IDF Hacks Gaza Phones to Stream Netanyahu UN Speech Amid UN Walkout ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾದಲ್ಲಿ ಹಮಾಸ್ ವಿರುದ್ಧದ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ.
- Home
- News
- India News
- India Latest News Live: ಗಾಜಾ ಪ್ರಜೆಗಳ ಮೊಬೈಲ್ ಹ್ಯಾಕ್ ಮಾಡಿ, ನೆತನ್ಯಾಹು ವಿಶ್ವಸಂಸ್ಥೆ ಭಾಷಣ ಪ್ರಸಾರ ಮಾಡಿದ ಇಸ್ರೇಲ್ ಸೇನೆ!
India Latest News Live: ಗಾಜಾ ಪ್ರಜೆಗಳ ಮೊಬೈಲ್ ಹ್ಯಾಕ್ ಮಾಡಿ, ನೆತನ್ಯಾಹು ವಿಶ್ವಸಂಸ್ಥೆ ಭಾಷಣ ಪ್ರಸಾರ ಮಾಡಿದ ಇಸ್ರೇಲ್ ಸೇನೆ!

ನವದೆಹಲಿ: ಕೇವಲ 20 ದಿನಗಳ ಹಿಂದೆ ಉತ್ತರಪ್ರದೇಶದ ಲಖನೌದಲ್ಲಿ ಆರಂಭಗೊಂಡು, ಬುಧವಾರ ಕರ್ನಾಟಕಕ್ಕೂ ವ್ಯಾಪಿಸಿದ್ದ 'ಐ ಲವ್ ಮೊಹಮ್ಮದ್' ವಿವಾದ ಇದೀಗ ಗುಜರಾತ್ ಗೂ ಹಬ್ಬಿದೆ. ಇದರೊಂದಿಗೆ ವಿವಾದ ಭುಗಿಲೆದ್ದ ರಾಜ್ಯಗಳ ಸಂಖ್ಯೆ 6ಕ್ಕೆ ಏರಿದೆ. ಮುಸ್ಲಿಮರ 'ಐ ಲವ್ ಮೊಹಮ್ಮದ್ ಮತ್ತು ಅದಕ್ಕೆ ಪ್ರತಿಯಾಗಿ ಹಿಂದೂಗಳ 'ಐ ಲವ್ ಮಹಾದೇವ್' ಪೋಸ್ಟರ್ ವಾರ್ 6 ರಾಜ್ಯಗಳಲ್ಲಿ ಹಿಂದೂ ಮುಸ್ಲಿಂ ಕಲಹಕ್ಕೆ ಕಾರಣವಾಗಿದೆ. ಇಂಥ ಗಲಭೆ ಸಂಬಂಧ ವಿವಿಧ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದ್ದು, 38 ಜನರನ್ನು ಬಂಧಿಸಲಾಗಿದೆ. ಮೊದಲಿಗೆ ಕೇವಲ ಪೋಸ್ಟರ್ ವಾರ್ಗೆ ಸೀಮಿತವಾಗಿದ್ದ ಈ ವಿವಾದ ಇದೀಗ ಜಾಲತಾಣಗಳಲ್ಲಿ ವಿವಾದಿತ ವ ಸ್ಟೇಟಸ್ ವಾರ್ಗೂ ನಾಂದಿ ಹಾಡಿದೆ.
ಏನಿದು ವಿವಾದ?
ಉತ್ತರಪ್ರದೇಶದ ಕಾನ್ಸುರದಲ್ಲಿ ಸೆ.4ರಂದು ನಡೆದ ಈದ್ ಮಿಲಾದ್ ಉನ್ ನಬಿ ಮೆರವಣಿಗೆಯಲ್ಲಿ ಕೆಲ ಯುವಕರು 'ಐ ಲವ್ ಮೊಹಮ್ಮದ್' ಎಂದು ಬರೆದಿದ್ದ ಪೋಸ್ಟರ್ಗಳನ್ನು ಟ್ರಾ ಫಿಕ್ ಜಂಕ್ಷನ್ಗಳು, ಅಂಗಡಿಗಳ ಮುಂಭಾಗದಲ್ಲಿ ಪ್ರದರ್ಶಿಸಿದ್ದರು. ಆದರೆ, 'ಇದು ಹೊಸ ಸಂಪ್ರದಾಯ, ಮೆರವಣಿಗೆ ಹೋಗುವ ಮಾರ್ಗದಲ್ಲಿ ಇಂಥ ಪೋಸ್ಟರ್ ಪ್ರದರ್ಶನ ಕೋಮುಸಾಮರಸ್ಯಕ್ಕೆ ಧಕ್ಕೆ ತರಬಹುದು' ಎಂದು ಹಿಂದೂ ಯುವಕರು ವಿರೋಧ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಅನುಮತಿ ಪಡೆಯದ್ದಕ್ಕೆ ಪೊಲೀಸರು ಪೋಸ್ಟರ್ ಕಿತ್ತೆಸೆದರು. ಅಲ್ಲಿಂದ ದಂಗಲ್ ಆರಂಭವಾಯಿತು.
India Latest News Liveಗಾಜಾ ಪ್ರಜೆಗಳ ಮೊಬೈಲ್ ಹ್ಯಾಕ್ ಮಾಡಿ, ನೆತನ್ಯಾಹು ವಿಶ್ವಸಂಸ್ಥೆ ಭಾಷಣ ಪ್ರಸಾರ ಮಾಡಿದ ಇಸ್ರೇಲ್ ಸೇನೆ!
India Latest News Liveಭಾರತದ 7 ಯುದ್ಧವಿಮಾನ ಹೊಡೆದುರುಳಿಸಿದ್ದೇವೆ.. ವಿಶ್ವಸಂಸ್ಥೆಯಲ್ಲೂ ಸುಳ್ಳಿನ ಕಥೆ ಕಟ್ಟಿದ ಪಾಕ್ ಪ್ರಧಾನಿ
Shehbaz Sharif UNGA Lie ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್, 'ಆಪರೇಷನ್ ಸಿಂಧೂರ್'ನಲ್ಲಿ ಭಾರತದ ವಿರುದ್ಧ ತಮ್ಮ ದೇಶ ಗೆದ್ದಿದೆ ಎಂದು ಹೇಳಿಕೊಂಡಿದ್ದಾರೆ.
India Latest News Liveಅಕ್ರಮ ವಲಸೆ ಅಪರಾಧವಲ್ಲ, ಭೂಮಿಯ ಮೇಲೆ ಯಾವ ಮಾನವ ಎಲ್ಲಿ ಬೇಕಾದರೂ ಹೋಗಬಹುದು - ಪ್ರಕಾಶ್ ರಾಜ್
Prakash Raj No Human is Illegal Slams Govt Over Gaza UAPA Arrests ನವದೆಹಲಿಯಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ಭೂಮಿಯ ಮೇಲೆ ಯಾವ ಮಾನವನೂ ಅಕ್ರಮವಲ್ಲ ಮತ್ತು ವಲಸೆ ಅಪರಾಧವಲ್ಲ ಎಂದು ಪ್ರತಿಪಾದಿಸಿದ್ದಾರೆ.
India Latest News Liveತಿರುಪತಿ ತಿಮ್ಮಪ್ಪನಿಗೆ ₹3.86 ಕೋಟಿ ಮೌಲ್ಯದ ವಜ್ರಖಚಿತ ಚಿನ್ನದ ಯಜ್ಞೋಪವೀತ ಅರ್ಪಿಸಿದ ದಂಪತಿ!
Couple Donates 3.86 KG Gold Yagnopaveetham to Tirupati ವಿಶಾಖಪಟ್ಟಣದ ದಂಪತಿಗಳು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ₹3.86 ಕೋಟಿ ಮೌಲ್ಯದ, 3.86 ಕೆಜಿ ತೂಕದ ಚಿನ್ನದ ಯಜ್ಞೋಪವೀತವನ್ನು ದೇಣಿಗೆಯಾಗಿ ನೀಡಿದ್ದಾರೆ.
India Latest News Liveಹಬ್ಬದ ಸಂಭ್ರಮಕ್ಕೆ ಪರ್ಫೆಕ್ಟ್ ಫೋನ್ - OPPO Reno14 5G ದೀಪಾವಳಿ ಎಡಿಷನ್ನ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ!
OPPO Reno14 5G Diwali Edition Launched ದೀಪಾವಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ OPPO Reno14 5G ದೀಪಾವಳಿ ಎಡಿಷನ್, ಉದ್ಯಮದಲ್ಲೇ ಮೊದಲ ಬಾರಿಗೆ ಹೀಟ್-ಸೆನ್ಸಿಟಿವ್, ಬಣ್ಣ ಬದಲಾಯಿಸುವ ತಂತ್ರಜ್ಞಾನವನ್ನು ಹೊಂದಿದೆ.
India Latest News Liveಮದರಸಾ ಪರಿಶೀಲನೆ ವೇಳೆ ಟಾಯ್ಲೆಟ್ನಲ್ಲಿ ಬಂಧಿಯಾಗಿದ್ದ 40 ಅಪ್ರಾಪ್ತ ಬಾಲಕಿಯರು ಪತ್ತೆ!
40 Minor Girls Found Locked in Toilet During Madrassa Inspection in UP ಲಕ್ನೋ ಸಮೀಪದ ನೋಂದಣಿಯಾಗದ ಮದರಸಾವೊಂದರಲ್ಲಿ ತಪಾಸಣೆ ನಡೆಸಿದಾಗ, 40 ಬಾಲಕಿಯರು ಶೌಚಾಲಯದಲ್ಲಿ ಬಂಧಿಯಾಗಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಕಟ್ಟಡವನ್ನು ಪ್ರವೇಶಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
India Latest News Liveಸ್ವಾಮಿ ಚೈತನ್ಯಾನಂದ ಸರಸ್ವತಿ ಲೈಂಗಿಕ ಕಿರುಕುಳ ಪ್ರಕರಣ, ನಿರೀಕ್ಷಾಣಾ ಜಾಮೀನು
India Latest News Liveಶ್ರೀಲಂಕಾ ಎದುರಿನ ಪಂದ್ಯದಲ್ಲಿ ಭಾರತ ತಂಡದಲ್ಲಿ 2 ಮೇಜರ್ ಚೇಂಜ್, ಇಲ್ಲಿದೆ ಸಂಭಾವ್ಯ ತಂಡ!
ದುಬೈ: ಭಾರತ ಹಾಗೂ ಶ್ರೀಲಂಕಾ ತಂಡಗಳು ಇಂದು ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಭಾರತ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
India Latest News Live'ಫೈನಲ್ನಲ್ಲಿ ಭಾರತವನ್ನು ಸುಮ್ಮನೆ ಬಿಡಬೇಡಿ' - ಹ್ಯಾರಿಸ್ ರೌಫ್ ಮುಂದೆ ಗೋಳಾಡಿದ ಪಾಕಿ ಅಭಿಮಾನಿ!
ಬಾಂಗ್ಲಾದೇಶವನ್ನು ಸೋಲಿಸಿ ಏಷ್ಯಾಕಪ್ ಫೈನಲ್ಗೆ ಪ್ರವೇಶಿಸಿದ ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್ ರೌಫ್ಗೆ ಅಭಿಮಾನಿಯೊಬ್ಬರು 'ಫೈನಲ್ನಲ್ಲಿ ಭಾರತವನ್ನು ಸುಮ್ಮನೆ ಬಿಡಬೇಡಿ' ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.
India Latest News Liveರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ - ಯಾರೀಕೆ ಸೀರೆಯುಟ್ಟು ಮಿಂಚಿದ 6 ವರ್ಷದ ಪೋರಿ
Trisha Thosar Steals the Show: ಆರು ವರ್ಷದ ಮರಾಠಿ ನಟಿ ತ್ರಿಶಾ ತೋಶರ್, 'ನಾಲ್ 2' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಗೌರವಕ್ಕೆ ಪಾತ್ರರಾದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
India Latest News Liveಲಡಾಖ್ ಹಿಂಸಾಚಾರಕ್ಕೆ ಕಾರಣರಾದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಬಂಧನ!
Sonam Wangchuk Arrested Under NSA Over Ladakh Protest Violence ಲೇಹ್ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಲಾಗಿದೆ.
India Latest News Liveಆಕ್ಸಿಜನ್ ಸಿಲಿಂಡರ್ ಸಹಾಯವಿಲ್ಲದೇ ಮೌಂಟ್ ಎವರೆಸ್ಟ್ ಏರಿದ ಯುವಕ - ಈ ಸಾಧನೆಗೆ ಇದೇ ಮೊದಲು
India Latest News LiveNavratri 2025 - ಪ್ರಧಾನಿ ಮೋದಿಯವರ ಉಪವಾಸ ಭಕ್ತಿಯಲ್ಲ, ಅವರ ಆಧ್ಯಾತ್ಮಿಕ ಶಕ್ತಿಯ ರಹಸ್ಯ ತಿಳಿಯಿರಿ
Navratri 2025: ಪ್ರಧಾನಿ ನರೇಂದ್ರ ಮೋದಿಯವರ ನವರಾತ್ರಿ ಉಪವಾಸವು ಕೇವಲ ಧಾರ್ಮಿಕ ಆಚರಣೆಯಲ್ಲ, ಅದೊಂದು ಕಠಿಣ ಆಧ್ಯಾತ್ಮಿಕ ತಪಸ್ಸು. ಒಂಬತ್ತು ದಿನಗಳ ಕಾಲ ಕೇವಲ ನೀರು ಅಥವಾ ಒಂದೇ ಬಗೆಯ ಹಣ್ಣನ್ನು ಸೇವಿಸಿ ಇಂದ್ರಿಯ ನಿಗ್ರಹ ಆತ್ಮಶುದ್ಧೀಕರಣವನ್ನು ಸಾಧಿಸುತ್ತಾರೆ. ನವರಾತ್ರಿ ಉಪವಾಸದ ಬಗ್ಗೆ ತಿಳೀಯೋಣ.
India Latest News Liveಏಷ್ಯಾಕಪ್ ಫೈನಲ್ ಪ್ರವೇಶಿಸುತ್ತಿದ್ದಂತೆಯೇ ಭಾರತಕ್ಕೆ ನೇರ ವಾರ್ನಿಂಗ್ ಕೊಟ್ಟ ಪಾಕಿಸ್ತಾನ ಕ್ಯಾಪ್ಟನ್!
ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳು ನಿರೀಕ್ಷೆಯಂತೆಯೇ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಹೀಗಿರುವಾಗಲೇ ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ, ಭಾರತ ತಂಡಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
India Latest News Liveನಿಷೇಧಿತ ಶ್ವಾನವನ್ನು ಸಾಕ್ತಿದ ದಂಪತಿ - 10 ವರ್ಷದ ಮಗಳು ಶ್ವಾನದ ದಾಳಿಗೆ ಬಲಿ
Banned dog breed kills child: ಕಾನೂನುಬದ್ಧವಾಗಿ ಸಾಕುತ್ತಿದ್ದ ನಿಷೇಧಿತ ಎಕ್ಸ್ ಎಲ್ ಬುಲ್ಲಿ ತಳಿಯ ನಾಯಿಯೊಂದು 10 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿ ಸಾಯಿಸಿದೆ. ಯಾವುದೇ ಆಕ್ರಮಣಕಾರಿ ಲಕ್ಷಣಗಳನ್ನು ತೋರದಿದ್ದ ಈ ಶ್ವಾನವು, ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಮಗುವನ್ನು ಬಲಿ ಪಡೆದಿದೆ.
India Latest News LiveNarendra Modi - ನವರಾತ್ರಿ ಹಬ್ಬಕ್ಕೆ ಬಂಪರ್ ಗಿಫ್ಟ್, ಬಿಹಾರದ ಮಹಿಳೆಯರ ಖಾತೆಗೆ ₹10,000 ಜಮಾ!
Mukhyamantri Mahila Udyami Yojana ಬಿಹಾರ ಚುನಾವಣೆಗೆ ಮುನ್ನ, ಪ್ರಧಾನಿ ನರೇಂದ್ರ ಮೋದಿ 'ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆ'ಯಡಿ 7.5 ಮಿಲಿಯನ್ ಮಹಿಳೆಯರ ಖಾತೆಗೆ ತಲಾ ₹10,000 ಜಮಾ ಮಾಡಿರುವುದಾಗಿ ಘೋಷಿಸಿದ್ದಾರೆ. ನವರಾತ್ರಿ ವೇಳೆ ಈ ಘೋಷಣೆ. ನಿತೀಶ್ ಕುಮಾರ್ ಸರ್ಕಾರ ಬಣ್ಣಿಸಿದ್ದಾರೆ.
India Latest News Liveಏಷ್ಯಾಕಪ್ ಫೈನಲ್ನಲ್ಲಿ ಭಾರತ ಸೋಲಿಸಲು ಪಾಕ್ಗೆ ಮಾಸ್ಟರ್ ಪ್ಲಾನ್ ಹೇಳಿಕೊಟ್ಟ ಶೋಯೆಬ್ ಅಖ್ತರ್!
ದುಬೈ: 2025ರ ಏಷ್ಯಾಕಪ್ ಟೂರ್ನಿಯ ಫೈನಲ್ನಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಮಾಸ್ಟರ್ ಪ್ಲಾನ್ ಹೇಳಿಕೊಟ್ಟಿದ್ದಾರೆ. ಏನದು ನೋಡೋಣ ಬನ್ನಿ.
India Latest News Live26 ಜನರ ಬಲಿ ಪಡೆದ ಪಹಲ್ಗಾಮ್ ದಾಳಿಕೋರರಿಗೆ ದಾರಿ ತೋರಿದ್ದು ಒಬ್ಬ ಶಿಕ್ಷಕ!
Kashmiri Teacher Held: ಪಹಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ನೆರವು ನೀಡಿದ ಆರೋಪದ ಮೇಲೆ ಶಿಕ್ಷಕ ಮೊಹಮ್ಮದ್ ಯೂಸುಫ್ ಕಟಾರಿಯನ್ನು ಬಂಧಿಸಲಾಗಿದೆ. ಈತನ ಕೈವಾಡ 'ಆಪರೇಷನ್ ಮಹಾದೇವ್' ಕಾರ್ಯಾಚರಣೆಯ ನಂತರ ಬೆಳಕಿಗೆ ಬಂದಿತ್ತು.
India Latest News Liveಪೆಹಲ್ಗಾಂ ಬಗ್ಗೆ ಉಲ್ಲೇಖ - ಸೂರ್ಯಗೆ ಶಾಕ್ ಕೊಟ್ಟ ಐಸಿಸಿ!
ದುಬೈ: ಪಹಲ್ಗಾಂ ಉಗ್ರದಾಳಿಯ ವಿಚಾರದ ಕುರಿತಂತೆ ಬಹಿರಂಗವಾಗಿ ತಮ್ಮ ಅನಿಸಿ ಹಂಚಿಕೊಂಡ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ಗೆ ಐಸಿಸಿ ಎಚ್ಚರಿಕೆ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
India Latest News Liveಭಾರತದ ಜೊತೆಗೆ ತೆರಿಗೆ ಮುನಿಸು - ಭಾರತದ ಶತ್ರು ಪಾಕಿಸ್ತಾನವನ್ನು ಅಪ್ಪಿ ಮುದ್ದಾಡ್ತಿರುವ ಟ್ರಂಪ್
Trump's anti-India policy: ಅಮೆರಿಕ ಅಧ್ಯಕ್ಷ ಟ್ರಂಪ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ಭೇಟಿಯಾಗಿ 'ಶ್ರೇಷ್ಠ ನಾಯಕರು' ಎಂದು ಹೊಗಳಿದ್ದಾರೆ. ಭಾರತದೊಂದಿಗೆ ತೆರಿಗೆ ಸಮರ ನಡೆಯುತ್ತಿರುವ ಹೊತ್ತಲ್ಲೇ ನಡೆದ ಈ ಭೇಟಿಯು ಬದಲಾಗುತ್ತಿರುವ ರಾಜಕೀಯ ಸಮೀಕರಣದ ಸಂಕೇತವಾಗಿದೆ.