MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • Vastu Tips : ಸಾಲದ ಸಮಸ್ಯೆ ದೂರ ಮಾಡಲು ಕೆಂಪು ಗುಲಾಬಿಯನ್ನು ಈ ರೀತಿ ಬಳಸಿ!

Vastu Tips : ಸಾಲದ ಸಮಸ್ಯೆ ದೂರ ಮಾಡಲು ಕೆಂಪು ಗುಲಾಬಿಯನ್ನು ಈ ರೀತಿ ಬಳಸಿ!

ಜ್ಯೋತಿಷ್ಯದ ಪ್ರಕಾರ, ಕೆಂಪು ಗುಲಾಬಿಗಳನ್ನು ವಿಶೇಷ ರೀತಿಯಲ್ಲಿ ಬಳಸುವ ಮೂಲಕ ನಿಮ್ಮ ಅದೃಷ್ಟವನ್ನು ಬೆಳಗಿಸಬಹುದು. ಹಾಗಾಗಿ ಕೆಂಪು ಗುಲಾಬಿಗಳ ವಿಶೇಷ ಪರಿಹಾರಗಳನ್ನು ತಿಳಿಯುವ ಮೂಲಕ ನೀವು ಸಂತೋಷ ಮತ್ತು ಸಮೃದ್ಧಿ ಮತ್ತು ಸಂಪತ್ತನ್ನು ಪಡೆಯಲು ಸಾಧ್ಯವಾಗುತ್ತೆ.

2 Min read
Pavna Das
Published : Jan 24 2023, 05:54 PM IST
Share this Photo Gallery
  • FB
  • TW
  • Linkdin
  • Whatsapp
16

ಜ್ಯೋತಿಷ್ಯದ ಪ್ರಕಾರ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವ  ಅನೇಕ ಪರಿಹಾರಗಳಿವೆ. ಇದರೊಂದಿಗೆ, ಹಣವನ್ನು ಪಡೆಯಲು ಅನೇಕ ಮಾರ್ಗಗಳನ್ನು ಸಹ ಹೇಳಲಾಗಿದೆ. ಕೆಂಪು ಗುಲಾಬಿಗಳ ಬಳಕೆಯ ಬಗ್ಗೆ ಇಲ್ಲಿ ಹೇಳಲಾಗಿದೆ, ಇದು ನಿಮಗೆ ಪ್ರಯೋಜನವನ್ನು ನೀಡುತ್ತೆ. ಈ ಕೆಂಪು ಗುಲಾಬಿ(Red rose) ನಿಮ್ಮ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತೆ. ಆದ್ದರಿಂದ ಕೆಂಪು ಗುಲಾಬಿ ಹೂವುಗಳ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.

26

1. ಮಂಗಳವಾರ, ನೀವು ಕೆಂಪು ಗುಲಾಬಿಗಳನ್ನು ವಿಶೇಷವಾಗಿ ಬಳಸಬಹುದು. ಮಂಗಳವಾರ, ಕೆಂಪು ಗುಲಾಬಿ ಮತ್ತು ಶ್ರೀಗಂಧವನ್ನು ಕೆಂಪು ಬಟ್ಟೆಯಲ್ಲಿ ಹಾಕಿ ಗಂಟು ಹಾಕಿ. ಮನೆಯ ದೇವರಕೋಣೆಯಲ್ಲಿ ಈ ಗಂಟು ಇರಿಸಿ. ಇದರೊಂದಿಗೆ ಗಣೇಶನನ್ನು ಪೂಜಿಸಿ(Lord Ganesh). ದೇವಾಲಯದಿಂದ ಈ ಗಂಟು ತೆಗೆದುಕೊಂಡು ಅದನ್ನು ನಿಮ್ಮ ಮನೆಯ ಸುರಕ್ಷಿತ ಸ್ಥಳದಲ್ಲಿ ಇರಿಸಿ. ಈ ಕ್ರಮ ತೆಗೆದುಕೊಳ್ಳುವ ಮೂಲಕ, ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರು ಪ್ರಗತಿ ಹೊಂದುತ್ತಾರೆ.

36

2. ನೀವು ಹಣದ(Money) ಬಿಕ್ಕಟ್ಟಿನಿಂದ ತೊಂದರೆಗೀಡಾಗಿದ್ದರೆ, ಈ ಪರಿಹಾರ ನಿಮಗಾಗಿ. ಕೆಂಪು ಗುಲಾಬಿ ಹೂವಿನ ಎಲೆಗಳೊಂದಿಗೆ ಕರ್ಪೂರದ ತುಂಡನ್ನು ಇರಿಸಿ. ನಂತರ ಅದನ್ನು ಸಂಜೆ ಆರತಿಯಲ್ಲಿ ಸುಡಬೇಕು.  ಹಾಗೆಯೇ, ಈ ಗುಲಾಬಿ ಹೂವಿನ ಎಲೆಗಳನ್ನು ದೇವರಿಗೆ ಅರ್ಪಿಸಿ. ಅಂತಹ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನಿಮ್ಮ ಎಲ್ಲಾ ಸಾಲಗಳು ಮುಗಿಯುತ್ತೆ. ಇದರೊಂದಿಗೆ, ಹಣವನ್ನು ಪಡೆಯುವ ಸಾಧ್ಯತೆಗಳೂ ಇರುತ್ತವೆ

46

3. ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವ ಮೊದಲೇ ಅಡ್ಡಿಯಾಗುತ್ತಿದ್ದರೆ, ಐದು ಹುಣ್ಣಿಮೆಗಳವರೆಗೆ(Poornima) ವಿಶೇಷ ಕ್ರಮವನ್ನು ತೆಗೆದುಕೊಳ್ಳಿ. ಮೂರು ಕೆಂಪು ಗುಲಾಬಿ ಮತ್ತು ಮೂರು ಬೆಲಾ ಹೂವುಗಳು ನೀರಿನಲ್ಲಿ ಹರಿಯಲು ಬಿಡಿ. ಅಂತಹ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನಿಮ್ಮ ಎಲ್ಲಾ ಕೆಲಸ ಯಾವ ತೊಂದರೆ ಇಲ್ಲದ ಆರಂಭಿಸಬಹುದು.

56

4. ಶುಕ್ರವಾರ(Friday) ಈ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳೋದರಿಂದ ಪ್ರಯೋಜನ ಆಗುತ್ತೆ. ಅದು ಏನಂದ್ರೆ ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದರ ಸುತ್ತಲೂ ಕೆಂಪು ಗುಲಾಬಿ ಹೂವುಗಳನ್ನು ಕಟ್ಟಿ. ನಂತರ ಈ ಕೆಂಪು ಗುಲಾಬಿಗಳ ಗೊಂಚಲನ್ನು ನೀರಿನಲ್ಲಿ ಹರಿಯಲು ಬಿಡಿ. ಇದನ್ನು ಮಾಡೋದರಿಂದ ನೀವು ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಬಹುದು.

66

5. ಸಾಧ್ಯವಾದರೆ, 11 ಮಂಗಳವಾರದೊಳಗೆ ಹನುಮಂತನಿಗೆ(Hanuman) 11 ಕೆಂಪು ಗುಲಾಬಿಗಳನ್ನು ಅರ್ಪಿಸಿ. ಇದು ದೇವರನ್ನು ಸಂತೋಷಪಡಿಸುತ್ತೆ. ಇದರೊಂದಿಗೆ, ನಿಮ್ಮ ಬಯಕೆಗಳು ಸಹ ಈಡೇರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಈ ನಿಯಮಗಳನ್ನು ಅನುಸರಿಸುವ ಮೂಲಕ ನೀವು ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬಹುದು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜ್ಯೋತಿಷ್ಯ
ಹಣ (Hana)
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved