ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರು, 'ಕಾಕ್ರೋಚ್‌ ಜನತಾ ಪಾರ್ಟಿ'ಯು ಭಾರತವನ್ನು ಅಸ್ಥಿರಗೊಳಿಸಲು ಮತ್ತು ಪ್ರಧಾನಿ ಮೋದಿಯವರನ್ನು ಗುರಿಯಾಗಿಸಲು ನಡೆಸುತ್ತಿರುವ ಗಡಿಯಾಚೆಗಿನ ಕಾರ್ಯಾಚರಣೆಯ ಭಾಗವಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ವಿಪಕ್ಷಗಳ ಕೆಲವು ವಿಪಕ್ಷಗಳ ಕುಮ್ಮಕ್ಕು?

ತಿರುವನಂತಪುರಂ: ‘ಕಾಕ್ರೋಚ್‌ ಜನತಾ ಪಾರ್ಟಿಯು ಗಡಿಯಾಚೆಗಿನ ಪ್ರಭಾವಿ ಕಾರ್ಯಾಚರಣೆಯ ಒಂದು ಭಾಗ. ಇದು ಭಾರತವನ್ನು ಅಸ್ಥಿರಗೊಳಿಸುವ ಉದ್ದೇಶ ಹೊಂದಿದೆ. ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು ಇದನ್ನು ನಡೆಸಲಾಗುತ್ತಿದೆ’ ಎಂದು ಕೇರಳ ಬಿಜೆಪಿ ಅಧ್ಯಕ್ಷ, ಶಾಸಕ ರಾಜೀವ್‌ ಚಂದ್ರಶೇಖರ್‌ ಶನಿವಾರ ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಕಾಕ್ರೋಚ್‌ ಪಾರ್ಟಿಯು ಗಡಿಯಾಚೆಗಿನ ಕಾರ್ಯಾಚರಣೆಯ ಒಂದು ಭಾಗ. ವಿಪಕ್ಷಗಳ ಕೆಲವು ಭಾಗಗಳಿಂದ ಇದಕ್ಕೆ ಸಹಾಯ ದೊರೆಯುತ್ತಿದೆ. ಸಾಮಾಜಿಕ ಮಾಧ್ಯಮ, ಬಾಟ್‌ಗಳು, ಎಐ ಮತ್ತು ಅದರ ಶಸ್ತ್ರಾಸ್ತ್ರೀಕರಣದ ಯುಗದಲ್ಲಿ, ಇಂಥ ಕಾರ್ಯತಂತ್ರಗಳು ದೇಶವನ್ನು ಅಸ್ಥಿರಗೊಳಿಸುವ ಅಪಾಯಕಾರಿ ಮಾರ್ಗಗಳಾಗಿವೆ. ಯಾವುದೇ ಜಿರಳೆ, ವಿಪಕ್ಷದ ರಾಜಕಾರಣಿ, ಮೋದಿ ದ್ವೇಷಿ ಜೋಕರ್ ಅಥವಾ ವಿದೇಶಿ ಹಿತಾಸಕ್ತಿ ದೇಶವನ್ನು ‘ವಿಕಸಿತ ಭಾರತ’ವನ್ನಾಗಿಸುವ ಸಂಕಲ್ಪವನ್ನು ಹಳಿತಪ್ಪಿಸಲು ಸಾಧ್ಯವಿಲ್ಲ’ ಎಂದರು.

Scroll to load tweet…