MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Uttara Kannada
  • Chinnaswamy Stadium Stampede: 1 ವರ್ಷದ ಹಿಂದೆ ಮದುವೆ, ಪತಿಯನ್ನು ಬಿಟ್ಟಿರದ CA ಅಕ್ಷತಾ ಬಾರದೂರಿಗೆ ಪ್ರಯಾಣಿಸಿದ್ರು! ತಂದೆ ಕಣ್ಣೀರು!

Chinnaswamy Stadium Stampede: 1 ವರ್ಷದ ಹಿಂದೆ ಮದುವೆ, ಪತಿಯನ್ನು ಬಿಟ್ಟಿರದ CA ಅಕ್ಷತಾ ಬಾರದೂರಿಗೆ ಪ್ರಯಾಣಿಸಿದ್ರು! ತಂದೆ ಕಣ್ಣೀರು!

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣವಾಗಿದ್ದು, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ರವೀಂದ್ರ ನಗರದ ಸೊಸೆ ಅಕ್ಷತಾ ಸಾವನ್ನಪ್ಪಿದ್ದಾರೆ. ಗಂಡನ ಎದುರೇ ಹೆಂಡತಿ ಅಕ್ಷತಾ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ.

2 Min read
Padmashree Bhat
Published : Jun 05 2025, 05:58 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : ANI Photo

ಒಂದು ವರ್ಷದ ಹಿಂದೆಯಷ್ಟೇ ಅಕ್ಷತಾ, ಆಯಶ್ ಮದುವೆಯಾಗಿದ್ದರು. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ದಂಪತಿ ವಾಸ ಮಾಡ್ತಿದ್ರು. ಪತಿ ಆಶಯ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದರು. ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಸ್ಟೇಡಿಯಂಗೆ ಬಂದಿದ್ರು. ಈ ವೇಳೆ ಕಾಲ್ತುಳಿತವಾಗಿ ಗಂಡನ ಎದುರೇ ಪತ್ನಿ ಸಾವನ್ನಪ್ಪಿದ್ದಾರೆ. ಮೃತ ಅಕ್ಷತಾ ಪೈ (26) ಮರಣೋತ್ತರ ಪರೀಕ್ಷೆ ಈಗಾಗಲೇ ಮುಕ್ತಾಯವಾಗಿದ್ದು, ಮೃತದೇಹ ಸಿದ್ದಾಪುರ ತಲುಪಿದೆ. 

26
Image Credit : Google

“ನಾನು ಅಳಿಯನಿಗೆ, ಹಿರಿ ಮಗಳಿಗೆ, ಕಿರಿ ಮಗಳಿಗೆ ಫೋನ್‌ ಮಾಡಿದಾಗ ಯಾರೂ ಫೋನ್‌ ರಿಸೀವ್‌ ಮಾಡಲಿಲ್ಲ. ರಾತ್ರಿ 10 ಗಂಟೆಗೆ ಮಗಳಿಗೆ ಹೀಗಾಯ್ತು ಅಂತ ಫೋನ್ ಬಂತು. ನನ್ನ ಇಬ್ಬರೂ ಮಕ್ಕಳು ಬುದ್ಧಿವಂತರು. ನನ್ನ ಮಗಳು ಸಿಎ ಮಾಡಿದ್ದು, ಮುಂದೆ ಏನಾದರೂ ಮಾಡಬೇಕು ಎಂದುಕೊಂಡಿದ್ದಳು” ಎಂದು ಅಕ್ಷತಾ ತಂದೆ ಮಾಧ್ಯಮದ ಜೊತೆ ಹೇಳಿದ್ದಾರೆ. 

Related Articles

Related image1
ಅಭಿಮಾನ ಅತಿರೇಕವಾದಾಗ... RCB ಕಾಲ್ತುಳಿದ ಬೆನ್ನಲ್ಲೇ ನಟ ದರ್ಶನ್​ ಹಳೆಯ ವಿಡಿಯೋ ವೈರಲ್​
Related image2
RCB Bengaluru Stampede: 11 ಜನ ಸತ್ತರೂ ದಾಖಲಾಗಿಲ್ಲ FIR- ಜಾಲತಾಣದಲ್ಲಿ ಭಾರಿ ಆಕ್ರೋಶ
36
Image Credit : ANI

“ನನ್ನ ಮಗ-ಅಳಿಯ ಒಬ್ಬರಿಗೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಮನೆಗೆ ಬರುವಾಗಲೂ ಇಬ್ಬರೂ ಒಟ್ಟಿಗೆ ಬರುತ್ತಿದ್ದರು. ನನ್ನ ಅಳಿಯ ಕೂಡ ಬಿದ್ದಿದ್ದು, ಗಾಯ ಆಗಿತ್ತು. ಬೇರೆಯವರೊಬ್ಬರು ಎಬ್ಬಿಸಿದ್ದರು. ಆಮೇಲೆ ಅಲೆದಾಡಿದ ಬಳಿಕ ಬೋರಿಂಗ್‌ ಆಸ್ಪತ್ರೆಯಿಂದ ಅವರಿಗೆ ಫೋನ್‌ ಬಂದಿದೆ ಅಷ್ಟೇ. ನಾನು ಮಗಳ ಜೊತೆ ಅಪರೂಪಕ್ಕೆ ಮಾತಾಡುತ್ತಿದ್ದೆ. ನಾನು ಹಾರ್ಟ್‌ ಪೇಶಂಟ್‌, ಹೀಗಾಗಿ ನನಗೆ ನೇರವಾಗಿ ಯಾರೂ ವಿಷಯವನ್ನು ತಿಳಿಸಿರಲಿಲ್ಲ” ಎಂದು ಮೃತ ಅಕ್ಷತಾ ತಂದೆ ಹೇಳಿದ್ದಾರೆ. 

46
Image Credit : Getty

“ಆರ್‌ಸಿಬಿ ಪರೈಡ್‌ ಇತ್ತು ಅಂತ ನಮಗೆ ಗೊತ್ತಾಗಿತ್ತು. ನಾನು, ನನ್ನ ಹೆಂಡ್ತಿ ಇಬ್ಬರೂ ಹೋಗೋಣ ಅಂತ ಜೆರ್ಸಿ ಖರೀದಿ ಮಾಡಿ, ಆಫೀಸ್‌ಗೆ ರಜೆ ಹಾಕಿ ಇಬ್ಬರೂ ಪ್ಲ್ಯಾನ್‌ ಮಾಡಿ ಹೊರಟಿದ್ದೆವು. ಪರೈಡ್‌ ಇರಲಿಲ್ಲ, ಫ್ರೀ ಎಂಟ್ರೆನ್ಸ್‌ ಇದೆ ಅಂದರು. ನಾವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೇಟ್‌ 17 ಒಪನ್‌ ಇತ್ತು. ಸ್ಟೇಡಿಯಂ ತುಂಬ ಜನರು ಬಂದರು, ನೂಕು ನುಗ್ಗುಲು ಇತ್ತು. ನಾನು ಬ್ಯಾರೀಕೇಡ್‌ ಸೈಡ್‌ನಲ್ಲಿದ್ದೆ, ನನ್ನ ಪಕ್ಕದಲ್ಲಿ ಹೆಂಡ್ತಿ ಇದ್ದಳು, ನನ್ನ ಹೆಂಡ್ತಿ ನನ್ನ ಕೈ ಹಿಡಿದುಕೊಂಡು ಇದ್ದಳು. ನಮ್ಮನ್ನು ನೂಕಿದಾಗ ಹೆಂಡ್ತಿ, ಕೈತಪ್ಪಿ ಹೋದಳು. ನನ್ನ ಮುಂದೆಯೇ ಓರ್ವನ ಜೀವನ ಹೋಗಿತ್ತು. ಅಲ್ಲಿದ್ದವರ ಬಳಿ ನನ್ನ ಹೆಂಡ್ತಿ ಬಗ್ಗೆ ಕೇಳಿದಳು” ಎಂದು ಅಕ್ಷತಾ ಪತಿ ಆಶಯ್‌ ಹೇಳಿದ್ದಾರೆ. 

56
Image Credit : ANI

“ವೈದೇಹಿ ಆಸ್ಪತ್ರೆಗೆ ಒಂದಷ್ಟು ಜನರನ್ನು ಕರೆದುಕೊಂಡು ಹೋಗಿದ್ದಾರೆ ಅಂತ ಹೇಳಿದ್ದರು. ಅಲ್ಲಿ ಹೋದಾಗಲೂ ಕೂಡ ನನ್ನ ಹೆಂಡ್ತಿ ಕಾಣಲಿಲ್ಲ. ಆಮೇಲೆ ಹೆಂಡ್ತಿ ತಂಗಿ, ಕಸಿನ್‌ಗೆ ಫೋನ್‌ ಮಾಡಿದ್ದೆ. ಆಮೇಲೆ ಬೋರಿಂಗ್‌ ಆಸ್ಪತ್ರೆಗೆ ಹೋದಾಗ ವೈದ್ಯರು, ನಿಮ್ಮ ಹೆಂಡ್ತಿಯನ್ನು ಕರೆದುಕೊಂಡು ಬರುವಾಗಲೇ ಸಾವಾಗಿದೆ ಎಂದಿದ್ದರು” ಎಂದು ಅಕ್ಷತಾ ಪೈ ಪತಿ ಹೇಳಿದ್ದಾರೆ. 

66
Image Credit : ANI Photos

ಇನ್ನು ಉತ್ತರಕನ್ನಡ ಜಿಲ್ಲೆಯ ಎಂಪಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮೃತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಆರ್‌ಸಿಬಿ
ಐಪಿಎಲ್
ಕ್ರಿಕೆಟ್
ಕಾಲ್ತುಳಿತ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved