08:54 AM (IST) Aug 01

India News Live 1st August: ಕಾಮನ್‌ವೆಲ್ತ್ ಗೇಮ್ಸ್ - 3 ವರ್ಷದ ಮಗುವಿನ ತಾಯಿ ಸೀಮಾಗೆ ಡಿಸ್ಕಸ್‌ ಥ್ರೋನಲ್ಲಿ ಕಂಚಿನ ಪದಕ

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ ಡಿಸ್ಕಸ್‌ ಎಸೆತದಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿದೆ. ಇದರೊಂದಿಗೆ, ಬಾಕ್ಸಿಂಗ್‌ನಲ್ಲಿ ಐವರು ಭಾರತೀಯ ಬಾಕ್ಸರ್‌ಗಳು ಫೈನಲ್‌ ಪ್ರವೇಶಿಸುವ ಮೂಲಕ ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ.

Read Full Story
08:40 AM (IST) Aug 01

India News Live 1st August: 'ನಾವು ದೇಶವನ್ನು ದೇವರಂತೆ ಪರಿಗಣಿಸಲು ಸಾಧ್ಯವಿಲ್ಲ..' - ವಂದೇ ಮಾತರಂ ಮಸೂದೆಗೆ ಇಸ್ಲಾಮಿಕ್ ಸಂಘಟನೆ ಆಕ್ಷೇಪ

ವಂದೇ ಮಾತರಂಗೆ ಅವಮಾನಿಸುವುದು ಶಿಕ್ಷಾರ್ಹ ಅಪರಾಧ ಈ ಬಗ್ಗೆ ಗುರುವಾರ ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರವಾಗಿ ಟೀಕಿಸಿದೆ. ಈ ಮಸೂದೆ ಧಾರ್ಮಿಕ ಮತ್ತು ಸಾಂವಿಧಾನಿಕ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕರೆದಿದೆ.

Read Full Story
08:30 AM (IST) Aug 01

India News Live 1st August: ಕಾಮನ್‌ವೆಲ್ತ್ ಗೇಮ್ಸ್‌ - ಜುಡೋದಲ್ಲಿ ಭಾರತಕ್ಕೆ ಐತಿಹಾಸಿಕ ಡಬಲ್ ಚಿನ್ನ, 36 ವರ್ಷಗಳ ಐತಿಹಾಸಿಕ ಸಾಧನೆ

ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಜುಡೋ ಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಸ್ಮಿತಾ ದೇ, ಹರ್ಷ್‌ ಸಿಂಗ್‌ ಮತ್ತು ಯಾಮಿನಿ ಮೌರ್ಯ ಚಿನ್ನದ ಪದಕ ಗೆಲ್ಲುವ ಮೂಲಕ ಗೇಮ್ಸ್ ಇತಿಹಾಸದಲ್ಲೇ ದೇಶಕ್ಕೆ ಮೊದಲ ಜುಡೋ ಸ್ವರ್ಣ ತಂದುಕೊಟ್ಟಿದ್ದಾರೆ. ಇದೇ ವೇಳೆ, ವೇಟ್‌ಲಿಫ್ಟರ್ ಲವ್‌ಪ್ರೀತ್‌ ಸಿಂಗ್‌ ಬೆಳ್ಳಿ ಪದಕ ಗೆದ್ದು ದೇಶದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.
Read Full Story
08:26 AM (IST) Aug 01

India News Live 1st August: ಸಿಹಿ ಸುದ್ದಿ ನೀಡಿದ ತೈಲ ಕಂಪನಿಗಳು - ಬೆಂಗಳೂರಿನಲ್ಲಿಇಳಿದ ಸಿಲಿಂಡರ್ ಬೆಲೆ!

ಆಗಸ್ಟ್ 1 ರಿಂದ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹200 ಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ. ಈ ಇಳಿಕೆಯು ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಗಳಿಗೆ ದೊಡ್ಡ ರಿಲೀಫ್ ನೀಡಿದ್ದು, ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲಿದೆ.

Read Full Story
08:12 AM (IST) Aug 01

India News Live 1st August: ಜೆನ್ ಝೀ ಆಯ್ತು, ಈಗ ಜೆನ್‌ ಆಲ್ಫಾಗಳಿಂದಲೂ ಪ್ರತಿಭಟನೆ!

ಜೆನ್‌ ಝೀ ಪ್ರತಿಭಟನೆಗಳ ನಂತರ, ಇದೀಗ ಜೆನ್ ಆಲ್ಫಾ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಮತ್ತು ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕುಡಿಯುವ ನೀರು, ಮತ್ತು ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳಿಗಾಗಿ ಧರಣಿ ನಡೆಸುತ್ತಿದ್ದಾರೆ.

Read Full Story
07:59 AM (IST) Aug 01

India News Live 1st August: ಸಮುದ್ರ ಮಂಥನಕ್ಕೆ ಕೇಂದ್ರ ₹84,084 ಕೋಟಿ ಮಂಜೂರು, 60 ಕೋಟಿ ಮೆಟ್ರಿಕ್‌ ಟನ್ ಹೊಸ ನಿಕ್ಷೇಪ ಪತ್ತೆ ನಿರೀಕ್ಷೆ

ಕೇಂದ್ರ ಸರ್ಕಾರವು 'ಸಮುದ್ರ ಮಂಥನ' ಎಂಬ ಬೃಹತ್ ಯೋಜನೆಯನ್ನು ಘೋಷಿಸಿದೆ. ಇದರ ಮುಖ್ಯ ಉದ್ದೇಶ ಸಮುದ್ರದಾಳದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಪತ್ತೆಹಚ್ಚಿ, ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿ ದೇಶವನ್ನು ಕಚ್ಚಾತೈಲ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿಸುವುದಾಗಿದೆ.
Read Full Story