Asianet Suvarna News Asianet Suvarna News

ಅಲ್ಲಿ ನೋವು, ಇಲ್ಲಿ ನೋವು ಅಂತ ಪೇನ್ ಕಿಲ್ಲರ್ಸ್ ತೆಗೆದುಕೊಳ್ಳೋ ಮುನ್ನ...!

ನಮ್ಮ ಅಡುಗೆಮನೆಯಲ್ಲೇ ಒಳ್ಳೆಯ ಪೇನ್‌ಕಿಲ್ಲರ್‌ಗಳಿವೆ. ಅವು ಯಾವುದು, ಯಾವುದಕ್ಕೆ ಬಳಸಬಹುದು ಎಂಬುದನ್ನು ನೋಡೋಣ.

 

you can find painkillers in your kitchen
Author
Bengaluru, First Published Jul 1, 2022, 2:45 PM IST

ನೋವು ನುಂಗಿ ಬದುಕುವುದು ಸುಲಭವಲ್ಲ. ಮಾನಸಿಕ ಮಾತ್ರವಲ್ಲ, ದೈಹಿಕ ನೋವು ಕೂಡ ಹೀಗೆ. ಅದನ್ನು ಆಗಲೇ ಉಪಶಮನ ಮಾಡಿಕೊಳ್ಳಬೇಕು. ಕೆಲವೊಮ್ಮೆ ಪೇನ್‌ಕಿಲ್ಲರ್ ಸಿಗುವುದಿಲ್ಲ. ನಿಮ್ಮ ಅಡುಗೆಮನೆಯಲ್ಲೇ ಸೂಕ್ತ ಪೇನ್‌ಕಿಲ್ಲರ್ ಸಿಗುವುದಾದರೆ ಎಷ್ಟು ಒಳ್ಳೆಯದು ಅಲ್ಲವೇ? ನಿಜ, ನಮ್ಮ ಅಡುಗೆಮನೆಯಲ್ಲೇ ಒಳ್ಳೆಯ ಪೇನ್‌ಕಿಲ್ಲರ್‌ಗಳಿವೆ. ಅವು ಯಾವುದು, ಯಾವುದಕ್ಕೆ ಬಳಸಬಹುದು ಎಂಬುದನ್ನು ನೋಡೋಣ. 

ಅರಿಶಿನ (Turmeric)
ಪ್ರತಿ ಭಾರತೀಯ ಅಡುಗೆಮನೆಯಲ್ಲಿ (kitchen) ಈ ಚಿನ್ನದ ಬಣ್ಣದ ಮಸಾಲೆ ಕಡ್ಡಾಯ. ಇದು ಉರಿಯೂತದ ಗುಣಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡಾಗ ಮ್ಯಾಜಿಕ್ ಮಾಡಬಹುದು. ಹಾಲಿನೊಂದಿಗೆ ಅರಿಶಿನವನ್ನು (Milk with Turmeric) ಬೆರೆಸಿ ಸೇವಿಸಿದಾಗ ದೇಹದ ನೋವು ವಾಸಿಯಾಗುತ್ತದೆ. ನೀವು ಬಾಯಿಯಲ್ಲಿ ಹುಣ್ಣುಗಳನ್ನು ಹೊಂದಿದ್ದರೆ, ಸ್ವಲ್ಪ ನೀರು ಮತ್ತು ತೆಂಗಿನ ಎಣ್ಣೆಯೊಂದಿಗೆ (Coconut Oil) ಅರಿಶಿನ ಪೇಸ್ಟ್ ಮಾಡಿ ನೋವು ಇರುವಲ್ಲಿ ಹಚ್ಚಿ  ವಿಶ್ರಾಂತಿ ಪಡೆಯಿರಿ. ಇದು ನಂಜುನಿರೋಧಕ ಮತ್ತು ಪ್ರತಿರೋಧ ಗುಣಲಕ್ಷಣಗಳನ್ನು ಹೊಂದಿದೆ. ಗಾಯದ ಮೇಲೆ ಹಚ್ಚಿದರೆ ಗುಣ ಕೂಡ ಆಗುತ್ತದೆ. ಇದು ಜ್ವರದಿಂದ ಉಂಟಾಗುವ ಬಳಲಿಕೆಗೂ ಪರಿಹಾರ ನೀಡುತ್ತದೆ.

ಲವಂಗ (Clove)
ನೀವು ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಿದ್ದರೆ ಲವಂಗವನ್ನು ಅಗಿಯುವುದು ಫಲಕಾರಿ. ವಾಕರಿಕೆ ಇದ್ದರೆ ಬಾಯಿಯಲ್ಲಿ ಲವಂಗ ಇಟ್ಟುಕೊಳ್ಳುವುದು ಶಮನಕಾರಿ. ಲವಂಗ ಎಣ್ಣೆಯನ್ನು ಬಾಧಿತ ಪ್ರದೇಶದಲ್ಲಿ ಹಚ್ಚುವುದು ತುಂಬಾ ಪರಿಣಾಮಕಾರಿ. ಲವಂಗ ಎಣ್ಣೆಯಲ್ಲಿನ ಸಕ್ರಿಯ ಘಟಕಾಂಶವಾದ ಯುಜೆನಾಲ್ ರಕ್ತವನ್ನು ನೈಸರ್ಗಿಕವಾಗಿ ತೆಳುಗೊಳಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಮೂಲಕ ಹೃದಯವನ್ನು ರಕ್ತನಾಳದ ಕಾಯಿಲೆಯಿಂದ ರಕ್ಷಿಸುತ್ತದೆ.

ಧ್ಯಾನ ಮಾಡಿ ಖಿನ್ನತೆ ದೂರ ಮಾಡಿ

ಶುಂಠಿ (Ginger)
ಕೀಲು ಮತ್ತು ಸ್ನಾಯು ನೋವಿಗೆ ಇದು ಅತ್ಯುತ್ತಮ ಪರಿಹಾರ. ಶುಂಠಿಯಲ್ಲಿರುವ ಫೈಟೊಕೆಮಿಕಲ್ಸ್ ನೋವು ಉಂಟುಮಾಡುವ ಹಾರ್ಮೋನುಗಳ ಉತ್ಪಾದನೆ ಮತ್ತು ಬಿಡುಗಡೆಯನ್ನು ನಿಯಂತ್ರಿಸುತ್ತದೆ. ಇದು ವಾಕರಿಕೆ ಮತ್ತು ಬೆಳಗಿನ ಬೇನೆಗೆ ಪ್ರಬಲ ಪರಿಹಾರ. ಆಹಾರಕ್ಕೆ ಸೇರಿಸಿದಾಗ ಅದು ರುಚಿಕರವಾಗಿರುತ್ತದೆ. ಶುಂಠಿ ಚಹಾ ದೇಹಕ್ಕೆ ಶಕ್ತಿ ಮತ್ತು ಪುನರ್ಯೌವನ ನೀಡುವ ಅತ್ಯುತ್ತಮ ಮೂಲ.

ತುಳಸಿ (Tulsi)
ಇದು ಔಷಧೀಯ ಮೂಲಿಕೆ, ಆಯುರ್ವೇದ ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುತ್ತದೆ. ರೋಗ ನಿರೋಧಕ ಅಂಶಗಳನ್ನು ಹೊಂದಿದೆ ಮತ್ತು ನೋವು ನಿವಾರಕ. ಕೊರೊನಾ ವೈರಸ್ ಪೀಡಿತರಿಗೂ ಫಲಕಾರಿ ಎಂಬುದು ಗೊತ್ತಾಗಿದೆ. ಇದು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನ್‌ಗಳ ಸೃಷ್ಟಿಯನ್ನು ಸಹ ನಿಯಂತ್ರಿಸುತ್ತದೆ.

ಚೆರಿಗಳು (Cherries)
ಚೆರಿಗಳಲ್ಲಿನ ಉರಿಯೂತ ನಿವಾರಕ ಗುಣವು ಸಂಧಿವಾತದಿಂದ ಉಂಟಾಗುವ ನೋವು, ಗೌಟ್‌ನಿಂದ ಉಂಟಾಗುವ ಕೀಲು ನೋವು ಮತ್ತು ಶ್ರಮದಾಯಕ ವ್ಯಾಯಾಮದಿಂದ ಆಗುವ ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ. ಚೆರಿಗಳ ಸೇವನೆಯು ದೇಹವನ್ನು ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ನರಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ.

Healthy Food : ದಿನದಲ್ಲಿ ಎಷ್ಟು ಬಾದಾಮಿ ತಿನ್ಬೇಕು ಗೊತ್ತಾ?

ಬೆಳ್ಳುಳ್ಳಿ (Garlic)
ಇದು ದೇಹದ ರೋಗನಿರೋಧಕ ಶಕ್ತಿ (Immunity Power) ಯನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯು ಕೊಲೆಸ್ಟ್ರಾಲ್ ಮಟ್ಟವನ್ನು 10ರಿಂದ 15% ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯ ಹೆಚ್ಚುವರಿ ಪ್ರಮಾಣವನ್ನು ತಾಜಾ ರೂಪದಲ್ಲಿ ಸೇವಿಸಿದಾಗ ಅದು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಪ್ರತಿರೋಧ ಗುಣಲಕ್ಷಣಗಳನ್ನು ಹೊಂದಿದೆ. ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್‌ನಂತಹ ನೆನಪಿನ ಕಾಯಿಲೆಗಳನ್ನು ತಡೆಯುತ್ತದೆ.

ಮೊಸರು (Curd)
ಹೆಚ್ಚು ಹುಳಿಯನ್ನು ಹೊಂದಿಲ್ಲದ ಮೊಸರು ಉರಿಯೂತ ಮತ್ತು ನೋವಿನ ಲಕ್ಷಣಗಳನ್ನು ನಿವಾರಿಸುತ್ತದೆ. ಈ ಅದ್ಭುತ ಡೈರಿ ಉತ್ಪನ್ನವು ಜೀರ್ಣಕ್ರಿಯೆಗೆ ಸಹಾಯ ಮಾಡುವ ಆರೋಗ್ಯಕರ ಪ್ರೋಬಯಾಟಿಕ್‌ಗಳನ್ನು ಒಳಗೊಂಡಿದೆ. ದಿನಕ್ಕೆ ಎರಡು ಬಾರಿ ಒಂದು ಬೌಲ್ ಮೊಸರು ಸೇವಿಸಿದರೆ ಹೊಟ್ಟೆನೋವು ಮತ್ತು ಮುಟ್ಟಿನ ನೋವಿನಿಂದ ಪರಿಹಾರ ನೀಡುತ್ತದೆ.

National Doctor's Day: ಇತಿಹಾಸ, ಪ್ರಾಮುಖ್ಯತೆ ಹೀಗಿದೆ..

Follow Us:
Download App:
  • android
  • ios