ವಿಜಯನಗರ: ಮಳೆ ನಿಂತು ಹೋದ ಮೇಲೆ ಮೂಡಿದ ಕಾಮನಬಿಲ್ಲು
ವಿಜಯನಗರ ಜಿಲ್ಲೆಯ ಕಾನಾಹೊಸಳ್ಳಿ ಬಳಿ ಬೃಹತ್ ಕಾಮನಬಿಲ್ಲು ರೂಪುಗೊಂಡು, ನೋಡುಗರ ಮನಸೂರೆಗೊಂಡಿತು. ಮಳೆ ಬಳಿಕ ಗಗನದಲ್ಲಿ ಮೂಡಿದ ಈ ಅದ್ಭುತ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.
14

Image Credit : Asianet News
ವಿಜಯನಗರ (ಜೂ. 17): ವಿಜಯನಗರ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಳೆಯ ಆರ್ಭಟ ಜೋರಾಗಿರುವ ಬೆನ್ನಲ್ಲೇ, ಪ್ರಕೃತಿಯ ಮತ್ತೊಂದು ಅದ್ಭುತ ಸೌಂದರ್ಯ ಕಣ್ಮನ ಸೆಳೆದಿದೆ.
24
Image Credit : Asianet News
ರಾಷ್ಟ್ರೀಯ ಹೆದ್ದಾರಿ 50ರ ಸಮೀಪ, ಕಾನಾಹೊಸಳ್ಳಿ ಹೊರವಲಯದ ಆನಂದ್ ವಿಹಾರ ಹೊಟೇಲ್ ಬಳಿಯ ಗಗನದಲ್ಲಿ ಬೃಹತ್ ಕಾಮನಬಿಲ್ಲು ರೂಪುಗೊಂಡಿದ್ದು, ದಾರಿ ಹಾದು ಹೋಗುತ್ತಿದ್ದ ವಾಹನಚಾಲಕರು ಹಾಗೂ ಸಾರ್ವಜನಿಕರಲ್ಲಿ ಉಲ್ಲಾಸ ಮೂಡಿಸಿದೆ.
34
Image Credit : Asianet News
ಮಳೆಯ ನಂತರದ ಶೀತವಾತಾವರಣದಲ್ಲಿ ಕಾಣಿಸಿಕೊಂಡ ಈ ಸುಂದರ ಕಾಮನಬಿಲ್ಲು ಅನೇಕರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಯುವಕರು, ಕುಟುಂಬಸ್ಥರು, ಪ್ರವಾಸಿಗರು ಎಲ್ಲರೂ ಈ ಅಪರೂಪದ ನೈಸರ್ಗಿಕ ದೃಶ್ಯವನ್ನೆಲ್ಲಾ ಸೆರೆ ಹಿಡಿದು ಸ್ಮರಣೀಯ ಕ್ಷಣವನ್ನಾಗಿ ಮಾಡಿಕೊಂಡಿದ್ದಾರೆ.
44
Image Credit : Asianet News
ಇನ್ನು ರಸ್ತೆಗಳಲ್ಲಿ ಹೋಗುತ್ತಿದ್ದ ವಾಹನ ತಡೆದು ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. 'ಇಷ್ಟು ದೊಡ್ಡ ಹಾಗೂ ಸ್ಪಷ್ಟವಾದ ಕಾಮನಬಿಲ್ಲನ್ನು ಕಾಣುವುದು ಅಪರೂಪ. ಪ್ರಕೃತಿಯ ಈ ಸೌಂದರ್ಯ ಕಣ್ಣಿಗೆ ಹಬ್ಬವಾಗಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Latest Videos