Asianet Suvarna News Asianet Suvarna News

ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಸಂಹಾರ: ರಾಜನಾಥ್ ಸಿಂಗ್ ಹೇಳಿಕೆ ಪ್ರಚೋದನಾಕಾರಿ, ಪಾಕ್‌

ಭಾರತ ಸರ್ಕಾರ, ಪಾಕಿಸ್ತಾನದೊಳಗಿನ ನಾಗರಿಕರನ್ನು 'ಉಗ್ರರು' ಎಂದು ಕರೆದು ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅಂತಾರಾಷ್ಟ್ರೀಯ ಸಮಯ ದಾಯವು ಭಾರತದ ಈ ಹೀನ ಹಾಗೂ ದುಷ್ಕೃತ್ಯವನ್ನು ತಡೆಯಬೇಕು' ಎಂದು ಕಿಡಿಕಾರಿದ ಪಾಕಿಸ್ತಾನದ ವಿದೇಶಾಂಗ ಇಲಾಖೆ 

Defense Minister of India Rajnath Singh's Statement Provocative Says Pakistan grg
Author
First Published Apr 7, 2024, 12:42 PM IST

ನವದೆಹಲಿ(ಏ.07):  ಭಾರತದಲ್ಲಿ ದುಷ್ಕೃತ್ಯ ಎಸಗುವ ಉಗ್ರರು ಪಾಕಿಸ್ತಾನದೊಳಗೆ ನುಗ್ಗಿದರೂ, ಆ ದೇಶದೊಳಗೆ ನುಗ್ಗಿ ಹೊಡಿತೀವೆ ಎಂಬ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಪ್ರಚೋದನಾಕಾರಿಯಾಗಿದೆ ಮತ್ತು ಶಾಂತಿ ಕದಡುವಂತಿದೆ ಎಂದು ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ.

ಸಿಂಗ್ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ, 'ಭಾರತ ಸರ್ಕಾರ, ಪಾಕಿಸ್ತಾನದೊಳಗಿನ ನಾಗರಿಕರನ್ನು 'ಉಗ್ರರು' ಎಂದು ಕರೆದು ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅಂತಾರಾಷ್ಟ್ರೀಯ ಸಮಯ ದಾಯವು ಭಾರತದ ಈ ಹೀನ ಹಾಗೂ ದುಷ್ಕೃತ್ಯವನ್ನು ತಡೆಯಬೇಕು' ಎಂದು ಕಿಡಿಕಾರಿದೆ. 

ಉಗ್ರರ ದೇಶದೊಳಗೆ ನುಗ್ಗಿ ಹೊಡಿತೀವಿ: ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದೇನು?

ಪಾಕಿಸ್ತಾನದಲ್ಲಿ ಅನಾಮ ಧೇಯ ವ್ಯಕ್ತಿಗಳಿಂದ ಹತರಾದ 20ಕ್ಕೂ ಹೆಚ್ಚು ಉಗ್ರರ ಸಾವಿಗೆ ಭಾರತ ಕಾರಣ ಎಂದು ಬ್ರಿಟನ್ ನ ಗಾರ್ಡಿಯನ್ ಪತ್ರಿಕೆ ವರದಿಗೆ ಪ್ರತಿಕ್ರಿಯಿಸಿದ ಸಚಿವ ಸಿಂಗ್ ಭಾರತಕ್ಕೆ ತೊಂದರೆ ಕೊಡುವವರು ಪಾಕಿಸ್ತಾನಕ್ಕೆ ತೆರಳಿದರೂ, ಅಲ್ಲೇ ಹೊಗಿ ಕೊಲ್ಲುತ್ತೇವೆ' ಎಂದಿದ್ದರು.

Follow Us:
Download App:
  • android
  • ios