- Home
- News
- World News
- ಪಹಲ್ಗಾಮ್ ದಾಳಿ ಬಳಿಕ ಕೇಸರಿ ಖರೀದಿಸಲು ಒದ್ದಾಡ್ತಿದ್ದೀರಾ? ಈ ಟಿಪ್ಸ್ ಬಳಸಿದ್ರೆ ಕಣ ಕಣದಲ್ಲೂ ಕೇಸರಿ
ಪಹಲ್ಗಾಮ್ ದಾಳಿ ಬಳಿಕ ಕೇಸರಿ ಖರೀದಿಸಲು ಒದ್ದಾಡ್ತಿದ್ದೀರಾ? ಈ ಟಿಪ್ಸ್ ಬಳಸಿದ್ರೆ ಕಣ ಕಣದಲ್ಲೂ ಕೇಸರಿ
ಪಹಲ್ಗಾಮ್ ದಾಳಿಯ ನಂತರ ಕೇಸರಿ ಬೆಲೆ ಗಗನಕ್ಕೇರಿದೆ. ಇದಕ್ಕಾಗಿ ಒಂದಷ್ಟು ಪರ್ಯಾಯ ಮಾರ್ಗಗಳನ್ನು ನಾವು ಹುಡುಕಿಕೊಳ್ಳಬೇಕಿದೆ. ಒಂದು ಕೆಜಿ ಕೇಸರಿಗೆ ಈಗ ಐದು ಲಕ್ಷ ರೂಪಾಯಿ ಮೇಲಾಗಿದೆ.

ಕೇಸರಿಯನ್ನು ಅಡುಗೆ ಮತ್ತು ಸೌಂದರ್ಯವರ್ಧಕವಾಗಿ ಬಳಸುತ್ತಾರೆ. ಪಹಲ್ಗಾಮ್ ದಾಳಿಯ ನಂತರ, ಕೇಸರಿ ಬೆಲೆ ಕೆ.ಜಿ.ಗೆ 5 ಲಕ್ಷ ರೂ. ತಲುಪಿದೆ. ಕೇಸರಿ ರುಚಿ ಬಗ್ಗೆ ಪದಗಳಲ್ಲಿ ವರ್ಣಿಸೋದು ಕಷ್ಟ.
ದುಬಾರಿ ಕೇಸರಿಗೆ ಪರ್ಯಾಯಗಳಿವೆ. ಅವುಗಳ ಬಳಕೆಯ ವಿಧಾನದ ಬಗ್ಗೆ ಕೆಲವರಿಗೆ ಮಾಹಿತಿ ಇದ್ದರೆ, ಇನ್ನೂ ಕೆಲವರಿಗೆ ಇರಲಿಕ್ಕಿಲ್ಲ.
ಕೇಸರಿ ಎಸೆನ್ಸ್ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಕೇಸರಿಯ ರುಚಿ ಮತ್ತು ಪರಿಮಳವನ್ನು ನೀಡುತ್ತದೆ. ಹೀಗಾಗಿ ಇದನ್ನು ಬಳಸಿದ್ರೆ ಒಳ್ಳೆಯದು.
ಕೇಸರಿ ಬಣ್ಣಕ್ಕೆ ಫುಡ್ ಕಲರ್ ಮತ್ತು ಪರಿಮಳಕ್ಕೆ ಗುಲಾಬಿ ನೀರನ್ನು ಬಳಸಬಹುದು. ಒಮ್ಮೊಮ್ಮೆ ಈ ರೀತಿ ಕೂಡ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ.
ತಿಳಿ ಹಳದಿ ಬಣ್ಣಕ್ಕೆ ಅರಿಶಿಣವನ್ನು ಹಾಲಿನಲ್ಲಿ ಬೆರೆಸಿ ಬಳಸಬಹುದು. ಶುಂಠಿ ಅರಿಶಿಣ ಇನ್ನೂ ಉತ್ತಮ ಎಂದು ಹೇಳುವುದುಂಟು. ನೀವು ಏನು ಹೇಳ್ತೀರಾ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

