Asianet Suvarna News Asianet Suvarna News

ಸಿಗರೇಟ್ ಎಳಿಬೇಡಿ ಎಂದ ಅರಣ್ಯ ಸಿಬ್ಬಂದಿಯ ಕಿವಿ ಕಚ್ಚಿ ಗಾಯಗೊಳಿಸಿದ ಮಹಿಳೆ!

ಅರಣ್ಯದಲ್ಲಿ ಸಿಗರೇಟ್ ಸೇದುತ್ತಿದ್ದ ಮಹಿಳೆಗೆ ಇಲ್ಲಿ ಧೂಮಪಾನ ಮಾಡಬೇಡಿ ಎಂದು ಹೇಳಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆ ಅರಣ್ಯ ಇಲಾಖೆಯ ಗುತ್ತಿಗೆ ಸಿಬ್ಬಂದಿಯೊಬ್ಬರ ಕಿವಿ ಕಚ್ಚಿ ಗಾಯಗೊಳಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಕುಕ್ರೈಲ್ ರಕ್ಷಿತಾರಣ್ಯದಲ್ಲಿ ನಡೆದಿದೆ.

A woman bitten the ear of a forest guard and injured him after he told not to smoke akb
Author
First Published Mar 19, 2024, 11:26 AM IST

ಲಕ್ನೋ: ಅರಣ್ಯದಲ್ಲಿ ಸಿಗರೇಟ್ ಸೇದುತ್ತಿದ್ದ ಮಹಿಳೆಗೆ ಇಲ್ಲಿ ಧೂಮಪಾನ ಮಾಡಬೇಡಿ ಎಂದು ಹೇಳಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆ ಅರಣ್ಯ ಇಲಾಖೆಯ ಗುತ್ತಿಗೆ ಸಿಬ್ಬಂದಿಯೊಬ್ಬರ ಕಿವಿ ಕಚ್ಚಿ ಗಾಯಗೊಳಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಕುಕ್ರೈಲ್ ರಕ್ಷಿತಾರಣ್ಯದಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನದ ನಂತರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಗುಡಂಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 ವರ್ಷದ ಅರಣ್ಯ ಇಲಾಖೆಯ ಗುತ್ತಿಗೆ ಸಿಬ್ಬಂದಿ ವಿಕಾಸ್ ಎಂಬಾತನನನ್ನು ಕಚ್ಚಿ ಮಹಿಳೆ ಗಾಯಗೊಳಿಸಿದ್ದಾಳೆ. ಬೇಸಿಗೆಯಾದ ಕಾರಣ ಎಲ್ಲೆಡೆ ಕಾಡ್ಗಿಚ್ಚು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯದ ಸಮೀಪ ಸಿಗರೇಟ್ ಎಳೆಯದಂತೆ ಮಹಿಳೆಗೆ ಅರಣ್ಯ ಸಿಬ್ಬಂದಿಯಾದ ವಿಕಾಸ್ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆಕೆ ವಿಕಾಸ್ ಕಿವಿಯನ್ನೇ ಕಚ್ಚಿದ್ದಾಳೆ.

ಜಗಳದ ವೇಳೆ ಪತಿಯ ಕಿವಿಯನ್ನೇ ಕಚ್ಚಿ ತುಂಡು ಮಾಡಿದ ಮಹಿಳೆ, ಕೇಸ್‌ ದಾಖಲು!

ಸಂತ್ರಸ್ತ ವಿಕಾಸ್ ಹೇಳುವ ಪ್ರಕಾರ, ಕುಕ್ರೈಲ್ ಅರಣ್ಯದ ಮೊದಲ ಹಂತದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ವಿಕಾಸ್‌ ಕೂಡಲೇ ಆ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಅಲ್ಲಿ ಜೋಡಿಯೊಂದು ತಮ್ಮ ಸ್ಕೂಟರ್ ಪಾರ್ಕ್‌ ಮಾಡಿ ಸಿಗರೇಟ್ ಎಳೆಯುತ್ತಿರುವುದು ಗಮನಕ್ಕೆ ಬಂದಿದೆ. ಅವರನ್ನು ನೋಡಿದ ವಿಕಾಸ್ ಇಲ್ಲಿ ಧೂಮಪಾನ ಮಾಡದಂತೆ ಬೈದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಜೋಡಿ ವಿಕಾಸ್‌ ಜೊತೆ ಜಗಳ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ ಇಬ್ಬರೂ ಸೇರಿ ವಿಕಾಸ್ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಮಹಿಳೆ ವಿಕಾಸ್ ಕಿವಿಯನ್ನು ಕಚ್ಚಿ ತುಂಡರಿಸಿದ್ದಾಳೆ. 

ನಿರ್ಜನ ಪ್ರದೇಶವಾಗಿದ್ದರಿಂದ ಅಲ್ಲಿ ಯಾರು ಇರಲಿಲ್ಲ, ನಾನು ಜೋರಾಗಿ ನೋವಿನಿಂದ ಕಿರುಚಲು ಶುರು ಮಾಡಿದಾಗ ಅವರು ಸ್ಕೂಟರ್ ಸ್ಟಾರ್ಟ್ ಮಾಡಿ ಅಲ್ಲಿಂದ ಪರಾರಿಯಾದರು ಎಂದು ವಿಕಾಸ್ ಹೇಳಿದ್ದಾರೆ. ಮಹಿಳೆ ಅರಣ್ಯ ನೌಕರನ ಬಲ ಕಿವಿಯನ್ನು ಕಚ್ಚಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಗುಡಂಬದ ಎಸ್‌ಎಚ್‌ಒ ನಿತೀಶ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ. ಐಪಿಸಿ 323 (ಸ್ವಯಂಪ್ರೇರಿತವಾಗಿ ಗಾಯವನ್ನುಂಟುಮಾಡುವುದು) ಮತ್ತು 324 (ಅಪಾಯಕಾರಿ ಆಯುಧದಿಂದ ಗಾಯಗೊಳಿಸುವುದು) ಅಡಿಯಲ್ಲಿ ವಾಹನ ಸಂಖ್ಯೆಯನ್ನು ಆಧರಿಸಿ ಜೋಡಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಜಾನ್ವಿ ಕಪೂರ್‌ ಕಿವಿ ಕಚ್ಚಿದ ವರುಣ್‌ ಧವನ್‌ ಫುಲ್ ಟ್ರೋಲ್!

Follow Us:
Download App:
  • android
  • ios