National News Live: ಎಸ್ಸಿ, ಎಸ್ಟಿಗೆ ಕೆನೆಪದರ ನೀತಿ ಅನ್ವಯವಿಲ್ಲ - ಕೇಂದ್ರ

ಮುಂಬೈ (ಆ.7): 'ಜೆನ್ ಝೀಗಳು ಕೂಡಾ ನಮ್ಮವರೇ. ಅವರು ತಮ್ಮ ಕಳವಳಗಳ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆಂದರೆ ಅದನ್ನು ಖಂಡಿತಾ ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ಜೆನ್ ಝೀಗಳು ಪ್ರತಿಭಟನೆ ನಡೆಸುತ್ತಿದ್ದಾರೆಂದ ಮಾತ್ರಕ್ಕೆ ಅವರು ದೇಶಾ ವಿರೋಧಿಗಳಾಗಲ್ಲ, ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಂವಾದದ ಒಂದು ನ್ಯಾಯಸಮ್ಮತ ರೂಪ' ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ನೀಟ್ ಪರೀಕ್ಷಾ ಅಕ್ರಮ ವಿರೋಧಿಸಿ ಇತ್ತೀಚೆ ದೆಹಲಿಯಲ್ಲಿ ನಡೆದ ಜೆನ್ ಝೀ ಪ್ರತಿಭಟನೆ, ಅದಕ್ಕೆ ದೇಶವ್ಯಾಪಿ ವ್ಯಕ್ತವಾದಪರ-ವಿರೋಧ ಅಭಿಪ್ರಾಯಗಳು ಬೆನ್ನಲ್ಲೇ ಭಾಗವತ್ ವ್ಯಕ್ತಪಡಿಸಿದ ಈ ಅಭಿಪ್ರಾಯ ಭಾರೀ ಮಹತ್ವ ಪಡೆದುಕೊಂಡಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 7th August: ಎಸ್ಸಿ, ಎಸ್ಟಿಗೆ ಕೆನೆಪದರ ನೀತಿ ಅನ್ವಯವಿಲ್ಲ - ಕೇಂದ್ರ
India News Live 7th August: ಚಂದ್ರನ ಮೇಲೆ ಅಪ್ಪಳಿಸಿದ ಸ್ಪೇಸ್ ಎಕ್ಸ್ ರಾಕೆಟ್ - 60 ಅಡಿ ಅಗಲ ಕುಳಿ ನಿರ್ಮಾಣ
ಒಂದು ವರ್ಷದಿಂದ ಬಾಹ್ಯಾಕಾಶದಲ್ಲಿ ತೇಲುತ್ತಿದ್ದ ಸ್ಪೇಸ್ಎಕ್ಸ್ನ ಫಾಲ್ಕನ್-9 ರಾಕೆಟ್ನ ಭಾಗವೊಂದು ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಅಪ್ಪಳಿಸಿದೆ. ಗಂಟೆಗೆ 5,400 ಮೈಲಿ ವೇಗದಲ್ಲಿ ಅಪ್ಪಳಿಸಿದ ಈ ರಾಕೆಟ್, ಚಂದ್ರನ ಮೇಲೆ ದೊಡ್ಡ ಕುಳಿಯನ್ನು ಸೃಷ್ಟಿಸಿರಬಹುದೆಂದು ಅಂದಾಜಿಸಲಾಗಿದೆ.
India News Live 7th August: ಕಳೆದ ವರ್ಷ ಮೋದಿ ವಿದೇಶ ಪ್ರವಾಸಕ್ಕೆ ₹180 ಕೋಟಿ ವೆಚ್ಚ
India News Live 7th August: ಪ್ರಧಾನಿ ಮೋದಿ ಮತ್ತೊಂದು ವಿಡಿಯೋ ; ಈ ಬಾರಿ ಮನವಿ ಮಾಡಿದ್ದು ಏನೆಂದರೆ..
ಪ್ರಧಾನಿ ನರೇಂದ್ರ ಮೋದಿಯವರು, ಫ್ರೆಂಡ್ಶಿಪ್ ಡೇಯಷ್ಟೇ ಉತ್ಸಾಹದಿಂದ ಆಗಸ್ಟ್ 7ರ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲು ಯುವಜನರಿಗೆ ಕರೆ ನೀಡಿದ್ದಾರೆ. ವಿಡಿಯೋದಲ್ಲಿ ಏನೆಲ್ಲ ಮನವಿ ಮಾಡಿದರು ಅನ್ನೋ ವಿವರ ಇಲ್ಲಿದೆ..
India News Live 7th August: ಮೀಸಲಾತಿ ಇರುವುದು ದಮನಿತರ ಸಬಲೀಕರಣಕ್ಕೆ, ಅದು ಶಾಶ್ವತವಲ್ಲ - ಮೋಹನ್ ಭಾಗ್ವತ್
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು, ಮೀಸಲಾತಿ ಶಾಶ್ವತವಲ್ಲ ಮತ್ತು ಪ್ರಗತಿ ಸಾಧಿಸಿದವರು ಇತರರಿಗೆ ಅವಕಾಶ ನೀಡಬೇಕು ಎಂದು ಕರೆ ನೀಡಿದ್ದಾರೆ. ಜೆನ್ ಝೀ ಪ್ರತಿಭಟನೆಗಳನ್ನು ದೇಶವಿರೋಧಿ ಎಂದು ಪರಿಗಣಿಸಬಾರದು ಎಂದಿದ್ದಾರೆ.
India News Live 7th August: ಪರೀಕ್ಷಾ ಅಕ್ರಮ: ಪ್ರಧಾನ್ ರೀತಿಯಲ್ಲೇ ಜಾರ್ಖಂಡ್ ಸಿಎಂ ಸೊರೇನ್ ರಿಸೈನ್ಗೆ ಪಟ್ಟು!
ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ ಜಾರ್ಖಂಡ್ನಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಹೇಮಂತ್ ಸೊರೇನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರೊಂದಿಗೆ ಸರ್ಕಾರ ಮಾತುಕತೆಗೆ ಮುಂದಾಗಿದೆ.