ಬದಲಾಗುತ್ತಿರುವ ಆಧುನಿಕ ಯುದ್ಧದ ಸವಾಲುಗಳನ್ನು ಪರಿಣಾಮಕಾರಿ ಎದುರಿಸಲು, ಚೀನಾ, ಪಾಕಿಸ್ತಾನದ ಕುಟಿಲ ಯುದ್ಧನೀತಿಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆಗೆ ಇದೀಗ ‘ಭೈರವ’ ಪಡೆಯೊಂದನ್ನು ಸಿದ್ಧಪಡಿಸಿದೆ.

ನವದೆಹಲಿ: ಬದಲಾಗುತ್ತಿರುವ ಆಧುನಿಕ ಯುದ್ಧದ ಸವಾಲುಗಳನ್ನು ಪರಿಣಾಮಕಾರಿ ಎದುರಿಸಲು, ಚೀನಾ, ಪಾಕಿಸ್ತಾನದ ಕುಟಿಲ ಯುದ್ಧನೀತಿಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆಗೆ ಇದೀಗ ‘ಭೈರವ’ ಪಡೆಯೊಂದನ್ನು ಸಿದ್ಧಪಡಿಸಿದೆ. ಒಂದು ಲಕ್ಷ ಯೋಧರನ್ನೊಳಗೊಂಡು ರಚಿಸಲಾಗಿರುವ ಈ ಹೊಸ ವಿಶೇಷ ಪಡೆ ಶತ್ರುಗಳ ಮೇಲೆ ತ್ವರಿತ ದಾಳಿ ಹಾಗೂ ಕ್ಲಿಷ್ಟಕರ ಕಾರ್ಯಾಚರಣೆ ವೇಳೆ ಸೇನೆಗೆ ಬೆನ್ನುಲುಬಾಗಿ ನಿಲ್ಲಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪದಾತಿದಳದಿಂದ ಆಯ್ಕೆಮಾಡಲಾದ ಯೋಧರಿಗೆ ಐದು ತಿಂಗಳ ಕಠಿಣ ತರಬೇತಿ ಬಳಿಕ ಈ ವಿಶೇಷ ಪಡೆ ರಚಿಸಲಾಗಿದೆ. ಯುದ್ಧ, ಸೇನಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಡ್ರೋನ್‌ಗಳನ್ನು ಬಳಸಿ ಪರಿಣಾಮಕಾರಿ ದಾಳಿ ನಡೆಸಲು ಈ ಪಡೆಗೆ ವಿಶೇಷ ತರಬೇತಿ ನೀಡಲಾಗಿದೆ. ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ ಈ ಪಡೆಗಳನ್ನು ನಿಯೋಜಿಸಲು ಉದ್ದೇಶಲಾಗಿದೆ.

ಏನಿದು ಭೈರವಪಡೆ?

ಇದೊಂದು ವಿಶೇಷ ಲೈಟ್‌ ಕಮಾಂಡೋ ಪಡೆಯಾಗಿದೆ. ಪದಾತಿದಳದಿಂದ ಆಯ್ಕೆ ಮಾಡಲಾದ ಈ ಪಡೆಯ ಯೋಧರಿಗೆ ಆಧುನಿಕ ಯುದ್ಧದ ಕಠಿಣ ತರಬೇತಿ ನೀಡಲಾಗಿದೆ. ಶತ್ರುಗಳ ಮೇಲೆ ದಿಢೀರ್‌ ಹಾಗೂ ಭಾರೀ ಪ್ರಮಾಣದ ದಾಳಿಗೆ ಈ ಪಡೆ ರಚಿಸಲಾಗಿದೆ. ಈವರೆಗೆ 15 ಭೈರವ್ ಬಟಾಲಿಯನ್‌ಗಳನ್ನು ರಚಿಸಿ, ಗಡಿಯಲ್ಲಿ ನಿಯೋಜಿಸಲಾಗಿದ್ದು, ಈ ಸಂಖ್ಯೆಯನ್ನು 25ಕ್ಕೇರಿಸುವ ಗುರಿ ಸೇನೆಗಿದೆ. ಮುಖ್ಯವಾಗಿ ಪ್ಯಾರಾ ಸ್ಪೆಷನ್‌ ಫೋರ್ಸ್‌ ಮತ್ತು ಸಾಮಾನ್ಯ ಇನ್‌ಫ್ಯಾಂಟ್ರಿ ಬಟಾಲಿಯನ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಪಡೆ ರಚಿಸಲಾಗಿದೆ.

ರಾಜಸ್ಥಾನದವರನ್ನೇ ಈ ಪಡೆಗೆ ಸದ್ಯ ಆಯ್ಕೆ

ಮರುಭೂಮಿಯಲ್ಲಿ ಸದ್ಯ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ರಾಜಸ್ಥಾನದವರನ್ನೇ ಈ ಪಡೆಗೆ ಸದ್ಯ ಆಯ್ಕೆ ಮಾಡಲಾಗಿದೆ. ಸದ್ಯದ ಯುದ್ಧಗಳು ಹೈಬ್ರಿಡ್‌ ಸ್ವರೂಪದ್ದಾಗಿದ್ದು, ಅದಕ್ಕೆ ತಕ್ಕಂತೆ ಈ ಪಡೆಗಳನ್ನು ಸಜ್ಜುಗೊಳಿಸಲಾಗಿದೆ.