- Home
- News
- India News
- India Latest News Live: ಶೀಘ್ರ ಭಾರತ-ಅಮೆರಿಕ ಟ್ರೇಡ್ ಡೀಲ್ - ಟ್ರಂಪ್ರ ತೆರಿಗೆ ಹೇರಿಕೆ ನಡೆಯ ಸಮರ್ಥಿಸಿಕೊಂಡ ಮಾರ್ಕೊ
India Latest News Live: ಶೀಘ್ರ ಭಾರತ-ಅಮೆರಿಕ ಟ್ರೇಡ್ ಡೀಲ್ - ಟ್ರಂಪ್ರ ತೆರಿಗೆ ಹೇರಿಕೆ ನಡೆಯ ಸಮರ್ಥಿಸಿಕೊಂಡ ಮಾರ್ಕೊ

ನವದೆಹಲಿ: ತಮ್ಮ ಸಮುದಾಯಕ್ಕೆ ಯಾವುದೇ ತೊಂದರೆ ಎದುರಾದಲ್ಲಿ ಆ ಬಗ್ಗೆ ಕಾಂಗ್ರೆಸ್ನ ಮುಸ್ಲಿಂ ನಾಯಕರು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಇಲ್ಲಿ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ರಾಹುಲ್, ‘ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾದರೆ ಆಗ ನಿರ್ದಿಷ್ಟವಾಗಿ ಮುಸ್ಲಿಮರಿಗೇ ಅನ್ಯಾಯವಾಗಿದೆ ಎನ್ನಬೇಕೇ ಹೊರತೂ ಒಟ್ಟಾರೆ ಅಲ್ಪಸಂಖ್ಯಾತರಿಗೆ ಅನ್ಯಾಯ ಎನ್ನಲು ಹೋಗಬಾರದು. ಕಾಂಗ್ರೆಸ್ ಪಕ್ಷ ಎಂದಿಗೂ ಮುಸ್ಲಿಂ ಪದ ಬಳಕೆಗೆ ಹಿಂಜರಿಯಬಾರದು. ಜೊತೆಗೆ ಪಕ್ಷದಲ್ಲಿ ಮುಸ್ಲಿಮರ ಪಾಲುದಾರಿಕೆ ಹೆಚ್ಚಿಸಲು ಯಾವುದಾದರೂ ಹೊಸ ವೇದಿಕೆ ತೆರೆಯಬೇಕು’ ಎಂದೂ ಕರೆ ನೀಡಿದ್ದಾರೆ.
ಸದ್ಯದ ದೇಶದ ಆರ್ಥಿಕ ಪರಿಸ್ಥಿತಿ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಚ್ಚು ದಿನ ಬಾಳದು ಎಂದು ಲೋಕಸಭೆಯಲ್ಲಿನ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ.
‘ಮುಂದಿನ ಕೆಲ ತಿಂಗಳಲ್ಲಿ ದೇಶದ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಆರ್ಥಿಕ ಸಂಕಷ್ಟ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ರಾಜಕೀಯದ ಮುಖ್ಯ ಚರ್ಚಾ ವಿಷಯ ಹಿಂದೂ- ಮುಸ್ಲಿಂ ಬದಲಾಗಿ ಶ್ರೀಮಂತ- ಬಡವ ಎಂಬುದಾಗಿ ಬದಲಾಗಲಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿದ್ದಾರೆ.