Asianet Suvarna News Asianet Suvarna News

ಸೋನಿಯಾರಿಂದ ಯುಪಿಎ ಸೋಲು, ಮೋದಿ ಮೊದಲ ಅವಧಿ ನಿರಂಕುಶ

 ನಾನು ರಾಷ್ಟ್ರಪತಿಯಾದ ಬಳಿಕ ಕಾಂಗ್ರೆಸ್‌ ರಾಜಕೀಯ ಲಕ್ಷ್ಯ ಕಳೆದುಕೊಂಡಿತು| ಮೋದಿ ಮೊದಲ ಅವಧಿ ನಿರಂಕುಶ: ಪ್ರಣಬ್‌ ಮುಖರ್ಜಿ ಪುಸ್ತಕದಲ್ಲಿ ಮಾಹಿತಿ

In Book Pranab Mukherjee Blames Sonia Gandhi Dr Singh For 2014 Debacle pod
Author
Bangalore, First Published Dec 12, 2020, 7:39 AM IST

ನವದೆಹಲಿ(ಡಿ.12): ಕಾಂಗ್ರೆಸ್‌ ನಾಯಕತ್ವದ ವಿರುದ್ಧ 20ಕ್ಕೂ ಹೆಚ್ಚು ನಾಯಕರು ದನಿ ಎತ್ತಿದ ಬೆನ್ನಲ್ಲೇ, 2014ರಲ್ಲಿ ಯುಪಿಎ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಂದಿನ ಪ್ರಧಾನಿ ಮನಮೋಹನ ಸಿಂಗ್‌ ಅವರೇ ಕಾರಣ ಎಂದು ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್‌ ಮುಖರ್ಜಿ ಅವರು ಬರೆದಿರುವುದು ಸಂಚಲನಕ್ಕೆ ಕಾರಣವಾಗಿದೆ.

ಕಳೆದ ಆಗಸ್ಟ್‌ನಲ್ಲಿ ನಿಧನರಾದ ಪ್ರಣಬ್‌ ಅವರು ‘ದ ಪ್ರೆಸೆಡೆನ್ಷಿಯಲ್‌ ಇಯ​ರ್‍ಸ್’ ಎಂಬ ಪುಸ್ತಕ ಬರೆದಿದ್ದಾರೆ. ಅದು ಜನವರಿಯಲ್ಲಿ ಬಿಡುಗಡೆಯಾಗಲಿದ್ದು, ಅದರಲ್ಲಿ ಅಡಕವಾಗಿರುವ ಅಂಶಗಳು ಈಗ ಭಾರಿ ಚರ್ಚೆಗೆ ಕಾರಣವಾಗಿವೆ.

ಸೋನಿಯಾ ನಿವೃತ್ತ : UPA ಅಧ್ಯಕ್ಷ ಪಟ್ಟಕ್ಕೆ ಮಹತ್ವದ ಹೆಸರು

‘2004ರಲ್ಲಿ ನಾನೇನಾದರೂ ಒಂದು ವೇಳೆ ಪ್ರಧಾನಿಯಾಗಿದ್ದರೆ, 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸುತ್ತಿರಲಿಲ್ಲ ಎಂದು ಕೆಲವು ಕಾಂಗ್ರೆಸ್ಸಿಗರು ಹೇಳುತ್ತಾರೆ. ಆದರೆ ಇದಕ್ಕೆ ನನ್ನ ಸಹಮತ ಇಲ್ಲವಾದರೂ, ನಾನು ರಾಷ್ಟ್ರಪತಿಯಾದ ನಂತರ ಪಕ್ಷದ ನಾಯಕತ್ವ ರಾಜಕೀಯ ಲಕ್ಷ್ಯವನ್ನು ಕಳೆದುಕೊಂಡಿತು ಎಂದು ನಾನು ಭಾವಿಸಿದ್ದೇನೆ. ಪಕ್ಷದ ವ್ಯವಹಾರಗಳನ್ನು ನಿರ್ವಹಿಸಲು ಸೋನಿಯಾ ಗಾಂಧಿ ಅವರಿಂದ ಆಗಲಿಲ್ಲ. ಮನಮೋಹನ ಸಿಂಗ್‌ ಅವರು ಸದನದಿಂದ ದೀರ್ಘಾವಧಿಗೆ ದೂರ ಉಳಿದರು. ಇದರಿಂದ ಸಂಸದರೊಂದಿಗಿನ ವೈಯಕ್ತಿಕ ಸಂಪರ್ಕ ಕಡಿತಗೊಂಡಿತು’ ಎಂದು ಪುಸ್ತಕದಲ್ಲಿ ಪ್ರಣಬ್‌ ಮುಖರ್ಜಿ ಬರೆದಿದ್ದಾರೆ.

'ಶಾಲಾ ಪಠ್ಯಕ್ಕೆ ಸೋನಿಯಾ ಸಾಧನೆ ಸೇರಿಸಿ' ಸಿಎಂಗೆ ಒತ್ತಾಯ

ಮೋದಿಯದ್ದು ಸರ್ವಾಧಿಕಾರಿ ಆಳ್ವಿಕೆ:

ಮನಮೋಹನ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಮೈತ್ರಿಕೂಟವನ್ನು ರಕ್ಷಿಸಿಕೊಳ್ಳುವುದರಲ್ಲೇ ವ್ಯಸ್ತರಾಗಿದ್ದರು. ಇದರಿಂದಾಗಿ ಅವರ ಆಡಳಿತಕ್ಕೆ ಹೊಡೆತ ಬಿತ್ತು. ಆದರೆ ನರೇಂದ್ರ ಮೋದಿ ಅವರು ತಮ್ಮ ಮೊದಲ ಅವಧಿಯಲ್ಲಿ ನಿರಂಕುಶ ಆಡಳಿತದ ಮೊರೆ ಹೋದರು. ಇದರಿಂದಾಗಿ ಸರ್ಕಾರ, ಶಾಸಕಾಂಗ ಹಾಗೂ ನ್ಯಾಯಾಂಗದ ನಡುವೆ ತಿಕ್ಕಾಟ ಕಂಡುಬಂತು. ಈ ವಿಷಯಗಳಲ್ಲಿ ಮೋದಿ ಅವರು 2ನೇ ಅವಧಿಯಲ್ಲಿ ಉತ್ತಮ ಸಂಬಂಧ ಹೊಂದಿರುತ್ತಾರಾ ಎಂಬುದನ್ನು ಕಾಲವೇ ಹೇಳಬೇಕು ಎಂದು ಪ್ರಣಬ್‌ ಬರೆದಿದ್ದಾರೆ.

Follow Us:
Download App:
  • android
  • ios