ಭೀಮಾ ಆರೋಪಿಗಳ ವಿರುದ್ಧ ಮೋದಿ ಹತ್ಯೆ, ದೇಶದ್ರೋಹ ಆರೋಪ
2017 ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕೋರೆಗಾಂವ್ ಭೀಮಾ ಯುದ್ಧ ಸ್ಮಾರಕ ಕಾರ್ಯಕ್ರಮದ ಬಳಿಕ ನಡೆದ ಹಿಂಸೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಎಲ್ಲಾ 19 ಜನರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ, ಸರ್ಕಾರ ಉರುಳಲು ಯತ್ನಿಸಿದ ಮತ್ತು ದೇಶದ ವಿರುದ್ಧ ಸಮರ ಸಾರಿದ ಗಂಭೀರ ಆರೋಪ ಹೊರಿಸಲಾಗಿದೆ.
ಪುಣೆ (ಡಿ. 20): 2017 ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕೋರೆಗಾಂವ್ ಭೀಮಾ ಯುದ್ಧ ಸ್ಮಾರಕ ಕಾರ್ಯಕ್ರಮ ದ ಬಳಿಕ ನಡೆದ ಹಿಂಸೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಎಲ್ಲಾ 19 ಜನರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ, ಸರ್ಕಾರ ಉರುಳಿಸಲು ಯತ್ನಿಸಿದ ಮತ್ತು ದೇಶದ ವಿರುದ್ಧ ಸಮರ ಸಾರಿದ ಗಂಭೀರ ಆರೋಪ ಹೊರಿಸಲಾಗಿದೆ.
ಹಿಂದು ನಾಯಕರ ಹತ್ಯೆಗೆ ತಮಿಳುನಾಡಿಗೆ 4 ಉಗ್ರರ ಪ್ರವೇಶ: ಭಾರೀ ಕಟ್ಟೆಚ್ಚರ
ಬುಧವಾರ ಪೊಲೀ ಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಈ ಅಂಶಗಳಿವೆ. ಭೀಮಾ ಕೋರೆ ಗಾಂವ್ ಹಿಂಸಾಚಾರದ ಬಳಿಕ ಹಲವು ಸಾಮಾಜಿಕ ಹೋರಾಟಗಾರರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು.
ಈ ವೇಳೆ ಹಿಂಸಾಚಾರದಲ್ಲಿ ನಕ್ಸಲರ ಕೈವಾಡದ ಜೊತೆಗೆ, ಆರೋಪಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಾದರಿಯಲ್ಲೇ ಹತ್ಯೆ ಮಾಡಲು ಸಂಚು ರೂಪಿಸಿದ, ಕೇಂದ್ರ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಕುರಿತು ದಾಖಲೆಗಳು ಲಭ್ಯವಾಗಿದ್ದವು.