11:35 PM (IST) Aug 10

India News Liveಕಿರುತೆರೆಗೆ ಬಂದ ಮಾಧುರಿ ದೀಕ್ಷಿತ್ - ಜನಪ್ರಿಯ ಕ್ವಿಜ್ ಶೋಗೆ ನಿರೂಪಕಿಯಾದ 'ಧಕ್ ಧಕ್' ಬೆಡಗಿ

ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರು ಮರಾಠಿ ಕಿರುತೆರೆಯಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಸೋನಿ ಮರಾಠಿ ಮತ್ತು ಸೋನಿ ಲಿವ್ ವಾಹಿನಿಗಳು, ಜನಪ್ರಿಯ ಕ್ವಿಜ್ ಶೋ..

Read Full Story
10:49 PM (IST) Aug 10

India News Liveರಾತ್ರೋರಾತ್ರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ, ಆಗಿದ್ದೇನು?

ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿಗೆ ಅಂಚೆ ಮೂಲಕ ಜೀವ ಬೆದರಿಕೆ ಪತ್ರಗಳು ಬಂದಿವೆ. ಆರಂಭದಲ್ಲಿ ನಿರ್ಲಕ್ಷಿಸಿದ್ದರೂ, ಬೆದರಿಕೆಗಳು ನಿರಂತರವಾದಾಗ ಕುಟುಂಬವು ಪೊಲೀಸ್ ದೂರು ದಾಖಲಿಸಿದೆ.

Read Full Story
10:44 PM (IST) Aug 10

India News Liveಖುಷ್ಬೂಗೆ ಏನಾಯ್ತು? 32 ಕೆಜಿ ತೂಕ ಇಳಿಸಿ ಸಂಪೂರ್ಣ ಬದಲಾಗಿದ್ದಾರೆ ರಣಧೀರ ಚೆಲುವೆ!

ನಟಿ ಖುಷ್ಬೂ ಸುಂದರ್‌ ಎಂದರೆ ಕನ್ನಡ, ತಮಿಳು ಹಾಗೂ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದ ಅವರು ಇದೀಗ ತಮ್ಮ ಸೆಕೆಂಡ್‌ ಇನ್ನಿಂಗ್ಸ್‌ನಲ್ಲೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Read Full Story
10:40 PM (IST) Aug 10

India News Liveಬೆಂಗಳೂರಿನಲ್ಲಿ ಇತ್ತು 40 ಎಕರೆ ಬಂಜರು ಭೂಮಿ.. ಜೈ ಶಾ, VVS ಜೋಡೆತ್ತುಗಳಾಗಿ 'ಕ್ರಿಕೆಟ್ ಅರಮನೆ' ಕಟ್ಟಿದ ರೋಚಕ ಸ್ಟೋರಿ

ಬೆಂಗಳೂರಿನ 40 ಎಕರೆ ಬಂಜರು ಭೂಮಿಯನ್ನು ವಿಶ್ವದರ್ಜೆಯ 'ಸೆಂಟರ್ ಆಫ್ ಎಕ್ಸಲೆನ್ಸ್' ಆಗಿ ಪರಿವರ್ತಿಸಿದ ಜೈ ಶಾ ಮತ್ತು ವಿವಿಎಸ್ ಲಕ್ಷ್ಮಣ್ ಅವರ ದೃಢ ಸಂಕಲ್ಪಕ್ಕೆ ಈಗ ಜಯ ಸಿಕ್ಕಿದೆ. ಈ ಬೃಹತ್ ಯೋಜನೆಯನ್ನು ಕೇವಲ ಎರಡು ವರ್ಷಗಳಲ್ಲಿ ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವ ಮೂಲಕ ಭಾರತೀಯ ಕ್ರಿಕೆಟ್ ಮೂಲಸೌಕರ್ಯದಲ್ಲಿ ಹೊಸ ಕ್ರಾಂತಿ ಮಾಡಲಾಗಿದೆ.

Read Full Story
10:05 PM (IST) Aug 10

India News Live‘ಬ್ರೋ ರಿಲ್ಯಾಕ್ಸ್..’ ಯಶಸ್ವಿ ಜೈಸ್ವಾಲ್ ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ನಟಿ ಮೃಣಾಲ್ ಖಡಕ್ ಉತ್ತರ

ನಟಿ ಮೃಣಾಲ್ ಠಾಕೂರ್ ಅವರು, ಟೀಂ ಇಂಡಿಯಾ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಕೊನೆಗೂ ಬಾಯಿ ಬಿಟ್ಟಿದ್ದಾರೆ. ಇತ್ತೀಚೆಗೆ, ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿರುವ ಒಂದೇ ಕೆಫೆಯಿಂದ ಇಬ್ಬರೂ..

Read Full Story
09:48 PM (IST) Aug 10

India News Liveಹಾರ್ದಿಕ್ ಪಾಂಡ್ಯ ಮುಂದಿನ ತಂಡ ಯಾವುದು? ಮುಂಬೈಗೆ ಆಫರ್ ಮೇಲೆ ಆಫರ್ ಕೊಟ್ಟ IPL ಫ್ರಾಂಚೈಸಿಗಳು!

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಲು ಮುಂದಾಗಿದೆ ಎಂಬ ವದಂತಿಗಳು ಹಬ್ಬಿವೆ. ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಹಲವು ಫ್ರಾಂಚೈಸಿಗಳು ಪಾಂಡ್ಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿವೆ.

Read Full Story
09:37 PM (IST) Aug 10

India News LiveEarthquake - 7.4 ತೀವ್ರತೆಗೆ ನಲುಗಿದ ಕೊಲಂಬಿಯಾ.. 20 ಮಂದಿ ಸಾವು, ದೊಡ್ಡ ದುರಂತದ ಆತಂಕ

ದಕ್ಷಿಣ ಅಮೆರಿಕಾದ ದೇಶವಾದ ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಸೋಮವಾರ ಸಂಭವಿಸಿದ ಭೀಕರ ಭೂಕಂಪಕ್ಕೆ ಕನಿಷ್ಠ 20 ಜನರು ಬಲಿಯಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾದ ಈ ಕಂಪನದಿಂದಾಗಿ ಹತ್ತಾರು ಕಟ್ಟಡಗಳು ನೆಲಸಮವಾಗಿದ್ದು ಅವಶೇಷಗಳ ಅಡಿಯಲ್ಲಿ ನೂರಾರು ಜನರು ಸಿಲುಕಿರುವ ಭೀತಿ ಎದುರಾಗಿದೆ.

Read Full Story
08:38 PM (IST) Aug 10

India News Liveಮೇಘಸ್ಫೋಟಕ್ಕೆ ಕೊಚ್ಚಿ ಹೋದ ಭಾರತ-ಚೀನಾ ಗಡಿ ಸಮೀಪದ ಸೇನಾ ಬ್ರಿಜ್‌, ಎದೆನಡುಗುವ ದೃಶ್ಯ ಸೆರೆ!

ಉತ್ತರಾಖಂಡದ ಚಮೋಲಿ ಜಿಲ್ಲೆಯ ಲತಾ ಗ್ರಾಮದ ಬಳಿ ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ, ಭಾರತ-ಚೀನಾ ಗಡಿಗೆ ಸಂಪರ್ಕ ಕಲ್ಪಿಸುತ್ತಿದ್ದ ಬಿಆರ್‌ಒ ನಿರ್ಮಿತ ಪ್ರಮುಖ ಸೇತುವೆಯೊಂದು ಪ್ರವಾಹದಲ್ಲಿ ಕೊಚ್ಚಿಹೋಗಿದೆ.

Read Full Story
08:10 PM (IST) Aug 10

India News Livewow! 5 ವರ್ಷದಲ್ಲಿ 1 ಲಕ್ಷಕ್ಕೆ 11.5 ಲಕ್ಷ ರೂಪಾಯಿ ಸಿಕ್ತು.. ಹಣ ಮಾಡೋದನ್ನ ಹೀಗೆ ಕಲೀಬೇಕು!

ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದರೆ ಒಮ್ಮೆ ಸರಿಯಾದ ಸ್ಟಾಕ್ ಸಿಕ್ಕರೆ ಹೂಡಿಕೆದಾರರು ಕೋಟ್ಯಧಿಪತಿಗಳಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.

Read Full Story
08:05 PM (IST) Aug 10

India News LiveUPI ಶುಲ್ಕದ ಕುರಿತ ಗೊಂದಲಕ್ಕೆ ಕ್ಲಿಯರ್‌ ಕಟ್‌ ಉತ್ತರ ನೀಡಿದ ಪೇಮೆಂಟ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾ

ಯುಪಿಐ ಪಾವತಿಗಳು ಗ್ರಾಹಕರಿಗೆ ಮತ್ತು ಸಣ್ಣ ವರ್ತಕರಿಗೆ ಸಂಪೂರ್ಣ ಉಚಿತವಾಗಿ ಮುಂದುವರಿಯಲಿವೆ ಎಂದು ಪೇಮೆಂಟ್ಸ್ ಕೌನ್ಸಿಲ್‌ ಆಫ್‌ ಇಂಡಿಯಾ ಸ್ಪಷ್ಟಪಡಿಸಿದೆ. ಪ್ರಸ್ತುತ ಚರ್ಚೆಯು ವ್ಯವಸ್ಥೆಯ ಸುಸ್ಥಿರತೆಯ ಕುರಿತಾಗಿದೆ ಎಂದಿದೆ.

Read Full Story
07:39 PM (IST) Aug 10

India News Liveಟ್ರೆಂಡಿಂಗ್‌ನಲ್ಲಿದೆ ಕಾರ್ಗಿಲ್‌ ಯುದ್ಧ ಆಧಾರಿತ ವೆಬ್ ಸೀರೀಸ್! - 6 ಎಪಿಸೋಡ್‌ಗಳ ಥ್ರಿಲ್ಲರ್‌ಗೆ ಆನಂದ್‌ ಮಹೀಂದ್ರಾ ಫಿದಾ

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಟ್ರೆಂಡಿಂಗ್‌ನಲ್ಲಿರುವ 'ಆಪರೇಷನ್ ಸಫೇದ್ ಸಾಗರ್' ವೆಬ್ ಸೀರೀಸ್, 1999ರ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ವಾಯುಪಡೆಯ ಅಜ್ಞಾತ ಸಾಹಸಗಾಥೆಯನ್ನು ಕಟ್ಟಿಕೊಡುತ್ತದೆ.

Read Full Story
07:15 PM (IST) Aug 10

India News Live6, 6, 6, 6, 6, 6! ಸತತ 6 ಎಸೆತಗಳಲ್ಲಿ 6 ಸಿಕ್ಸರ್ - ಏಕದಿನ ಕ್ರಿಕೆಟ್‌ನಲ್ಲಿ ಹೊಸ ಚರಿತ್ರೆ..!

ಹ್ಯಾಂಪ್‌ಶೈರ್ ತಂಡದ ಯುವ ಆಟಗಾರ ಟೋಬಿ ಆಲ್ಬರ್ಟ್, ಎರಡು ಓವರ್‌ಗಳಲ್ಲಿ ತಾವು ಎದುರಿಸಿದ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಹೊಸ ಸಂಚಲನ ಮೂಡಿಸಿದ್ದಾರೆ. ಈ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಅವರು 37 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದರು, ಮತ್ತು ಅವರ ತಂಡ ಸಸೆಕ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು.
Read Full Story
07:01 PM (IST) Aug 10

India News Liveಮಗಳ PPF ಅಕೌಂಟ್‌ನಿಂದ 8 ಲಕ್ಷ ಹಣ ತೆಗೆದ ಅಪ್ಪ, ಕೋರ್ಟ್‌ ಮೆಟ್ಟಿಲೇರಿ ಬಡ್ಡಿ ಸಮೇತ ವಾಪಾಸ್‌ ಪಡೆದ ಪುತ್ರಿ!

ಮಗಳ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯಿಂದ ಹಣ ಹಿಂಪಡೆದು, ಅದನ್ನು ಜೀವನಾಂಶಕ್ಕೆ ಸರಿದೂಗಿಸಲು ಯತ್ನಿಸಿದ ತಂದೆಗೆ ದೆಹಲಿ ಹೈಕೋರ್ಟ್ ತಪರಾಕಿ ನೀಡಿದೆ. ಮಗಳ ಹೂಡಿಕೆಯ ಹಣಕ್ಕೆ ಆಕೆಯೇ ಸಂಪೂರ್ಣ ಹಕ್ಕುದಾರಳು ಮತ್ತು ಜೀವನಾಂಶ ನೀಡುವುದು ತಂದೆಯ ಪ್ರತ್ಯೇಕ ಕಾನೂನುಬದ್ಧ ಜವಾಬ್ದಾರಿ ಎಂದಿದೆ.

Read Full Story
06:29 PM (IST) Aug 10

India News Liveತಪ್ಪಾಗಿದೆ ಕ್ಷಮೆ ಇರಲಿ ಎಂದ ಬಿಗ್‌ಬಿ.. ಅಮಿತಾಭ್ 'ನಂಬರ್ ಲೀಕ್' ವಿರುದ್ಧ ಜಂತರ್ ಮಂತರ್ ಪ್ರತಿಭಟನೆ ಎಚ್ಚರಿಕೆ

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಸಂಖ್ಯೆ ನೀಡುವಾಗ ಮಾಡಿದ ಸಣ್ಣ ತಪ್ಪನ್ನು 'ದೊಡ್ಡ ತಪ್ಪು' ಎಂದು ಕರೆದು ಕ್ಷಮೆಯಾಚಿಸಿದ್ದಾರೆ. ಅಭಿಮಾನಿಯೊಬ್ಬರು ಈ ತಪ್ಪನ್ನು ಗಮನಕ್ಕೆ ತಂದ ನಂತರ, ಬಿಗ್ ಬಿ ಕ್ಷಮೆ ಕೇಳಿದ್ದು, ಇದಕ್ಕೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
Read Full Story
05:46 PM (IST) Aug 10

India News Liveಪತಿಯ ಚಿತಾಭಸ್ಮ ಹೊತ್ತು ಜಪಾನ್‌ನಿಂದ ಭಾರತಕ್ಕೆ - ಮಿಯಾಕೋ ಪ್ರೀತಿಯ ಕಥೆ ಕಣ್ಣೀರಾಗಿಸುವಂತಿದೆ!

ಜಪಾನ್‌ ಮೂಲದ ಮಿಯಾಕೋ ಕೆಟ್ಲೆಟ್‌ ತಮ್ಮ ನಿಧನರಾದ ಪತಿ ರಾಬರ್ಟ್‌ ಕೆಟ್ಲೆಟ್‌ ಅವರ ಚಿತಾಭಸ್ಮವನ್ನು ಹೊತ್ತು ಉತ್ತರಾಖಂಡದ ಬಾಗೇಶ್ವರ್‌ಗೆ ಆಗಮಿಸಿದ್ದಾರೆ. ಅಲ್ಲಿಗೆ ತೆರಳಿ ಪತಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

Read Full Story
05:36 PM (IST) Aug 10

India News Liveಕಣ್ಣೆದುರೇ 100 'ಮಕ್ಕಳ' ಮಾರಣಹೋಮ - ನಾವೇ ಬೆಳೆಸಿದ ಮಗುವದು, ಪ್ಲೀಸ್​ ಕೊಲ್ಲಬೇಡಿ ಎಂದ್ರೂ ಕೇಳದ ಅಧಿಕಾರಿಗಳು

ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ, ಹೈ-ವೋಲ್ಟೇಜ್ ವಿದ್ಯುತ್ ಯೋಜನೆಗಾಗಿ ದಶಕದಿಂದ ಪೋಷಿಸಿದ್ದ 100ಕ್ಕೂ ಹೆಚ್ಚು ಮರಗಳನ್ನು ಕಡಿದಾಗ ಮಹಿಳೆಯೊಬ್ಬರು ಮರಗಳನ್ನು ಅಪ್ಪಿ ಅತ್ತಿದ್ದಾರೆ. ಮಕ್ಕಳಂತೆ ಸಾಕಿದ್ದ ಮರಗಳನ್ನು ಕಡಿಯದಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ, ಪೊಲೀಸರ ಸಹಾಯದಿಂದ ಮರಗಳನ್ನು ಕಡಿಯಲಾಗಿದ್ದು, ಈ ಘಟನೆಯು ಅಭಿವೃದ್ಧಿ ಮತ್ತು ರೈತರ ಸಂಕಟದ ನಡುವಿನ ಸಂಘರ್ಷವನ್ನು ಎತ್ತಿ ತೋರಿಸುತ್ತದೆ.
Read Full Story
05:35 PM (IST) Aug 10

India News Live17 ಕೆಜಿ ತೂಕ ಇಳಿಸಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್; ಸರ್ಫರಾಜ್ ಖಾನ್ ಹೋರಾಟದ ಕಥೆ

ಸತತ ಕಡೆಗಣನೆ ಮತ್ತು ಫಿಟ್ನೆಸ್ ಟೀಕೆಗಳ ನಡುವೆಯೂ ಛಲ ಬಿಡದೆ 17 ಕೆಜಿ ತೂಕ ಇಳಿಸಿಕೊಂಡು ಹೋರಾಡಿದ ಸರ್ಫರಾಜ್ ಖಾನ್, ಅಂತಿಮವಾಗಿ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಗಾಯಗೊಂಡ ಸಾಯಿ ಸುದರ್ಶನ್ ಬದಲಿಗೆ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದು, ಸ್ಪಿನ್ ಪಿಚ್‌ಗಳಲ್ಲಿ ಅವರ ಆಟವು ತಂಡಕ್ಕೆ ನಿರ್ಣಾಯಕವಾಗಲಿದೆ.
Read Full Story
05:28 PM (IST) Aug 10

India News Liveಪ್ರಧಾನಿ ಮೋದಿಯನ್ನ ಕಾಂಗ್ರೆಸ್ ಹೆಂಗೆಲ್ಲ ಕಿಂಡಾಲ್ ಮಾಡ್ತಿದೆ ನೋಡಿ.. ಏನಿದು Modiya-Bind?

ಸಂಸತ್ತಿನಲ್ಲಿ ಮೋದಿಯಾ-ಬಿಂದ್ ಎಂಬ ಬರವಣಿಗೆಯಿರುವ ಕನ್ನಡಕ ಧರಿಸಿದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ, ಮೋದಿ ಸರ್ಕಾರ ಮತ್ತು ಅವರ ಬೆಂಬಲಿಗರನ್ನು ವ್ಯಂಗ್ಯವಾಗಿ ಕುಟುಕಿದರು. ಕಣ್ಣಿನ ಪೊರೆ (ಮೋಟಿಯಾಬಿಂದ್) ಎಂಬ ಪದದ ಮೇಲೆ ಶಬ್ದ ಚಮತ್ಕಾರ ಮಾಡಿದ ಅವರು, ಭ್ರಷ್ಟಾಚಾರ ಮತ್ತು ದೇಶದ ಸಮಸ್ಯೆಗಳು ಕಾಣಿಸದ 'ಅಂಧಭಕ್ತರಿಗಾಗಿ' ಈ ಕನ್ನಡಕ ಎಂದು ಲೇವಡಿ ಮಾಡಿದರು.

Read Full Story
05:23 PM (IST) Aug 10

India News Liveಲೀಟರ್‌ಗೆ 10 ರೂಪಾಯಿಯಂತೆ ಗೋಮೂತ್ರ ಖರೀದಿಸಲು ಮುಂದಾದ ಸರ್ಕಾರ, ರೈತ ಫುಲ್‌ಖುಷ್‌!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪ್ರತಿ ಲೀಟರ್‌ಗೆ 10 ರೂಪಾಯಿ ದರದಲ್ಲಿ ಗೋಮೂತ್ರ ಖರೀದಿಸುವ ಪ್ರಾಯೋಗಿಕ ಯೋಜನೆ ಆರಂಭವಾಗಿದೆ. ಈ ಯೋಜನೆಯಡಿ ಸಂಗ್ರಹಿಸಿದ ಗೋಮೂತ್ರದಿಂದ ಜೈವಿಕ ಔಷಧ ತಯಾರಿಸಲಾಗುತ್ತದೆ.

Read Full Story
05:20 PM (IST) Aug 10

India News Liveಹತ್ತಿಯಷ್ಟು ಹಗುರವಾದ, ದೈತ್ಯ ಗುರುಗ್ರಹದಷ್ಟೇ ದೊಡ್ಡದಾಗಿ ಬ್ರಹ್ಮಾಂಡದ ವಿಚಿತ್ರ 'ಸೂಪರ್ ಪಫ್' ಗ್ರಹಗಳ ಆವಿಷ್ಕಾರ!

ಖಗೋಳಶಾಸ್ತ್ರಜ್ಞರು ಭೂಮಿಯಿಂದ 1,113 ಜ್ಯೋತಿರ್ವರ್ಷಗಳ ದೂರದಲ್ಲಿ ಎರಡು ವಿಶಿಷ್ಟ 'ಸೂಪರ್ ಪಫ್' ಗ್ರಹಗಳನ್ನು ಪತ್ತೆಹಚ್ಚಿದ್ದಾರೆ. ಗುರುಗ್ರಹದಷ್ಟು ದೊಡ್ಡದಾಗಿದ್ದರೂ, ಈ ಗ್ರಹಗಳು ಹತ್ತಿ ಕ್ಯಾಂಡಿಗಿಂತಲೂ ಹಗುರವಾದ ದ್ರವ್ಯರಾಶಿ ಮತ್ತು ಸಾಂದ್ರತೆಯನ್ನು ಹೊಂದಿದ್ದು, ಗ್ರಹಗಳ ರಚನೆಯ ಬಗ್ಗೆ ಹೊಸ ಕುತೂಹಲ ಮೂಡಿಸಿವೆ.
Read Full Story