ತೆಲಂಗಾಣದಲ್ಲಿ ಆಟವಾಡುತ್ತಾ ಕಾರು ಸೇರಿದ ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪೋಷಕರು ಮನೆಯೊಳಗೆ ಮಾತುಕತೆಯಲ್ಲಿ ತೊಡಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ತೆಲಂಗಾಣ: ಪೋಷಕರಿಗೆ ತಿಳಿಯದೇ ಕಾರು ಏರಿದ್ದ ಪುಟ್ಟ ಮಕ್ಕಳಿಬ್ಬರು, ಬಳಿಕ ಅಲ್ಲೇ ಉಸಿರುಕಟ್ಟಿ ಸಾವನ್ನಪ್ಪಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. 4 ವರ್ಷದ ತನುಶ್ರೀ ಹಾಗೂ 5 ವರ್ಷದ ಅಭಿನೇತ್ರ ಮೃತಪಟ್ಟ ಮಕ್ಕಳು, ಈ ಇಬ್ಬರು ಮಕ್ಕಳ ಪೋಷಕರು ತಮ್ಮ ತಾಯಿಯ ಮನೆಗೆ ಅಂದರೆ ಮಕ್ಕಳ ಅಜ್ಜಿ ಮನೆಗೆ ತಮ್ಮ ಕುಟುಂಬದಲ್ಲಿ ಜರುಗಲಿದ್ದ ಮದುವೆಯೊಂದರ ಸಿದ್ಧತೆಯ ಬಗ್ಗೆ ಚರ್ಚೆ ನಡೆಸಲು ಬಂದಿದ್ದರು. ಈ ವೇಳೆ ಪೋಷಕರು ಒಳಗೆ ಮಾತುಕತೆಯಲ್ಲಿ ತೊಡಗಿದ್ದ ವೇಳೆ ಮಕ್ಕಳು ಆಟವಾಡುತ್ತಾ ಮನೆಯಿಂದ ಹೊರಗಡೆ ಬಂದಿದ್ದು, ಮನೆ ಹೊರಗೆ ನಿಲ್ಲಿಸಿದ್ದ ಕಾರಿನೊಳಗೆ ಸೇರಿಕೊಂಡಿದ್ದಾರೆ. ನಂತರ ಕಾರಿನ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ ಮನೆ ಒಳಗಡೆ ಚರ್ಚಿಸುತ್ತಾ ಕುಳಿತಿದ್ದ ಪೋಷಕರಿಗೆ ಮಕ್ಕಳು ಕಾರಿನ ಒಳಗೆ ಸೇರಿಕೊಂಡಿದ್ದು ಗೊತ್ತೆ. ಇಲ್ಲ, ಇತ್ತ ಕಾರಿನ ಒಳಗೆ ಒಂದು ಗಂಟೆಗೂ ಹೆಚ್ಚು ಕಾಲ ಇದ್ದ ಮಕ್ಕಳು ನಂತರ ಪ್ರಜ್ಞೆ ತಪ್ಪಿ ಕಾರಿನೊಳಗೆ ಬಿದ್ದಿದ್ದಾರೆ.

ಸುಮಾರು ಒಂದು ಗಂಟೆಯ ನಂತರ ಪೋಷಕರಿಗೆ ಈ ವಿಚಾರ ತಿಳಿದಿದ್ದು, ಕೂಡಲೇ ಪ್ರಜ್ಞಾಶೂನ್ಯರಾದ ಮಕ್ಕಳನ್ನು ಕರೆದುಕೊಂಡು ಅವರು ಸಮೀಪದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ವೈದ್ಯರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಮಕ್ಕಳ ಈ ಸಾವಿನಿಂದಾಗಿ ಪೋಷಕರು ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಕಾರಿನೊಳಗೆ ಆಟವಾಡುತ್ತಿದ್ದ ಮೂರು ಮಕ್ಕಳು ಉಸಿರುಕಟ್ಟಿ ಸಾವು

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೇವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ದಮರಗಿರಿ ಗ್ರಾಮದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಕೆಲ ಮೂಲಗಳ ಪ್ರಕಾರ ಕೀ ಬಳಸಿ ಕಾರಿನ ಒಳಗೆ ಹೋದ ಮಕ್ಕಳಿಗೆ ನಂತರ ಕಾರಿನ ಡೋರ್ ಅನ್‌ಲಾಕ್ ಮಾಡುವುದಕ್ಕೆ ಗೊತ್ತಾಗದೇ ಒಳಗೆ ಸಿಲುಕಿ ಈ ದುರಂತ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತ ಮನೆಯೊಳಗೆ ಮಾತುಕತೆ ಮುಗಿಸಿ ಮನೆಯಿಂದ ಹೊರಗೆ ಬಂದು ಕಾರಿನೊಳಗೆ ನೋಡಿದಾಗ ಪೋಷಕರಿಗೆ ಈ ಆಘಾತಕಾರಿ ಘಟನೆ ನಡೆದಿರುವುದು ತಿಳಿದು ಬಂದಿದೆ.

ಇಂತಹ ಪ್ರಕರಣ ಇದೇ ಮೊದಲಲ್ಲ, ಈ ಹಿಂದೆಯೂ ಮಕ್ಕಳು ಕಾರಿನ ಒಳಗೆ ಸಿಲುಕಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಹಲಲು ನಡೆದಿವೆ. ಇಂತಹ ಘಟನೆಗಳು ಆಗದಂತೆ ತಡೆಯಲು ಪೋಷಕರು ಬಹಳ ಜಾಗರೂಕರಾಗಿರಬೇಕಿದೆ. ಪುಟ್ಟ ಮಕ್ಕಳ ಕೈಗೆ ಕಾರಿನ ಕೀ ಸಿಗದಂತೆ ಎತ್ತಿಡಿ. ಕಣ್ಣೆದುರಿಂದ ದೂರಾದ ಮಕ್ಕಳ ಕಡೆ ಸದಾ ಒಂದು ಗಮನ ಇರಲಿ. ಎಲ್ಲೋ ಹೊರಗೆ ಆಟ ಆಡ್ಕೊಂಡಿರ್ತಾರೆ ಬಿಡು ಅಂತ ನಿರ್ಲಕ್ಷ್ಯ ವಹಿಸಿದರೆ ಇಂತಹ ಅನಾಹುತಗಳಿಗೆ ಸಾಕ್ಷಿಯಾಗಬೇಕಾದಿತ್ತು. 

ಸೆಫ್ಟಿಕ್ ಟ್ಯಾಂಕ್ ಕ್ಲೀನ್ ಮಾಡುತ್ತಿದ್ದ ಒಂದೇ ಕುಟುಂಬದ ಐವರು ಉಸಿರುಕಟ್ಟಿ ಸಾವು

ದೇವರಿಗೆ ಮೇಕೆ ಬಲಿ ನೀಡಲು ಹೋಗುತ್ತಿದ್ದಾಗ ವಿಚಿತ್ರ ಘಟನೆ
ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮೇಕೆಯನ್ನು ಬಲಿ ನೀಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದು ಮೇಕೆ ಮಾತ್ರ ಬದುಕುಳಿದಿದೆ. ಮಧ್ಯಪ್ರದೇಶದ ಜಬಲ್ಪುರದ ಚಾರ್ಗವಾನ್ ಪ್ರದೇಶದಲ್ಲಿ ಗುರುವಾರ ಆರು ಜನರನ್ನು ಹೊತ್ತೊಯ್ಯುತ್ತಿದ್ದ ಸ್ಕಾರ್ಪಿಯೋ ವಾಹನವೊಂದು ಸೇತುವೆಯಿಂದ ಉರುಳಿದ್ದು, ಸಮೀಪದ ಸೋಮಾವತಿ ನದಿಗೆ ಬಿದ್ದಿದೆ. ಈ ದುರಂತದಲ್ಲಿ ಸ್ಕಾರ್ಫಿಯೋ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ವಿಚಿತ್ರ ಎಂದರೆ ಇವರ ಕಾರಿನಲ್ಲಿದ್ದ ಇವರು ದೇಗುಲದಲ್ಲಿ ಬಲಿ ನೀಡುವುದಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದ ಮೇಕೆ ಮಾತ್ರ ಯಾವುದೇ ಗಾಯಗಳಿಲ್ಲದೇ ಪವಾಡ ಸದೃಶವಾಗಿ ಪಾರಾಗಿದ್ದು, ಅಲ್ಲಿನ ಸ್ಥಳೀಯರನ್ನು ಅಚ್ಚರಿಗೊಳ್ಳುವಂತೆ ಮಾಡಿದೆ. 

ಈ ದುರಂತದಲ್ಲಿ ಮೃತರಾದವರು ನರಸಿಂಗ್‌ಪುರ ಜಿಲ್ಲೆಯ ದುಲ್ಹಾ ದೇವ್ ಮಹಾರಾಜ್ ದೇವಸ್ಥಾನದಲ್ಲಿ ಸಾಂಕೇತಿಕ ಮೇಕೆ ಬಲಿ ನೀಡಿ ವಾಪಸಾಗುತ್ತಿದ್ದರು. ಅಂದರೆ ಸಂಪೂರ್ಣವಾಗಿ ಮೇಕೆಯ ಬಲಿ ನೀಡುವ ಬದಲು ಅದರ ಕಿವಿಯನ್ನು ಕತ್ತರಿಸಿ ದೇವರಿಗೆ ಸಾಂಕೇತಿಕ ಬಲಿ ನೀಡಿದ್ದರು. ಇದಾದ ನಂತರ ತಮ್ಮ ಸ್ಕಾರ್ಫಿಯೋ ಗಾಡಿಯಲ್ಲಿ ಗೋಟೆಗಾಂವ್‌ನಿಂದ ವಾಪಸ್ ಜಬಲ್‌ಪುರಕ್ಕೆ ಮರಳುತ್ತಿದ್ದಾಗ ಚಾರ್ಗವಾನ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.