09:05 PM (IST) Aug 06

India Latest News 6 August 2026ರಾಜಮೌಳಿ ‘ವಾರಣಾಸಿ’ ಶೂಟಿಂಗ್‌ನಿಂದ ಮತ್ತೆ ವಿಡಿಯೋ ಲೀಕ್ - ಮಹೇಶ್ ಬಾಬು ಏನು ಮಾಡುತ್ತಿದ್ದಾರೆ ನೋಡಿ!

Mahesh Babu Leaked Video: ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್‌ನ 'ವಾರಣಾಸಿ' ಚಿತ್ರದ ಮತ್ತೊಂದು ವಿಡಿಯೋ ಲೀಕ್ ಆಗಿದೆ. ಇದರಲ್ಲಿ ಮಹೇಶ್ ಬಾಬು ಅವರ ಲುಕ್ ನೋಡಿದ್ರೆ ಮೈ ಜುಮ್ಮೆನ್ನುತ್ತೆ.

Read Full Story
07:28 PM (IST) Aug 06

India Latest News 6 August 2026ಹಿಂದೂ ಹುಡುಗಿಗೆ ಗಾಳ ಹಾಕಲು 50 ಸಾವಿರ, ಮಗು ಮಾಡಿ ಕೈಬಿಡಲು 5 ಲಕ್ಷ - ಯುವಕ ಏನೇನು ಹೇಳಿದ್ದಾನೆ ಕೇಳಿ

ವೈರಲ್ ವಿಡಿಯೋವೊಂದರಲ್ಲಿ, ಯುವಕನೊಬ್ಬ ಹಿಂದೂ ಹುಡುಗಿಯರನ್ನು ಪ್ರೀತಿಸುವ ನಾಟಕವಾಡಿ ಮೋಸ ಮಾಡಲು ತನಗೆ ಮಸೀದಿಯಿಂದ ಹಣ ಸಿಗುತ್ತದೆ ಎಂದು ಒಪ್ಪಿಕೊಂಡಿದ್ದಾನೆ. ಹುಡುಗಿಯನ್ನು ಮದುವೆಯಾದರೆ ಅಥವಾ ಗರ್ಭಿಣಿಯಾಗಿಸಿ ಬಿಟ್ಟರೆ ಲಕ್ಷಾಂತರ ರೂಪಾಯಿ ಸಿಗುತ್ತದೆ ಎಂದು ಕುರಾನ್ ಮೇಲೆ ಆಣೆ ಮಾಡಿ ಹೇಳಿರುವ ಆಘಾತಕಾರಿ ವಿಷಯವನ್ನು ಈ ಲೇಖನ ವಿವರಿಸುತ್ತದೆ.
Read Full Story
05:40 PM (IST) Aug 06

India Latest News 6 August 2026ಕ್ರಿಕೆಟ್‌ಗೆ ಬ್ರೇಕ್ ಬೆನ್ನಲ್ಲೇ RBI ಕೆಲಸಕ್ಕೆ ಹಾಜರಾದ ಇಶಾನ್ ಕಿಶನ್! ಸ್ಪೋಟಕ ಬ್ಯಾಟರ್‌ಗೆ ರಿಸರ್ವ್ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿದ್ದು ಹೇಗೆ? ಸಂಬಳ ಎಷ್ಟು?

ಕ್ರಿಕೆಟ್‌ನಿಂದ ವಿರಾಮ ಪಡೆದಿರುವ ಟೀಂ ಇಂಡಿಯಾ ಆಟಗಾರ ಇಶಾನ್ ಕಿಶನ್, ಪಾಟ್ನಾದಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕಚೇರಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸಕ್ಕೆ ಹಾಜರಾಗಿದ್ದಾರೆ. ಕ್ರೀಡಾ ಕೋಟಾದಡಿಯಲ್ಲಿ ಈ ಉದ್ಯೋಗ ಪಡೆದಿದ್ದು, ಅವರ ಸಂಬಳ ಮತ್ತು ಕ್ರಿಕೆಟ್‌ಗೆ ಮರಳುವಿಕೆಯ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story
04:42 PM (IST) Aug 06

India Latest News 6 August 2026ಕೇವಲ 30 ಸಾವಿರ ವೇತನದಲ್ಲಿ ಹಣ ಕೂಡಿಟ್ಟು ಕೋಟ್ಯಧಿಪತಿಯಾದ, ಇಂದು ತಿಂಗಳಿಗೆ ಮ್ಯೂಚುವಲ್ ಫಂಡ್ ಹೂಡಿಕೆಯೇ 52 ಲಕ್ಷ ರೂ!

ಎಟಿಕಾ ವೆಲ್ತ್ ಸಹ-ಸಂಸ್ಥಾಪಕ ಗಜೇಂದ್ರ ಕೊಠಾರಿ, ಪ್ರತಿ ತಿಂಗಳು ₹52 ಲಕ್ಷ SIP ಹೂಡಿಕೆ ಮಾಡಿ ₹67 ಕೋಟಿ ನಿವ್ವಳ ಆಸ್ತಿ ಗಳಿಸಿದ್ದಾರೆ. ತಮ್ಮ ಮಧ್ಯಮ ವರ್ಗದ ಹಿನ್ನೆಲೆಯಿಂದ ಕೋಟ್ಯಾಧಿಪತಿಯಾದ ಪಯಣವನ್ನು ಹಂಚಿಕೊಂಡ ಅವರು, ಯುವಕರು ಬೇಗನೆ ಉಳಿತಾಯ ಆರಂಭಿಸಿ ಚಕ್ರಬಡ್ಡಿಯ ಲಾಭ ಪಡೆಯಬೇಕೆಂದು ಸಲಹೆ ನೀಡುತ್ತಾರೆ.
Read Full Story
04:04 PM (IST) Aug 06

India Latest News 6 August 2026ಲಿಫ್ಟ್‌ನಲ್ಲಿ ಮಹಿಳಾ ಉದ್ಯೋಗಿ ಮೇಲೆ ಲೈ0ಗಿಕ ದೌರ್ಜನ್ಯ, ರಿಲೀಫ್ ಪಡೆದಿದ್ದ ತೇಜ್‌ಪಾಲ್‌ಗೆ ಶಿಕ್ಷೆಯಾಗಿದ್ದು ಹೇಗೆ?

ಲಿಫ್ಟ್‌ನಲ್ಲಿ ಮಹಿಳಾ ಉದ್ಯೋಗಿಯನ್ನು ಲೈ0ಗಿಕವಾಗಿ ಬಳಸಿಕೊಂಡ ಆರೋಪದಿಂದ ರಿಲೀಫ್ ಪಡೆದಿದ್ದ ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆಯಾಗಿದ್ದು ಹೇಗೆ? ಏನಿದು ಉದ್ಯೋಗಿ ಪ್ರಕರಣ?

Read Full Story
03:54 PM (IST) Aug 06

India Latest News 6 August 2026ತಿಲಕ್ ವರ್ಮಾ-ಅಮೃತಾ ಫಡ್ನವಿಸ್ ನಡುವಿನ ಸಂಭಾಷಣೆಯ ವಿಡಿಯೋ ಭಾರೀ ವೈರಲ್

ಮುಂಬೈನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಟೀಮ್ ಇಂಡಿಯಾದ ಯುವ ತಾರೆ ತಿಲಕ್ ವರ್ಮಾ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಭೇಟಿಯಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಆ ಕುರಿತಾದ ವರದಿ ಇಲ್ಲಿದೆ..

Read Full Story
03:46 PM (IST) Aug 06

India Latest News 6 August 2026ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ ಅಪರೂಪದ ವಿಶ್ವದಾಖಲೆ ನುಚ್ಚುನೂರು; ಟಿ20 ಕ್ರಿಕೆಟ್‌ಗೆ ಜೋಸ್ ಬಟ್ಲರ್ ಹೊಸ ಬಾಸ್

ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್, 'ದಿ ಹಂಡ್ರೆಡ್' ಲೀಗ್‌ನಲ್ಲಿ ಅಜೇಯ 51 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ವಿಶ್ವದಾಖಲೆ ಬರೆದಿದ್ದಾರೆ. ಅವರು 14,833 ರನ್‌ಗಳೊಂದಿಗೆ ವೆಸ್ಟ್ ಇಂಡೀಸ್ ದಿಗ್ಗಜ ಕೀರನ್ ಪೊಲಾರ್ಡ್ (14,803 ರನ್) ಅವರ ದಾಖಲೆಯನ್ನು ಮುರಿದು ಅಗ್ರಸ್ಥಾನಕ್ಕೇರಿದ್ದಾರೆ.
Read Full Story
02:03 PM (IST) Aug 06

India Latest News 6 August 20262027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟಿಸಿದ ಸನ್ನಿ; 10ಕ್ಕೆ 9 ಅಂಕ ನೀಡಿದ ಆಕಾಶ್‌ ಚೋಪ್ರಾ

2027ರ ಏಕದಿನ ವಿಶ್ವಕಪ್‌ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಮ್ಮ 15 ಸದಸ್ಯರ ಸಂಭಾವ್ಯ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಶುಭ್‌ಮನ್ ಗಿಲ್ ನಾಯಕತ್ವದ ಈ ತಂಡದಲ್ಲಿ ಅನುಭವಿಗಳಾದ ರೋಹಿತ್, ಕೊಹ್ಲಿ ಇದ್ದರೂ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್‌ಗೆ ಸ್ಥಾನ ನೀಡದಿರುವುದು ಚರ್ಚೆಗೆ ಕಾರಣವಾಗಿದೆ. ಈ ತಂಡವನ್ನು ವಿಶ್ಲೇಷಿಸಿರುವ ಆಕಾಶ್ ಚೋಪ್ರಾ, 10ಕ್ಕೆ 9 ಅಂಕಗಳನ್ನು ನೀಡಿದ್ದಾರೆ.
Read Full Story
02:01 PM (IST) Aug 06

India Latest News 6 August 2026Age is just a number! ವಿಮಾನದ ರೆಕ್ಕೆ ಮೇಲೆ ನಿಂತು ಹಾರಿದ 97 ವರ್ಷದ ಅಜ್ಜಿ.. ಬೆರಗುಗೊಳಿಸೋ ವಿಡಿಯೋ

ಬ್ರಿಟನ್‌ನ 97 ವರ್ಷದ ಬೆಟ್ಟಿ ಬ್ರೊಮೇಜ್, ವಿಮಾನದ ರೆಕ್ಕೆಯ ಮೇಲೆ ನಿಂತು ಸಾಹಸ ಮಾಡುವ ಮೂಲಕ ವಿಶ್ವದ ಅತ್ಯಂತ ಹಿರಿಯ 'ಫೀಮೇಲ್ ವಿಂಗ್ ವಾಕರ್' ಎಂಬ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ತಮಗೆ ಲಕ್ವ ಹೊಡೆದಾಗ ಆರೈಕೆ ಮಾಡಿದ ಆಸ್ಪತ್ರೆಗೆ ಹಣ ಸಂಗ್ರಹಿಸಲು ಈ ಸಾಹಸ ಮಾಡಿದ್ದು, ತಮ್ಮ 100ನೇ ಹುಟ್ಟುಹಬ್ಬಕ್ಕೂ ವಿಶೇಷ ಸಾಹಸ ಮಾಡಲು ಸಜ್ಜಾಗುತ್ತಿದ್ದಾರೆ.
Read Full Story
01:36 PM (IST) Aug 06

India Latest News 6 August 2026ರಷ್ಯಾ ಆಧ್ಯಕ್ಷ ಪುಟಿನ್ 194 ವರ್ಷ ಬದುಕ್ತಾರಾ? ದುರ್ಬಲಗೊಳ್ಳೋ ಜೀವಕೋಶಗಳ ನಿಯಂತ್ರಣ

ರಷ್ಯಾದ ವಿಜ್ಞಾನಿಗಳು ಮಾನವನ ಜೀವಿತಾವಧಿಯನ್ನು 194 ವರ್ಷಗಳವರೆಗೆ ಹೆಚ್ಚಿಸುವ ಸಂಶೋಧನೆಯಲ್ಲಿ ತೊಡಗಿದ್ದಾರೆ. ಸ್ಕೋಲ್ಕೊವೊ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಈ ಅಧ್ಯಯನವು, ಜೀನ್ ಚಿಕಿತ್ಸೆ ಮತ್ತು ಅಂಗಾಂಗ ಕಸಿ ಮುಂತಾದ ವೈದ್ಯಕೀಯ ತಂತ್ರಗಳ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಗುರಿ ಹೊಂದಿದೆ.

Read Full Story
01:25 PM (IST) Aug 06

India Latest News 6 August 2026ರಸ್ತೆ ಬದಿ ಪಕೋಡಾವಾಲಾನ ಆದಾಯ ಕೇಳಿ ತಲೆ ಸುತ್ತಿ ಬಿದ್ದ ಟೆಕ್ಕಿ! ವರ್ಷಕ್ಕೆ ಈತ ದುಡೀತಿರೋದು ಎಷ್ಟು ಗೊತ್ತಾ

ಬೀದಿ ಬದಿಯಲ್ಲಿ ಬ್ರೆಡ್ ಪಕೋಡಾ ಮತ್ತು ಗುಲಾಬ್ ಜಾಮೂನ್ ಮಾರಾಟ ಮಾಡುವ ವ್ಯಾಪಾರಿಯೊಬ್ಬರು ವರ್ಷಕ್ಕೆ 30 ಲಕ್ಷಕ್ಕೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಕಥೆಯು, ಸಣ್ಣ ವ್ಯಾಪಾರಗಳ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದ ಫಲವನ್ನು ತೋರಿಸುತ್ತದೆ, ಇದು ಅನೇಕ ಕಾರ್ಪೊರೇಟ್ ಉದ್ಯೋಗಿಗಳಿಗಿಂತ ಹೆಚ್ಚಿನ ಗಳಿಕೆಯಾಗಿದೆ.
Read Full Story
01:16 PM (IST) Aug 06

India Latest News 6 August 2026ಮ್ಯಾನ್ಮಾರ್‌ ಜತೆ 1.44 ಚದರ ಮೈಲಿ ಭೂಮಿ ವಿನಿಮಯಕ್ಕೆ ಕೇಂದ್ರದ ನಿರ್ಧಾರ, ಗಡಿ ವಿವಾದ ಇತ್ಯರ್ಥಕ್ಕೆ ಭಾರತ ಬಿಗ್ ಮೂವ್!

ದಶಕಗಳ ಭಾರತ-ಮ್ಯಾನ್ಮಾರ್ ಗಡಿ ವಿವಾದಕ್ಕೆ ಪರಿಹಾರವಾಗಿ, ಕೇಂದ್ರ ಸರ್ಕಾರವು ಭೂಭಾಗಗಳ ವಿನಿಮಯ ಒಪ್ಪಂದವನ್ನು ಪರಿಶೀಲಿಸುತ್ತಿದೆ. ಮುಖ್ಯವಾಗಿ ಮಣಿಪುರದ ಚಂಡೇಲ್ ಜಿಲ್ಲೆಯ ವಿವಾದಿತ ಪ್ರದೇಶವನ್ನು ವಿನಿಮಯ ಮಾಡಿಕೊಳ್ಳುವ ಈ ಪ್ರಸ್ತಾವನೆಯು ಗಡಿ ಭದ್ರತೆಯನ್ನು ಹೆಚ್ಚಿಸುವ ಗುರಿ ಹೊಂದಿದ್ದರೂ, ಸ್ಥಳೀಯ ವಿರೋಧವನ್ನು ಎದುರಿಸುತ್ತಿದೆ.
Read Full Story
12:54 PM (IST) Aug 06

India Latest News 6 August 2026SIP Investment - ದಿನಾ SIP ಮಾಡ್ಬೇಕಾ? ತಿಂಗಳಿಗೊಮ್ಮೆ ಸಾಕಾ? ಯಾವುದು ಬೆಸ್ಟ್? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ತಿಂಗಳಿಗೊಮ್ಮೆ SIP ಮಾಡುವ ಬದಲು ಪ್ರತಿದಿನ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಈ ಲೇಖನ ಉತ್ತರಿಸುತ್ತದೆ. ವೈಟ್‌ಓಕ್ ಕ್ಯಾಪಿಟಲ್ ಅಧ್ಯಯನದ ಪ್ರಕಾರ, ಹೂಡಿಕೆಯ ಅವಧಿಗಿಂತ ಶಿಸ್ತುಬದ್ಧವಾಗಿ ದೀರ್ಘಕಾಲ ಹೂಡಿಕೆ ಮಾಡುವುದೇ ಸಂಪತ್ತು ಸೃಷ್ಟಿಗೆ ಮುಖ್ಯವಾಗಿದೆ. ದಿನನಿತ್ಯ ಮತ್ತು ಮಾಸಿಕ ಎಸ್‌ಐಪಿಗಳ ಆದಾಯದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಅಧ್ಯಯನವು ಸ್ಪಷ್ಟಪಡಿಸಿದೆ.
Read Full Story
12:20 PM (IST) Aug 06

India Latest News 6 August 2026ರೈತ ಮಹಿಳೆಯನ್ನ ನುಂಗಲು ಯತ್ನಿಸಿದ 15 ಅಡಿ ಉದ್ದದ ದೈತ್ಯ ಹೆಬ್ಬಾವು.. ಮುಂದೇನಾಯ್ತು..?

ತೆಲಂಗಾಣದ ಜನ್ಗಾಂ ಜಿಲ್ಲೆಯಲ್ಲಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸ್ವಪ್ನ ಎಂಬ ಮಹಿಳೆಯ ಮೇಲೆ 15 ಅಡಿ ಉದ್ದದ ಹೆಬ್ಬಾವು ದಾಳಿ ಮಾಡಿ ನುಂಗಲು ಯತ್ನಿಸಿದೆ. ಆಕೆಯ ಕಿರುಚಾಟ ಕೇಳಿ ಧಾವಿಸಿದ ಸಹ ರೈತರು ಮತ್ತು ಕಾರ್ಮಿಕರು ಆಕೆಯನ್ನು ರಕ್ಷಿಸಿ, ಹೆಬ್ಬಾವನ್ನು ಸೆರೆಹಿಡಿದು ಆಸ್ಪತ್ರೆಗೆ ಸಾಗಿಸಿದ್ದಾರೆ.
Read Full Story
12:07 PM (IST) Aug 06

India Latest News 6 August 2026Tata Nexon - ಎಸ್‌ಯುವಿ ತಗೊಳ್ಳೋ ಪ್ಲಾನ್ ಇದೆಯಾ? ಆಗಸ್ಟ್‌ನಲ್ಲಿ ನೆಕ್ಸಾನ್ ಮೇಲೆ ₹75,000 ವರೆಗೆ ಭರ್ಜರಿ ಡಿಸ್ಕೌಂಟ್!

ಟಾಟಾ ಮೋಟಾರ್ಸ್ ಈ ಆಗಸ್ಟ್ ತಿಂಗಳಲ್ಲಿ ತನ್ನ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಮೇಲೆ ₹75,000 ವರೆಗಿನ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ಈ ಕೊಡುಗೆಯು ಕ್ಯಾಶ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಬೋನಸ್‌ಗಳನ್ನು ಒಳಗೊಂಡಿದ್ದು, 5-ಸ್ಟಾರ್ ಸುರಕ್ಷತೆ ಮತ್ತು ಪವರ್‌ಫುಲ್ ಎಂಜಿನ್ ಆಯ್ಕೆಗಳನ್ನು ಹೊಂದಿರುವ ಈ ಕಾರಿನ ಖರೀದಿಯನ್ನು ಇನ್ನಷ್ಟು ಆಕರ್ಷಕವಾಗಿಸಿದೆ.
Read Full Story
12:00 PM (IST) Aug 06

India Latest News 6 August 2026ಅರಮನೆ ತೊರೆದು ಸೇನೆ ಸೇರಿದ ರಾಜಕುಮಾರಿ- ಸಂಬಳವಿಲ್ಲದೇ ದೇಶ ಸೇವೆಗಾಗಿ ಜೀವನ ಮೀಸಲಿಡಲು ನಿರ್ಧಾರ

19 ವರ್ಷದ ಡೆನ್ಮಾರ್ಕ್ ರಾಜಕುಮಾರಿ ಇಸಾಬೆಲ್ಲಾ, ಐಷಾರಾಮಿ ಜೀವನವನ್ನು ತೊರೆದು 11 ತಿಂಗಳ ಮಿಲಿಟರಿ ಸೇವೆಗೆ ಸೇರಿದ್ದಾರೆ. ಈ ಮೂಲಕ ಡ್ಯಾನಿಶ್ ರಾಜಮನೆತನದಲ್ಲಿ ಸಕ್ರಿಯ ಸೇನೆ ಸೇರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಸಂಬಳವಿಲ್ಲದೆ ಸೇವೆ ಸಲ್ಲಿಸಲು ನಿರ್ಧರಿಸಿದ್ದಾರೆ.
Read Full Story
11:33 AM (IST) Aug 06

India Latest News 6 August 2026ಹುಡುಗಿಯರ ಬಗ್ಗೆ ಎಚ್ಚರ, ಆ ಇಬ್ಬರಂತೆ ಆಗಬೇಡ -ಸೂರ್ಯವಂಶಿಗೆ ರಾಬಿನ್ ಉತ್ತಪ್ಪ ವಾರ್ನಿಂಗ್

ಕೆಟ್ ಜಗತ್ತಿನಲ್ಲಿ ವೈಭವ್ ಸೂರ್ಯವಂಶಿ ಹೆಸರು ಮಾರುಮೊಳಗುತ್ತಿದೆ. ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತಕ್ಕೆ ಮಾರಾಟವಾಗಿ ದಾಖಲೆ ಬರೆದ ಈ ಪ್ರತಿಭೆಗೆ ಟೀಮ್ ಇಂಡಿಯಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅತ್ಯಂತ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

Read Full Story
11:30 AM (IST) Aug 06

India Latest News 6 August 2026ಈತ ತಂಡದಲ್ಲಿದ್ರೇ ಟೀಂ ಇಂಡಿಯಾ, 2027ರ ಏಕದಿನ ವಿಶ್ವಕಪ್ ಗೆಲ್ಲಲ್ಲ..! ಆಯ್ಕೆ ಸಮಿತಿ-ಬಿಸಿಸಿಐ ನಡುವೆಯೇ ತಿಕ್ಕಾಟ?

ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಣೆ ವಿಚಾರದಲ್ಲಿ ಬಿಸಿಸಿಐ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ನಡುವೆ ಮನಸ್ತಾಪ ಮೂಡಿದೆ ಎಂದು ವರದಿಯಾಗಿದೆ. ಆಯ್ಕೆ ಸಮಿತಿಯು ರೋಹಿತ್‌ರನ್ನು ತಂಡದಿಂದ ಹೊರಗಿಡಲು ಯೋಜಿಸಿದ್ದರೆ, ಬಿಸಿಸಿಐ ಇದನ್ನು ನಿರಾಕರಿಸಿದೆ, ಈ ನಡುವೆ ರೋಹಿತ್ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
Read Full Story
10:58 AM (IST) Aug 06

India Latest News 6 August 2026ತುಂಬಿ ತುಳುಕುತ್ತಿವೆ ದೇಶದ ಜೈಲುಗಳು, ಪ್ರತಿ ಸೆರೆಮನೆ 112.7% ಭರ್ತಿ! ದೆಹಲಿಯಲ್ಲಿ ಶೇ.194.6ರಷ್ಟು ಫುಲ್‌!

ದೇಶಾದ್ಯಂತ ಜೈಲುಗಳು ತಮ್ಮ ಸಾಮರ್ಥ್ಯಕ್ಕಿಂತ ಶೇ. 112.7 ರಷ್ಟು ಹೆಚ್ಚು ಕೈದಿಗಳಿಂದ ತುಂಬಿವೆ. ದೆಹಲಿ, ಮೇಘಾಲಯ, ಮತ್ತು ಜಮ್ಮು-ಕಾಶ್ಮೀರದಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚಿರುವುದು ಈ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ಕೇಂದ್ರ ಸರ್ಕಾರವು ಜೈಲುಗಳ ಆಧುನೀಕರಣಕ್ಕೆ ನೆರವು ನೀಡುತ್ತಿದ್ದರೂ, ಕೈದಿಗಳ ನಿರ್ವಹಣೆ ರಾಜ್ಯಗಳ ಜವಾಬ್ದಾರಿಯಾಗಿದೆ.
Read Full Story
10:56 AM (IST) Aug 06

India Latest News 6 August 2026ಐತಿಹಾಸಿಕ 600ನೇ ಟೆಸ್ಟ್‌ಗೆ ಟೀಂ ಇಂಡಿಯಾ ಸಜ್ಜು; ಲಂಕಾದಲ್ಲಿ ಅಭ್ಯಾಸ ಆರಂಭ

ಶುಭ್‌ಮನ್‌ ಗಿಲ್ ನಾಯಕತ್ವದ ಭಾರತ ತಂಡವು ಶ್ರೀಲಂಕಾ ವಿರುದ್ಧ ತನ್ನ ಐತಿಹಾಸಿಕ 600ನೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಆಗಸ್ಟ್ 15 ರಿಂದ ಗಾಲೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆಟಗಾರರು ತರಬೇತಿ ಆರಂಭಿಸಿದ್ದು, ಭಾರತ ಈ ಮೈಲಿಗಲ್ಲು ತಲುಪಿದ ಮೂರನೇ ತಂಡವಾಗಲಿದೆ.
Read Full Story