Asianet Suvarna News Asianet Suvarna News

ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳ ಕೈವಾಡ ತಳ್ಳಿ ಹಾಕುವಂತಿಲ್ಲ: ಮಾಜಿ ಆರ್ಮಿ ಚೀಫ್‌ ನರವಾಣೆ


ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಣಿಪುರ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಶ್ರಮಪಡುತ್ತಿದೆ. ಆದರೆ, ಇದರ ಹಿಂದೆ ವಿದೇಶಿ ಏಜೆನ್ಸಿಗಳ ಐವಾಡವಿರುವ ಸಾಧ್ಯತೆ ಇದೆ ಎಂದು ಭಾರತೀಯ ಸೇನೆಯ ಮಾಜಿ ಚೀಫ್‌ ಎಂಎಂ ನರವಾಣೆ ಹೇಳಿದ್ದಾರೆ.
 

Ex Army Chief MM Naravane Flags Involvement Of Foreign Agencies In Manipur Violence san
Author
First Published Jul 29, 2023, 5:45 PM IST

ನವದೆಹಲಿ (ಜು.29): ಮಣಿಪುರ ಹಿಂಸಾಚಾರ ಅಲ್ಲಿನ ಬಂಡುಕೋರ ಸಮುದಾಯಗಳೇ ಪ್ರಮುಖವಾಗಿದೆ. ಅಲ್ಲಿನ ಸಾಕಷ್ಟು ಬಂಡುಕೋರ ಗುಂಪುಗಳಿಗೆ ಚೀನಾದ ಏಜೆನ್ಸಿಗಳ ಸಹಾಯ ಸಿಕ್ಕಿರಬಹುದು ಎಂದು ಭಾರತೀಯ ಸೇನೆಯ ಮಾಜಿ ಚೀಫ್‌ ಜನರಲ್‌ ಎಂಎಂ ನರವಾಣೆ ಹೇಳಿದ್ದಾರೆ. ಅದರಲ್ಲೂ ಮಣಿಪುರ ಹಿಂಸಾಚಾರ ಇನ್ನಷ್ಟು ಹಿಂಸಾರೂಪ ತಾಳುವ ಹಾದಿಯಲ್ಲಿ ವಿದೇಶಿ ಏಜೆನ್ಸಿಗಳ ಕೈವಾಡವನ್ನೂ ಕೂಡ ಸರ್ಕಾರ ಯಾವುದೇ ಕಾರಣಕ್ಕೂ ತಳ್ಳಿಹಾಕಬಾರದು ಎಂದಿದ್ದಾರೆ. ಶುಕ್ರವಾರ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಈ ಹೇಳಿಕೆ ನೀಡಿದ್ದಾರೆ."ಅಧ್ಯಕ್ಷರಾಗಿರುವವರು ಮತ್ತು ತೆಗೆದುಕೊಳ್ಳಬೇಕಾದ ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಜವಾಬ್ದಾರಿ ಹೊತ್ತಿರುವವರು ತಮ್ಮ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ" ಎಂದು ಜನರಲ್ (ನಿವೃತ್ತ) ನರವಾಣೆ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

"ವಿದೇಶಿ ಏಜೆನ್ಸಿಗಳ ಒಳಗೊಳ್ಳುವಿಕೆಯನ್ನು ತಳ್ಳಿಹಾಕಲಾಗುವುದಿಲ್ಲ, ಆದರೆ ಅವರು ಖಂಡಿತವಾಗಿಯೂ ಇದ್ದಾರೆ ಎಂದು ನಾನು ಹೇಳುತ್ತೇನೆ, ವಿಶೇಷವಾಗಿ ವಿವಿಧ ದಂಗೆಕೋರ ಗುಂಪುಗಳಿಗೆ ಚೀನೀ ನೆರವು ಇರುವ ಸಾಧ್ಯತೆ ಇದೆ" ಎಂದು ಅವರು ಹೇಳಿದ್ದಾರೆ. ಚೀನಾ ಈ ಗುಂಪುಗಳಿಗೆ ವರ್ಷಗಳಿಂದ ಸಹಾಯ ಮಾಡುತ್ತಿದೆ ಮತ್ತು ಅದನ್ನು ಈ ಹಂತದಲ್ಲಿ ಮತ್ತಷ್ಟು ಹೆಚ್ಚು ಮಾಡಿರುವ ಸಾಧ್ಯತೆ ಇದೆ ಎಂದಿ ಹೇಳಿದ್ದಾರೆ.

ಇನ್ನೂ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಕೆಲವೊಂದು ಸಂಘಟನೆಗಳು ಖಂಡಿತವಾಗಿ ಪ್ರಯೋಜನ ಪಡೆದುಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದಿರುವ ನರವಾಣೆ, 'ಹಿಂಸಾಚಾರದಿಂದ ಲಾಭ ಪಡೆಯುವ ಏಜೆನ್ಸಿಗಳು ಹಾಗೂ ಇತರ ವರ್ಗದವರು ಮಣಿಪುರದಲ್ಲಿ ಇದ್ದಿರಬಹುದು. ಇವರು ಯಾವುದೇ ಕಾರಣಕ್ಕೂ ಮಣಿಪುರ ಸಹಜ ಸ್ಥಿತಿಗೆ ಬರಬಾರದು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಹಿಂಸಾಚಾರಗಳು ಆಗುತ್ತಿದ್ದಾಗಲೇ ಅವರಿಗೆ ಉತ್ತಮ ಪ್ರಯೋಜನಗಳು ಸಿಗುತ್ತದೆ. ಎಲ್ಲಾ ಪ್ರಯತ್ನಗಳ ನಡುವೆಯೂ ಹಿಂಸಾಚಾರ ನಿರಂತರವಾಗಿ ಮುಂದುವರಿಯುತ್ತಿರುವುದನ್ನು ನಾವು ನೋಡುತ್ತಿರುವುದಕ್ಕೆ ಇದೂ ಒಂದು ಕಾರಣವಾಗಿರಬಹುದು. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯೋಚನೆ ಮಾಡಿ ಕೆಲಸ ಮಾಡುತ್ತಿರಬಹುದು' ಎಂದಿದ್ದಾರೆ.

ನಿರ್ಭಯ ಘಟನೆ-ಮಣಿಪುರ ಹಿಂಸಾಚಾರ ಪ್ರತಿಭಟನೆ ಹೋಲಿಸಿ ಪೇಚಿಗೆ ಸಿಲುಕಿದ ಕಾಂಗ್ರೆಸ್!

ಕಲಹ ಪೀಡಿತ ರಾಜ್ಯದಲ್ಲಿ ಮಾದಕವಸ್ತು ಕಳ್ಳಸಾಗಣೆಯ ಪಾತ್ರದ ಬಗ್ಗೆ ಜನರಲ್ (ನಿವೃತ್ತ) ನರವಾಣೆ ತಿಳಿಸಿದ್ದು, ಮಾದಕವಸ್ತು ಕಳ್ಳಸಾಗಣೆ ಮಣಿಪುರದಲ್ಲಿ ಯಾವಾಗಲೂ ಇರುತ್ತದೆ ಮತ್ತು ವಶಪಡಿಸಿಕೊಂಡ ಮಾದಕ ದ್ರವ್ಯದ ಪ್ರಮಾಣವು ವರ್ಷಗಳಲ್ಲಿ ಹೆಚ್ಚಾಗಿದೆ ಎಂದು ಹೇಳಿದರು. "ನಾವು ಗೋಲ್ಡನ್ ಟ್ರಯಾಂಗಲ್‌ನಿಂದ (ಥಾಯ್ಲೆಂಡ್, ಮ್ಯಾನ್ಮಾರ್ ಮತ್ತು ಲಾವೋಸ್ ಗಡಿಗಳು ಸಂಧಿಸುವ ಪ್ರದೇಶ) ಸ್ವಲ್ಪವೇ ದೂರದಲ್ಲಿದ್ದೇವೆ. ಮ್ಯಾನ್ಮಾರ್ ಯಾವಾಗಲೂ ಅವ್ಯವಸ್ಥೆಯ ಮತ್ತು ಮಿಲಿಟರಿ ಆಡಳಿತದ ಸ್ಥಿತಿಯಲ್ಲಿದೆ. ಮ್ಯಾನ್ಮಾರ್‌ನಲ್ಲಿ ಉತ್ತಮ ಸಮಯದಲ್ಲೂ ಸರ್ಕಾರ ಮಾತ್ರ ಮಧ್ಯ ಮ್ಯಾನ್ಮಾರ್‌ನ ಮೇಲೆ ನಿಯಂತ್ರಣವನ್ನು ಹೊಂದಿತ್ತು. ಭಾರತದೊಂದಿಗೆ ಅಥವಾ ಚೀನಾದೊಂದಿಗೆ ಅಥವಾ ಥೈಲ್ಯಾಂಡ್‌ನಂಥ ಬಾಹ್ಯ ಗಡಿ ಹೊಂದಿರುವ ರಾಜ್ಯದೊಂದಿಗೆ ಅವರ ಯಾವುದೇ ನಿರ್ಧಾರಗಳು ಅನ್ವಯವಾಗುತ್ತಿರಲಿಲ್ಲ. ಆದ್ದರಿಂದ, ಮಾದಕವಸ್ತು ಕಳ್ಳಸಾಗಣೆ ಯಾವಾಗಲೂ ಇತ್ತು, "ಎಂದು ಅವರು ಹೇಳಿದ್ದಾರೆ.

ಮಣಿಪುರ ಮಹಿಳೆಯ ಬೆತ್ತಲೆ ಪರೇಡ್‌: ಪರೇಡ್‌ಗೆ ಆರ್‌ಎಸ್ಎಸ್ ನಂಟು ಎಂದವರ ವಿರುದ್ಧ ಕೇಸ

 

Latest Videos
Follow Us:
Download App:
  • android
  • ios