200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ಗೆ ಹಿನ್ನಡೆಯಾಗಿದೆ. ಸುಕೇಶ್ ಜೊತೆಗಿನ ಸಂಬಂಧ ಮತ್ತು ದುಬಾರಿ ಉಡುಗೊರೆಗಳನ್ನು ಪಡೆದ ಆರೋಪದಲ್ಲಿ ಇಡಿ ವಿಚಾರಣೆ ಎದುರಿಸುತ್ತಿರುವ ಜಾಕ್ವೆಲಿನ್, ಪ್ರಕರಣ ರದ್ದುಗೊಳಿಸುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
- Home
- News
- India News
- India Latest News Live: 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ , ಜಾಕ್ವೆಲಿನ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
India Latest News Live: 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ , ಜಾಕ್ವೆಲಿನ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ನವದೆಹಲಿ: ಕಳೆದೆರಡು ವರ್ಷಗಳಲ್ಲಿ ಭಾರತದ ಪ್ರತಿ ವ್ಯಕ್ತಿ ಮೇಲಿನ ಋಣ ಭಾರ 4.8 ಲಕ್ಷ ರು.ಗೇರಿದೆ. 2023ರ ಮಾರ್ಚ್ನಲ್ಲಿ ಪ್ರತಿ ವ್ಯಕ್ತಿ ಮೇಲೆ ತಲಾ 3.9ಲಕ್ಷ ರು.ನಷ್ಟು ಸಾಲವಿತ್ತು. ಎರಡು ವರ್ಷ ಅಂದರೆ ಮಾರ್ಚ್ 2025ರ ವೇಳೆಗೆ ಇದು ಶೇ.23ರಷ್ಟು ಹೆಚ್ಚಳ ಕಂಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಬಿಡುಗಡೆ ಮಾಡಿದ ವಿತ್ತೀಯ ಸ್ಥಿರತೆ ವರದಿ ಹೇಳಿದೆ.
India Latest News Live 3rd July 2025200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ , ಜಾಕ್ವೆಲಿನ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
India Latest News Live 3rd July 2025ನಿತ್ಯಾನಂದನ ಬಳಿಕ ಖಾಸಗಿ ದ್ವೀಪ ಖರೀದಿಸಿದ ಭಾರತೀಯ ಮೂಲದ ಉದ್ಯಮಿ, ಟೆಕ್ಕಿಗಳಿಗಾಗಿಯೇ ಹೊಸ ದೇಶ ಕಟ್ಟಲು ತೀರ್ಮಾನ!
ಭಾರತೀಯ ಮೂಲದ ಉದ್ಯಮಿ ಬಾಲಾಜಿ ಶ್ರೀನಿವಾಸನ್ ಸಿಂಗಾಪುರದ ಬಳಿ ಖಾಸಗಿ ದ್ವೀಪ ಖರೀದಿಸಿ 'ನೆಟ್ವರ್ಕ್ ಸ್ಟೇಟ್' ಎಂಬ ಟೆಕ್ಕಿಗಳಿಗಾಗಿನ ರಾಷ್ಟ್ರ ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಹೊಂದಿದ್ದಾರೆ.
India Latest News Live 3rd July 2025ಬಲೂಚಿಸ್ತಾನದ ಹಿಂಗ್ಲಾಜ್ ಮಾತಾ ಕಂಡರೆ ಪಾಕಿಸ್ತಾನದ ಸೇನೆಯ ಜಂಘಾಬಲವೇ ಉಡುಗಿ ಹೋಗೋದೇಕೆ?
India Latest News Live 3rd July 2025'ಪಾಕ್ ಡಿಕ್ಷನರಿಯಲ್ಲಿ ಸರೆಂಡರ್ ಅನ್ನೋ ಪದವೇ ಇಲ್ಲ..' ಎಂದ ಭುಟ್ಟೋ..!
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು "ಶರಣಾಗತಿ" ಪದ ಪಾಕಿಸ್ತಾನದ ನಿಘಂಟಿನಲ್ಲಿಲ್ಲ ಎಂಬ ಹೇಳಿಕೆ ನೀಡಿ ಟ್ರೋಲ್ ಆಗಿದ್ದಾರೆ. 1971ರ ಯುದ್ಧದಲ್ಲಿ ಪಾಕಿಸ್ತಾನದ ಸೈನ್ಯ ಭಾರತಕ್ಕೆ ಶರಣಾದ ಘಟನೆಯನ್ನು ನೆನಪಿಸುತ್ತಾ ಜನರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.
India Latest News Live 3rd July 2025ಭಾರತದ ಅತ್ಯಂತ ಸುರಕ್ಷಿತ ಎಲೆಕ್ಟ್ರಿಕ್ ಕಾರುಗಳು; ಕ್ರ್ಯಾಶ್ ಟೆಸ್ಟ್ನಲ್ಲಿ 5 ಸ್ಟಾರ್!
India Latest News Live 3rd July 2025Viral Video - 80ನೇ ವರ್ಷದ ಜನ್ಮದಿನಕ್ಕೆ 10 ಸಾವಿರ ಫೀಟ್ನಿಂದ ಸ್ಕೈಡೈವ್ ಮಾಡಿದ ವೃದ್ಧೆ!
80 ವರ್ಷದ ಮಹಿಳೆ ಡಾ. ಶ್ರದ್ಧಾ ಚೌಹಾಣ್, ಹರಿಯಾಣದಲ್ಲಿ 10,000 ಅಡಿಗಳಿಂದ ಜಿಗಿಯುವ ಮೂಲಕ ಟಂಡೆಮ್ ಸ್ಕೈಡೈವ್ ಪೂರ್ಣಗೊಳಿಸಿದ "ಭಾರತದ ಅತ್ಯಂತ ಹಿರಿಯ ಮಹಿಳೆ" ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
India Latest News Live 3rd July 2025ಐಟಿ ಉದ್ಯೋಗಿಗಳಲ್ಲಿ ಕೋಡಿಂಗ್ ಕೌಶಲ್ಯದ ಕೊರತೆ, ರೆಸ್ಯೂಮ್ ನೋಡಿ ಬೆಂಗಳೂರು ಕಂಪೆನಿ ಸಿಇಒ ಶಾಕ್!
ಬೆಂಗಳೂರಿನ ಸಿಇಒ ಉಮೇಶ್ ಕುಮಾರ್, ಬ್ಯಾಕೆಂಡ್ ಎಂಜಿನಿಯರ್ ಹುದ್ದೆಗೆ ಬಂದ ಅರ್ಜಿಗಳ ಗುಣಮಟ್ಟ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿಗಳು ಮೂಲಭೂತ ಕೋಡಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಲು ವಿಫಲರಾಗುತ್ತಿದ್ದಾರೆ ಮತ್ತು AI-ರಚಿತ ಕೋಡ್ ಅನ್ನು ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
India Latest News Live 3rd July 2025ಎರಡು ದಶಕಗಳಲ್ಲೇ ಗರಿಷ್ಠ ಮಟ್ಟ ಮುಟ್ಟಿದ ಅಕ್ಕಿ ದಾಸ್ತಾನು, ಕೇಂದ್ರ ಸರ್ಕಾರಕ್ಕೆ ಭಾರೀ ಹೊರೆ!
ಕೇಂದ್ರದ ಅಕ್ಕಿ ದಾಸ್ತಾನು 37.48 ಮಿಲಿಯನ್ ಮೆಟ್ರಿಕ್ ಟನ್ ತಲುಪಿದೆ. ಇದು ಸೆಂಟ್ರಲ್ ಪೂಲ್ ಅಕ್ಕಿ ದಾಸ್ತಾನು ಕಳೆದ 20 ವರ್ಷಗಳಲ್ಲೇ ಗರಿಷ್ಠ ಮಟ್ಟವಾಗಿದ್ದು, ಇದು ಬಫರ್ನ ಮೂರು ಪಟ್ಟು ಹೆಚ್ಚಾಗಿದೆ.
India Latest News Live 3rd July 2025ಭೂಮಿಯ ಆಹಾರದಾಚೆ - ಬಾಹ್ಯಾಕಾಶದ ಜೀರ್ಣಕ್ರಿಯೆ ರಹಸ್ಯ ಅನಾವರಣಗೊಳಿಸಿದ ಶುಭಾಂಶು ಶುಕ್ಲಾ
ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜೀರ್ಣಕ್ರಿಯೆ ಮತ್ತು ಸ್ನಾಯುಗಳ ಆರೋಗ್ಯದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.
India Latest News Live 3rd July 2025RBI ಹೊಸ ನಿಯಮ - ಹೋಮ್ ಲೋನ್, ಉದ್ದಿಮೆ ಸಾಲ ಹೊಂದಿರುವವರಿಗೆ ಬಿಗ್ ನ್ಯೂಸ್!
Reserve Bank of India (Pre-payment Charges on Loans) Directions, 2025: ಪೂರ್ವಪಾವತಿ ಶುಲ್ಕಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ಗಳು ವಿಭಿನ್ನ ಅಭ್ಯಾಸಗಳನ್ನು ಬಳಸುತ್ತಿರುವುದನ್ನು ಗಮನಿಸಿದ ನಂತರ, RBI, ಫೋರ್ಕ್ಲೋಸರ್ ಶುಲ್ಕಗಳ ವಿಧಿಸುವಿಕೆಯನ್ನು ತೆಗೆದುಹಾಕಲು ನಿರ್ಧರಿಸಿದೆ.
India Latest News Live 3rd July 2025ಉಗ್ರರಿಂದ ಮಾಲಿಯಲ್ಲಿ ಮೂವರು ಭಾರತೀಯ ಕಾರ್ಮಿಕರ ಅಪಹರಣ!
ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ಕಾರ್ಮಿಕರನ್ನು ಅಪಹರಿಸಲಾಗಿದೆ. ಅಲ್-ಖೈದಾ ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಭಾರತ ಸರ್ಕಾರ ಕಾರ್ಮಿಕರ ಬಿಡುಗಡೆಗೆ ಪ್ರಯತ್ನಿಸುತ್ತಿದೆ.
India Latest News Live 3rd July 2025ಎರಡು ಅಕ್ಕ-ಪಕ್ಕ, ಮತ್ತೊಂದು 10 ಅಡಿ ದೂರ - ಮಹಾರಾಣಿ ಕಾಲೇಜು ಬಳಿ ಮೂರು ಸಮಾಧಿ
ಮಹಾರಾಣಿ ಬಾಲಕಿಯರ ಪದವಿ ಕಾಲೇಜಿನಲ್ಲಿ ಮೂರು ಸಮಾಧಿಗಳು ಪತ್ತೆಯಾಗಿವೆ. ಈ ಸಮಾಧಿಗಳು ಯಾರದ್ದು ಮತ್ತು ಅವುಗಳನ್ನು ಯಾರು ನಿರ್ಮಿಸಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ.