MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Viral News
  • ವಿಜಯನಗರ: ಮಳೆ ನಿಂತು ಹೋದ ಮೇಲೆ ಮೂಡಿದ ಕಾಮನಬಿಲ್ಲು

ವಿಜಯನಗರ: ಮಳೆ ನಿಂತು ಹೋದ ಮೇಲೆ ಮೂಡಿದ ಕಾಮನಬಿಲ್ಲು

ವಿಜಯನಗರ ಜಿಲ್ಲೆಯ ಕಾನಾಹೊಸಳ್ಳಿ ಬಳಿ ಬೃಹತ್ ಕಾಮನಬಿಲ್ಲು ರೂಪುಗೊಂಡು, ನೋಡುಗರ ಮನಸೂರೆಗೊಂಡಿತು. ಮಳೆ ಬಳಿಕ ಗಗನದಲ್ಲಿ ಮೂಡಿದ ಈ ಅದ್ಭುತ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.

1 Min read
Sathish Kumar KH
Published : Jun 17 2025, 12:45 PM IST| Updated : Jun 17 2025, 01:15 PM IST
Share this Photo Gallery
  • FB
  • TW
  • Linkdin
  • Whatsapp
14
Image Credit : Asianet News

ವಿಜಯನಗರ (ಜೂ. 17): ವಿಜಯನಗರ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಳೆಯ ಆರ್ಭಟ ಜೋರಾಗಿರುವ ಬೆನ್ನಲ್ಲೇ, ಪ್ರಕೃತಿಯ ಮತ್ತೊಂದು ಅದ್ಭುತ ಸೌಂದರ್ಯ ಕಣ್ಮನ ಸೆಳೆದಿದೆ.

24
Image Credit : Asianet News

ರಾಷ್ಟ್ರೀಯ ಹೆದ್ದಾರಿ 50ರ ಸಮೀಪ, ಕಾನಾಹೊಸಳ್ಳಿ ಹೊರವಲಯದ ಆನಂದ್ ವಿಹಾರ ಹೊಟೇಲ್ ಬಳಿಯ ಗಗನದಲ್ಲಿ ಬೃಹತ್‌ ಕಾಮನಬಿಲ್ಲು ರೂಪುಗೊಂಡಿದ್ದು, ದಾರಿ ಹಾದು ಹೋಗುತ್ತಿದ್ದ ವಾಹನಚಾಲಕರು ಹಾಗೂ ಸಾರ್ವಜನಿಕರಲ್ಲಿ ಉಲ್ಲಾಸ ಮೂಡಿಸಿದೆ.

Related Articles

Related image1
ಮಳೆಯಲ್ಲೇ ರೊಮ್ಯಾಂಟಿಕ್ ಮೂಡ್ ಹೆಚ್ಚುತ್ತಾ? ಒದ್ದೆಮುದ್ದೆ ಮಳೆಗಾಲದಲ್ಲಿ ಕೆರಳುವ ಕಾಮನಬಿಲ್ಲು!
Related image2
ನಯಾಗರದ ಜಲಧಾರೆಗೆ ಬಣ್ಣಗಳ ಚಿತ್ತಾರ ಮೂಡಿಸಿದ ಕಾಮನಬಿಲ್ಲು: viral video
34
Image Credit : Asianet News

ಮಳೆಯ ನಂತರದ ಶೀತವಾತಾವರಣದಲ್ಲಿ ಕಾಣಿಸಿಕೊಂಡ ಈ ಸುಂದರ ಕಾಮನಬಿಲ್ಲು ಅನೇಕರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಯುವಕರು, ಕುಟುಂಬಸ್ಥರು, ಪ್ರವಾಸಿಗರು ಎಲ್ಲರೂ ಈ ಅಪರೂಪದ ನೈಸರ್ಗಿಕ ದೃಶ್ಯವನ್ನೆಲ್ಲಾ ಸೆರೆ ಹಿಡಿದು ಸ್ಮರಣೀಯ ಕ್ಷಣವನ್ನಾಗಿ ಮಾಡಿಕೊಂಡಿದ್ದಾರೆ.

44
Image Credit : Asianet News

ಇನ್ನು ರಸ್ತೆಗಳಲ್ಲಿ ಹೋಗುತ್ತಿದ್ದ ವಾಹನ ತಡೆದು ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. 'ಇಷ್ಟು ದೊಡ್ಡ ಹಾಗೂ ಸ್ಪಷ್ಟವಾದ ಕಾಮನಬಿಲ್ಲನ್ನು ಕಾಣುವುದು ಅಪರೂಪ. ಪ್ರಕೃತಿಯ ಈ ಸೌಂದರ್ಯ ಕಣ್ಣಿಗೆ ಹಬ್ಬವಾಗಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಮಳೆ
ವಿಜಯನಗರ
ಕರ್ನಾಟಕ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved