Asianet Suvarna News Asianet Suvarna News

ಆಸ್ಪತ್ರೆಗೆ ದಾಖಲಾದ ಪ್ರಿಯಾಂಕಾ ಗಾಂಧಿ ವಾದ್ರಾ, ಭಾರತ್‌ ಜೋಡೋ ಯಾತ್ರೆಗಿಲ್ಲ ಕಾಂಗ್ರೆಸ್‌ ನಾಯಕಿ!

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ಉತ್ತರ ಪ್ರದೇಶಕ್ಕೆ ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಪ್ರವೇಶ ಮಾಡುವ ವೇಳೆಗೆ ಅವರು ಹಾಜರಿರಲಿಲ್ಲ ಎನ್ನಲಾಗಿದೆ.

Congress leader Priyanka Gandhi Vadra in hospital will not join Bharat Jodo Nyay Yatra san
Author
First Published Feb 16, 2024, 8:14 PM IST

ನವದೆಹಲಿ (ಫೆ.16): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ಶುಕ್ರವಾರ ಪಕ್ಷದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಅವರು ಸೇರಿಕೊಂಡಿಲ್ಲ. ನ್ಯಾಯ್‌ ಯಾತ್ರೆ ನಡೆಸುತ್ತಿರುವ ಸಹೋದರ ರಾಹುಲ್‌ ಗಾಂಧಿ ಹಾಗೂ ಇತರ ಕಾಂಗ್ರೆಸ್‌ ನಾಯಕರಿಗೆ ಶುಭಾಶಯವನ್ನು ಕಳಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಆರೋಗ್ಯ ಚೇತರಿಸಿಕೊಂಡ ಬಳಿಕ ಯಾತ್ರೆಯನ್ನು ಕೂಡಿಕೊಳ್ಳುವುದಾಗಿ ತಿಳಿಸಿದ್ದಾರೆ. ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಶುಕ್ರವಾರ ಸಂಜೆ ಉತ್ತರ ಪ್ರದೇಶ ಪ್ರವೇಶಿಸಿದೆ. ಯಾತ್ರೆಯು ಬಿಹಾರದಿಂದ ಉತ್ತರಪ್ರದೇಶವನ್ನು ಪ್ರವೇಶಿಸಿದ ನಂತರ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದ ಚಂದೌಲಿಯಲ್ಲಿ ರಾಹುಲ್‌ ಗಾಂಧಿ ಜೊತೆ ಸೇರಬೇಕಿತ್ತು ಎಂದು ಮೂಲಗಳು ತಿಳಿಸಿವೆ.

ಭಾರತ್‌ ಜೋಡೋ ಯಾತ್ರೆ ಉತ್ತರ ಪ್ರದೇಶ ತಲುಪುವುದನ್ನೇ ನಾನು ಕಾಯುತ್ತಿದ್ದೆ. ಆದರೆ, ಅನಾರೋಗ್ಯದ ಕಾರಣದಿಂದಾಗಿ, ನಾನು ಶುಕ್ರವಾರವೇ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾನು ಚೇತರಿಸಿಕೊಂಡ ಬಳಿಕ, ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯಲ್ಲಿ ಭಾಗಿಯಾಗಲಿದ್ದೇನೆ. ಅಲ್ಲಿಯವರೆಗೂ, ಈ ಯಾತ್ರೆಯಲ್ಲಿ ಭಾಗವಹಿಸಿರುವ ಎಲ್ಲಾ ಯಾತ್ರಿಗಳಿಗೆ ಬೆಸ್ಟ್‌ ವಿಶ್‌ ಹೇಳುತ್ತಿದ್ದೇನೆ. ನನ್ನ ಆತ್ಮೀಯ ಸಹೋದರ ಹಾಗೂ ನನ್ನ ಕಾಂಗ್ರೆಸ್‌ ಜೊತೆಗಾರರು ಉತ್ತರ ಪ್ರದೇಶದಿಂದ ಈ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಚಂದೌಲಿ-ಬನಾರಸ್‌ಗೆ ಈ ಯಾತ್ರೆಯನ್ನು ಸ್ವಾಗತಿಸಲು ನಮ್ಮ ಕಾರ್ಯಕರ್ತರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಉತ್ತರ ಪ್ರದೇಶ ತಲುಪಿದ ರಾಹುಲ್ ಯಾತ್ರೆಗೆ ಪ್ರಿಯಾಂಕಾ ಗೈರು, ಗೊಂದಲಕ್ಕೆ ತೆರೆ ಎಳೆದ ನಾಯಕಿ!

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಣಿಪುರದಿಂದ ಮುಂಬೈಗೆ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಯಾತ್ರೆಯು ಪ್ರಸ್ತುತ ಬಿಹಾರದ ಮೂಲಕ ಹಾದು ಹೋಗುತ್ತಿದೆ. ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಹಾರದ ಔರಂಗಾಬಾದ್‌ನಲ್ಲಿ ಗುರುವಾರ ನಡೆದ ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದಾರೆ.

ಸೋನಿಯಾ ಗಾಂಧಿ ರಾಜ್ಯಸಭೆಗೆ, ಅಮ್ಮನ ಕ್ಷೇತ್ರದಿಂದ ಮಗಳು ಪ್ರಿಯಾಂಕಾ ಲೋಕಸಭೆಗೆ ಸ್ಪರ್ಧೆ..?

ಶುಕ್ರವಾರ ಸಂಜೆ, ಯಾತ್ರೆಯು ಲೋಕಸಭೆಗೆ ಗರಿಷ್ಠ ಸಂಖ್ಯೆಯ ಸಂಸದರನ್ನು ಕಳುಹಿಸುವ ಪ್ರಮುಖ ಹಿಂದಿ ಹೃದಯ ರಾಜ್ಯವಾದ ಉತ್ತರ ಪ್ರದೇಶದಲ್ಲಿ ನಡೆಯಲಿದೆ. ಇದು ಫೆಬ್ರವರಿ 16 ರಿಂದ 21 ರವರೆಗೆ ಮತ್ತು ನಂತರ ಫೆಬ್ರವರಿ 24 ರಿಂದ 25 ರವರೆಗೆ ರಾಜ್ಯದಲ್ಲಿ ಸಂಚರಿಸಲಿದೆ. ಕಾಂಗ್ರೆಸ್ ಪ್ರಕಾರ, ಫೆಬ್ರವರಿ 22 ಮತ್ತು 23 ಯಾತ್ರೆಗೆ ವಿಶ್ರಾಂತಿ ದಿನಗಳಾಗಿವೆ. ಪೂರ್ವ-ಪಶ್ಚಿಮ ಮಣಿಪುರ-ಮುಂಬೈ ಯಾತ್ರೆಯು 15 ರಾಜ್ಯಗಳ ಮೂಲಕ 6,700 ಕಿಮೀ ಕ್ರಮಿಸುತ್ತದೆ ಮತ್ತು ದಾರಿಯಲ್ಲಿ ಸಾಮಾನ್ಯ ಜನರನ್ನು ಭೇಟಿಯಾಗುವಾಗ "ನ್ಯಾಯ" (ನ್ಯಾಯ) ಸಂದೇಶವನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ.
 

Follow Us:
Download App:
  • android
  • ios