ತಮಿಳುನಾಡಿನಲ್ಲಿ ಮಟನ್ ಅಂಗಡಿಯ ಮಾಲೀಕ ಒಂದು ಪೀಸ್ ಮಟನ್ ಹೆಚ್ಚಿಗೆ ನೀಡಲು ನಿರಾಕರಿಸಿದ್ದಕ್ಕೆ ಸ್ಮಶಾನದಲ್ಲಿ ಕೆಲಸ ಮಾಡುವ ವ್ಯಕ್ತಿ ಕೊಳೆತ ಶವವನ್ನು ಅಂಗಡಿಯ ಮುಂದೆ ಎಸೆದಿದ್ದಾನೆ. ಮದ್ಯಪಾನ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಚೆನ್ನೈ (ಫೆ.10): ಅಚ್ಚರಿಯ ಘಟನೆಯಲ್ಲಿ, ಸ್ಮಶಾನದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತಮಿಳುನಾಡಿನ ಮಟನ್‌ ಶಾಪ್‌ನ ಎದುರು ಕೊಳೆತ ಶವ ಎಸೆದಿರುವ ಘಟನೆ ನಡೆದಿದೆ. ಒಂದು ಪೀಸ್‌ ಮಟನ್‌ಅನ್ನು ಹೆಚ್ಚು ಹಾಕಲು ಮಟನ್‌ ಅಂಗಡಿಯ ಮಾಲೀಕ ನಿರಾಕರಿಸಿದ್ದ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಸ್ಥಳೀಯ ವರದಿಗಳ ಪ್ರಕಾರ ವ್ಯಕ್ತಿಯನ್ನು ಕುಮಾರ್‌ ಎಂದು ಗುರುತಿಸಲಾಗಿದ್ದು, ಕೃತ್ಯ ನಡೆಯುವ ವೇಳೆ ಆತ ಮದ್ಯಪಾನ ಮಾಡಿದ್ದ ಎನ್ನಲಾಗಿದೆ. ಈ ಕುರಿತಾಗಿ ಏಷ್ಯಾನೆಟ್‌ ನ್ಯೂಸ್‌ ಮಲಯಾಳಂ ವರದಿ ಮಾಡಿದ್ದು, ತಮಿಳುನಾಡಿನ ಥೇನಿಯ ಸಂಗೀತಾ ಮಟನ್‌ ಸ್ಟಾಲ್‌ ಬಳಿ ಈ ಘಟನೆ ನಡೆದಿದೆ. ಈ ಮಟನ್‌ ಶಾಪ್‌ಅನ್ನು ಮಣಿಯರಸನ್ ಎನ್ನುವ ವ್ಯಕ್ತಿ ನಡೆಸುತ್ತಿದ್ದರು. ಆರೋಪಿಯಾಗಿರುವ ಕುಮಾರ್‌, ಸ್ಮಶಾನದಲ್ಲಿ ಶವ ಸುಡುವ ಕೆಲಸ ಮಾಡುತ್ತಿದ್ದಾನೆ. ನಾಲ್ಕು ವರ್ಷಗಳ ಹಿಂದಿನವರೆಗೂ ಮಣಿಯರಸನ್ ಒಡೆತನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. 

Add Asianetnews Kannada as a Preferred SourcegooglePreferred

ಘಟನೆ ನಡೆಯುವ ದಿನ ಬೆಳಗ್ಗೆ ಕುಮಾರ್‌ ಅತಿಯಾಗಿ ಕುಡಿದಿದ್ದ ಎನ್ನಲಾಗಿದೆ. ಮಣಿಯರಸನ್‌ ಅವರ ಮಟನ್‌ ಶಾಪ್‌ಗೆ ಬಂದಿದ್ದ ಆತ ಮಟನ್‌ ಖರೀದಿ ಮಾಡಿದ್ದಾನೆ. ಈ ವೇಳೆ ಒಂದು ಪೀಸ್ ಮಟನ್‌ ಅನ್ನು ಹೆಚ್ಚಿಗೆ ಹಾಕುವಂತೆ ಮನವಿ ಮಾಡಿದ್ದಾನೆ. ಇದಕ್ಕೆ ಮಣಿಯರಸನ್‌ ವಿರೋಧ ವ್ಯಕ್ತಪಡಿಸಿದ್ದ. ಮಟನ್‌ ಬೆಲೆ ಹೆಚ್ಚಾಗಿದ್ದು, ಪೀಸ್‌ ನೀಡೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಸಿಟ್ಟಾಗಿದ್ದ ಕುಮಾರ್‌, ಸೀದಾ ಸ್ಮಶಾನಕ್ಕೆ ಹೋಗಿದ್ದಾನೆ. ಈ ವೇಳೆ ಕೊಳೆತ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬಂದು ಮಣಿಯರಸನ್‌ನ ಅಂಗಡಿಯ ಎದುರುಗಡೆ ಎಸೆದಿದ್ದಾನೆ. ಈ ಫೋಟೋ ಕೂಡ ವೈರಲ್‌ ಆಗಿದೆ.

ಬೆಂಗಳೂರಿನ ಶ್ರೀಮಂತರಿಗೆ ಮಾತ್ರವೇ ಇನ್ನು ಮೆಟ್ರೋ, ಬಡವ, ಮಧ್ಯಮವರ್ಗಕ್ಕೆ ಸರ್ಕಾರಗಳೇ ಶತ್ರು!

ತಕ್ಷಣವೇ ಅಂಗಡಿಯ ಮಾಲೀಕ ಪೊಲೀಸರಿಗೆ ಈ ಮಾಹಿತಿ ನೀಡಿದ್ದು, ತಕ್ಷಣವೇ ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಮೊದಲಿಗೆ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಮೃತದೇಹವನ್ನು ಅಲ್ಲಿಂದ ತೆಗೆಯಲು ಪೊಲೀಸರು ಕೂಡ ನಿರಾಕರಿಸಿದ್ದರು ಎನ್ನಲಾಗಿದೆ. ಆ ಬಳಿಕ ಪೊಲೀಸರೆ ಒಂದು ಆಂಬ್ಯುಲೆನ್ಸ್‌ಅನ್ನು ಕರೆದು, ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಬಳಿಕ ಕುಮಾರ್‌ನನ್ನು ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

Haveri: 'ಡಾಬಾ ಬಂತು ಊಟ ಮಾಡ್ತೀಯಾ' ಅಂತಾ ಪತ್ನಿ ಕಣ್ಣೀರಿಟ್ಟಾಗ ಎದ್ದುಕೂತ ಮೃತವ್ಯಕ್ತಿ!