ಎಲೆಕ್ಷನ್ಗೆ ನಿಲ್ತಿರೋ ಡಿಕೆ ರವಿ ಪತ್ನಿ ಕುಸುಮಾ ಈಗ ಹೇಗಾಗಿದ್ದಾರೆ ನೋಡಿ
ಖಡಕ್ IAS ಅಧಿಕಾರಿಯಾಗಿದ್ದ ಡಿಕೆೆ ರವಿ ಅನೇಕರಿಗೆ ಸ್ಫೂರ್ತಿ. ಎಷ್ಟೇ ಕೆಲಸವಿದ್ದರೂ ಬಿಡುವು ಮಾಡಿಕೊಂಡು ಬಡ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಅವರು ಮನೆಯಲ್ಲಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾದಾಗ ಇಡೀ ಕರ್ನಾಟಕವೇ ಬೆಚ್ಚಿ ಬಿದ್ದಿತ್ತು. ಅವರು ಸಾವಿಗೆ ಅನೇಕ ಕಾರಣಗಳನ್ನು ಹೇಳಿದರಾದರೂ, ಕರುನಾಡು ಡಿ.ಕೆ.ರವಿಯಂಥ ನಿಷ್ಠಾವಂತ, ಖಡಕ್ ಐಎಎಸ್ ಅಧಿಕಾರಿಯನ್ನು ಕಳೆದುಕೊಂಡಿದ್ದು ಮಾತ್ರ ಸುಳ್ಳಲ್ಲ. ಈಗ ಅವರ ಪತ್ನಿ ಕುಸುಮಾ ರಾಜಕೀಯಕ್ಕೆ ಪ್ರವೇಶ ಮಾಡುವ ಯತ್ನದಲ್ಲಿದ್ದು, ರವಿ ತಾಯಿ ಗೌರಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದಿವಂಗತ ಅಧಿಕಾರಿ ರವಿ ಅವರ ಪತ್ನಿ ಕುಸುಮಾ ಬೆಂಗಳೂರಿನ ರಾಜರಾಜೇಶ್ವರಿ ನಗರವಿಧಾನಸಭಾ ನಡೆಯಲಿರುವ ಉಪ ಚುನಾವಣೆಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.
ಜೆಡಿಎಸ್ನೊಂದಿಗೆ ಗುರುತಿಸಿಕೊಂಡಿರುವ ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ ಕಾಂಗ್ರೆಸ್ಗೆ ಸೇರುವುದು ಬಹುತೇಕ ಖಚಿತವಾಗಿದೆ.
ತಂದೆ ಜೊತೆ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದು, ನಿರ್ಮಲಾನಂದನಾಥ ಸ್ವಾಮೀಜಿಗಳ ಆಶೀರ್ವಾದವನ್ನೂ ಪಡೆದುಕೊಂಡಿದ್ದಾರೆ.
ಆರ್ಆರ್ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುಸುಮಾಗೆ ನೀಡುವಂತೆ ತಂದೆ ಹನುಮಂತರಾಯಪ್ಪ ಅವರು ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಕುಸುಮಾರ ರಾಜಕೀಯ ಪ್ರವೇಶ ವಿಚಾರ ತಿಳಿಯುತ್ತಿದ್ದಂತೆ ಡಿಕೆ ರವಿ ಅವರ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನನ್ನ ಮಗನ ಹೆಸರನ್ನು ರಾಜಕೀಯಕ್ಕೆ ಬಳಸಿದರೆ ಎಲ್ಲಾ ಪೋಸ್ಟರ್ ಹಾಗೂ ಪಾಂಪಲೇಟ್ಗೆ ಬೆಂಕಿ ಹಾಕುತ್ತೇನೆ. ನನ್ನ ಮಗ ಸತ್ತಾಗಲೇ ಅವಳು ಹೋದಳು ಎಂದುಕೊಂಡಿದ್ದೀನಿ,' ಎಂದು ಹೇಳಿದ್ದಾರೆ.