Asianet Suvarna News Asianet Suvarna News

ಹಿಂಸಾಚಾರದಲ್ಲಿ ಬೆಂದಿರುವ ಮಣಿಪುರ ಜನತೆಗೆ ಮತ್ತೊಂದು ಆಘಾತ, ಹಲೆವೆಡೆ ಭೂಕಂಪನ!

ಹಿಂಸಾಚಾರ, ಮಹಿಳೆಯ ಬೆತ್ತಲೆ ಮೆರವಣಿಗೆ ಸೇರಿದಂತೆ ಹಲವು ಕಾರಣಗಳಿಂದ ಮಣಿಪುರ ಬೆಂದು ಹೋಗಿದೆ. ಈ ಗಾಯದ ಮೇಲೆ ಮತ್ತೊಂದು ಬರೆ ಎಳೆಯಲಾಗಿದೆ. ಇಂದು ರಾಜಸ್ಥಾನ ಹಾಗೂ ಮಣಿಪುರದಲ್ಲಿ ಭೂಕಂಪನ ಸಂಭವಿಸಿದೆ.

Back to Back earthquake tremors Jaipur and Manipur no damage reported ckm
Author
First Published Jul 21, 2023, 3:25 PM IST | Last Updated Jul 21, 2023, 3:25 PM IST

ನವದೆಹಲಿ(ಜು.21) ಹಿಂಸಾಚಾರ, ಗಲಭೆ, ದಾಳಿ, ಗುಂಡಿನ ಶಬ್ದದ ಜೊತೆಗೆ ಬದುಕು ಸಾಗಿಸುತ್ತಿರುವ ಮಣಿಪುರದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಇಂದು ಮಣಿಪುರ, ರಾಜಸ್ಥಾನ ಭಾಗದಲ್ಲಿ ಭೂಕಂಪನವಾಗಿದೆ. ಮಣಿಪುರದ ಉರುಕುಲ್ ಭಾಗದಲ್ಲಿ 3.5ರ ತೀವ್ರತೆಯಲ್ಲಿ ಭೂಕಂಪನ ಸಂಭಿವಿಸಿದೆ. ಲಘು ಭೂಕಂಪನವಾಗಿರುವ ಕಾರಣ ಮಣಿಪುರದಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ. ಆದರೆ ಉರುಕುಲ್ ಭಾಗದಲ್ಲಿ ಹಲವರು ಭೂಮಿ ಕಂಪಿಸುತ್ತಿದ್ದಂತೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಮಣಿಪುರಕ್ಕೂ ಮೊದಲು ರಾಜಸ್ಥಾನದ ಜೈಪುರ್‌ದಲ್ಲೂ ಭೂಕಂಪನವಾಗಿದೆ. ಜೈಪುರದಲ್ಲಿ ಹಲವು ಬಾರಿ ಭೂಮಿ ಕಂಂಪಿಸಿದೆ. 

ಇಂದು ಮುಂಜಾನೆ 4.27ರ ಹೊತ್ತಿಗೆ ಜೈಪುರದ ಕೆಲ ಭಾಗದಲ್ಲಿ 4.4 ರಿಕ್ಟರ್ ಮಾಪನ ತ್ರೀವತೆಯಲ್ಲಿ ಭೂಮಿ ಕಂಪಿಸಿದೆ. ಕೆಲವೇ ಕ್ಷಣಗಳಲ್ಲಿ 3.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇನ್ನು ಬೆಳಗ್ಗೆ 5.10 ನಿಮಿಷಕ್ಕೆ 3.4ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಆರಂಭಿಕ 2 ಭೂಕಂಪನದಿಂದ ಜನರು ಎಚ್ಚೆತ್ತುಕೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇನ್ನು ಮೂರನೇ ಭಾರಿ ಭೂಮಿ ಕಂಪಿಸಿದಾಗ ಆತಂಕ ಹೆಚ್ಚಾಗಿದೆ. 

 

ಜಮ್ಮು ಕಾಶ್ಮೀರದಲ್ಲಿ 5.4 ತೀವ್ರತೆಯ ಭೂಕಂಪ, ದೆಹಲಿಯಲ್ಲೂ ಕಂಪಿಸಿದ ಭೂಮಿ!

ಭೂಕಂಪನದ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಹಲವು ವಿಡಿಯೋಗಳಲ್ಲಿ ಭೂಮಿ ಕಂಪಿಸುತ್ತಿರುವ ಹಾಗೂ ಜನರು ಭಯಭೀತಗೊಂಡಿರುವ ದೃಶ್ಯಗಳಿವೆ. ಅದೃಷ್ಟವಶಾತ್ ಜೈಪುರ ಹಾಗೂ ಮಣಿಪುರದಲ್ಲಿ ಲಘು ಭೂಕಂಪನ ಯಾವುದೇ ಹಾನಿ ಮಾಡಿಲ್ಲ. 

ಭಾರತದಲ್ಲಿ ಇತ್ತೀಚೆಗೆ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿಲಘು ಭೂಕಂಪನಗಳು ಸಂಭವಿಸಿತ್ತು. ಇತ್ತ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಭೂಕುಸಿತ ಸಂಭಲಿಸಿತ್ತು. ಇದರ ಬೆನ್ನಲ್ಲೇ ಭೂಕಂಪನವೂ ಸಂಭವಿಸಿದೆ. ಇತ್ತೀಚೆಗೆ ಲಾಹೌಲ್‌ ಹಾಗೂ ಸ್ಪಿಟಿ ಜಿಲ್ಲೆಗಳಲ್ಲಿ 3.1 ಹಾಗೂ 3.2 ತೀವ್ರತೆಯ ಅವಳಿ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಈ ನಡುವೆ ಭಾರಿ ಮಳೆಯಿಂದಾಗಿ ಚಂದ್ರತಾಳ್‌ ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿ ಭಾರಿ ಅತಂತ್ರದಲ್ಲಿ ಸಿಲುಕಿದ್ದ 290 ಪ್ರವಾಸಿಗರನ್ನು ಕರೆತರಲು ಕಂದಾಯ ಸಚಿವ ಜಗತ್‌ ಸಿಂಗ್‌ ನೇಗಿ ಅವರನ್ನು ಕಳಿಸಲಾಗಿದೆ. 300 ಪ್ರವಾಸಿಗರ ಪೈಕಿ ಅನಾರೋಗ್ಯಕ್ಕೆ ತುತ್ತಾಗಿದ್ದ 7 ಜನರನ್ನು ಭಂಟರ್‌ಗೆ ಏರ್‌ಲಿಫ್‌್ಟಮಾಡಲಾಗಿದೆ. ಮಿಕ್ಕಂತೆ ಉಳಿದ ಪ್ರವಾಸಿಗರನ್ನು ಹೋಟೆಲ್‌, ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಆಶ್ರಯ ಕೊಟ್ಟು ಆಹಾರ ಪೂರೈಕೆ ಮಾಡಲಾಗುತ್ತಿದೆ. ಇದರಲ್ಲಿ ಇಸ್ರೇಲಿನ 37 ಜನ ಪ್ರವಾಸಿಗರು ಸುರಕ್ಷಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 

ಮಣಿಪುರಕ್ಕೆ ಮರುಗಿದ ಮಮತಾಗೆ ಬಂಗಾಳದ ನಗ್ನ ಮೆರವಣಿಗೆ ಕಾಣಿಸ್ಲೇ ಇಲ್ಲ; ಕಹಿ ಘಟನೆ ಬಿಚ್ಚಿಟ್ಟ ಬಿಜೆಪಿ!

ಇದಿಷ್ಟಲ್ಲದೇ ಕುಲ್ಲು ಹಾಗೂ ಮನಾಲಿಯಲ್ಲಿದ್ದ 25 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರನ್ನು ಸ್ಥಳಾಂತರ ಮಾಡಲಾಗಿದೆ. ಈಗಲೂ 1020 ರಸ್ತೆಗಳು ಬಂದ್‌ ಆಗಿದ್ದು, 1244 ಕುಡಿಯುವ ನೀರು ಸಂಪರ್ಕ ಕಳೆದುಕೊಂಡಿದೆ. 170 ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, 594 ಮನೆಗಳು ಭಾಗಶಃ ಹಾನಿಯಾಗಿದೆ. ಇಲ್ಲಿವರೆಗೂ 4000 ಕೋಟಿ ರು.ಗಳಷ್ಟುಹಾನಿ ಸಂಭವಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
 

Latest Videos
Follow Us:
Download App:
  • android
  • ios