭೆಯಿಂದ ತಪ್ಪಿಸಿಕೊಳ್ಳುವಾಗ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರಕ್ಕೊಳಗಾದಾಗ 5 ತಿಂಗಳ ಗರ್ಭಿಣಿಯಾಗಿದ್ದರು. 7 ಮಂದಿ ಸತ್ತವರಲ್ಲಿ ಆಕೆಯ 3 ವರ್ಷದ ಮಗಳೂ ಸೇರಿದ್ದಳು. ಗುಜರಾತ್ ಸರ್ಕಾರವು ತನ್ನ ಉಪಶಮನ ನೀತಿಯ ಅಡಿಯಲ್ಲಿ ಬಿಡುಗಡೆಗೆ ಅನುಮತಿ ನೀಡಿದ ನಂತರ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಪುರುಷರು ಆಗಸ್ಟ್ 15 ರಂದು ಗೋಧ್ರಾ ಉಪ-ಜೈಲಿನಿಂದ ಹೊರನಡೆದರು. ಅವರು 15 ವರ್ಷಗಳಿಗೂ ಹೆಚ್ಚು ಜೈಲು ವಾಸವನ್ನು ಪೂರ್ಣಗೊಳಿಸಿದ್ದರು. ಅಲ್ಲದೆ, ಈ ಅಪರಾಧಿಗಳು ಬಿಡುಗಡೆಯಾದ ನಂತರ ಅವರನ್ನು ಸ್ಥಳೀಯ ನಾಯಕರು ಅಭಿನಂದಿಸಿದ್ದಾರೆ ಎಂದು ಕೆಲವು ವರದಿಗಳು ಹೇಳಿಕೊಂಡಿವೆ.

ಇದನ್ನು ಓದಿ: ಬಿಲ್ಕಿಸ್‌ ಬಾನು ಅತ್ಯಾಚಾರಿಗಳ ಬಿಡುಗಡೆ ಖಂಡಿಸಿ ರಾಜ್ಯದಲ್ಲಿ ಸಂಘಟನೆಗಳ ಧರಣಿ

ಪ್ರಧಾನಿ ಮೋದಿ ಅವರು ಬೋಧಿಸುವುದನ್ನು ಸ್ವತ: ಪಾಲಿಸುವುದಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳುತ್ತಾರೆ ಎಂದೂ ಸಾಮ್ನಾ ಅಂಕಣದಲ್ಲಿ ಹೇಳಲಾಗಿದ್ದು, "ಬಿಲ್ಕಿಸ್ ಪ್ರಕರಣವು ಶರದ್‌ ಪವಾರ್ ಹೇಳಿಕೆ ಸರಿ ಎಂದು ಸಾಬೀತುಪಡಿಸಿದೆ" ಎಂದು ಅದು ಹೇಳಿದೆ. ಪ್ರಧಾನಿ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವಾಗ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು ಆಶ್ಚರ್ಯಕರವಾಗಿದೆ ಎಂದು ಮರಾಠಿ ಪ್ರಕಟಣೆ ತಿಳಿಸಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಏಕೆ ಮೌನವಾಗಿದ್ದಾರೆ? ಎಂದೂ ಲೇಖನ ಪ್ರಶ್ನಿಸಿದ್ದು, "ಅತ್ಯಾಚಾರಿಗಳನ್ನು ಸನ್ಮಾನಿಸುವುದು ಹಿಂದೂ ಸಂಸ್ಕೃತಿಯೇ?" ಎಂದು ತಿಳಿಯಲು ಸೇನೆ ಯತ್ನಿಸಿತು.

ಬಿಲ್ಕಿಸ್ ಬಾನೋ ಮುಸ್ಲಿಂ ಎಂಬ ಕಾರಣಕ್ಕೆ ಆಕೆಯ ಮೇಲಿನ ಅಪರಾಧವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದೂ ಅದು ಹೇಳಿದೆ. ಹಾಗೂ, "ಇದು ಹಿಂದೂ-ಮುಸ್ಲಿಂ ಸಮಸ್ಯೆಯಲ್ಲ, ಆದರೆ ಹಿಂದುತ್ವದ ಆತ್ಮ ಮತ್ತು ನಮ್ಮ ಶ್ರೇಷ್ಠ ಸಂಸ್ಕೃತಿಯ ಪ್ರತಿಷ್ಠೆಯ ವಿಷಯವಾಗಿದೆ" ಎಂದು ಸೇನೆ ಹೇಳಿದೆ. "ಪ್ರಧಾನಿ ಗುಜರಾತ್‌ಗೆ ಭೇಟಿ ನೀಡಿದಾಗ, ಅವರು ಬಿಲ್ಕಿಸ್ ಬಾನೋ ಅವರನ್ನು ಭೇಟಿ ಮಾಡಬೇಕು ಮತ್ತು ತಮ್ಮ ಬೆಂಬಲವನ್ನು ನೀಡಬೇಕು" ಎಂದು ಸೇನಾ ಮುಖವಾಣಿ ಸಾಮ್ನಾ ಹೇಳಿದೆ.

ಇದನ್ನೂ ಓದಿ: ಬಿಲ್ಕಿಸ್‌ ಬಾನು ಕೇಸ್‌ ಆರೋಪಿಗಳ ಬಿಡುಗಡೆಗೆ ಬಿಜೆಪಿ ಪಕ್ಷದ ನಾಯಕರಿಂದಲೇ ವಿರೋಧ!

ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಗುಜರಾತ್ ಸರ್ಕಾರ 11 ಅಪರಾಧಿಗಳ ಬಿಡುಗಡೆಯನ್ನು ವಿರೋಧಿಸಿ ದೇಶಾದ್ಯಂತ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಹಾಗೂ, ಸ್ವತ: ಬಿಜೆಪಿ ಸೇರಿ ಹಲವು ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದ್ದು, ತೀರ್ಪು ಯಾವಾಗ ಬರುತ್ತದೋ ಕಾದುನೋಡಬೇಕಿದೆ. 

Follow Us:
Download App:
  • android
  • ios