MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಕೀರ್ತಿಯಿಂದನಾದ್ರೂ ಕಾವೇರಿಯ ಆಟಕ್ಕೆ ತೆರೆ ಬೀಳುತ್ತಾ?... ನೋ ವೇ ಚಾನ್ಸೇ ಇಲ್ಲ ಅಂತಿದ್ದಾರೆ ವೀಕ್ಷಕರು!

ಕೀರ್ತಿಯಿಂದನಾದ್ರೂ ಕಾವೇರಿಯ ಆಟಕ್ಕೆ ತೆರೆ ಬೀಳುತ್ತಾ?... ನೋ ವೇ ಚಾನ್ಸೇ ಇಲ್ಲ ಅಂತಿದ್ದಾರೆ ವೀಕ್ಷಕರು!

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಮತ್ತೆ ಎಂಟ್ರಿ ಕೊಟ್ಟಿದ್ದು, ಕಾವೇರಿಯ ಮುಖವಾಡ ಒಂದೊಂದಾಗಿ ಕಳಚುತ್ತಿದ್ದಾಳೆ, ಕೊನೆಗೂ ಕಾವೇರಿಯ ನಾಟಕಕ್ಕೆ ತೆರೆ ಬೀಳುತ್ತಾ ಅಂದ್ರೆ, ನೋ ವೇ ಚಾನ್ಸೆ ಇಲ್ಲ, ಭ್ರಮೆ ಅಂತಿದ್ದಾರೆ ವೀಕ್ಷಕರು.  

2 Min read
Pavna Das
Published : Nov 21 2024, 09:16 PM IST| Updated : Nov 22 2024, 07:23 AM IST
Share this Photo Gallery
  • FB
  • TW
  • Linkdin
  • Whatsapp
16

ವೈಷ್ಣವ್ ಮನೆಯಲ್ಲಿ ಲಕ್ಷ್ಮಿಯ ಸಾವಿನ ಸೂತಕದ ಕಳೆ ಎದ್ದು ಕಾಣುತ್ತಿದೆ. ವೈಷ್ಣವ್ ಮಾತ್ರ ಪೂಜೆಗಾಗಿ ಎಲ್ಲಾ ತಯಾರಿ ನಡೆಸಿದ್ದು, ಲಕ್ಷ್ಮೀ ಬಂದೇ ಬರುತ್ತಾಳೆ ಎನ್ನುವ ಹುಚ್ಚು ನಂಬಿಕೆಯಿಂದ ಕಾಯುತ್ತಿದ್ದಾನೆ. ಇದನ್ನೆಲ್ಲಾ ನೋಡಿದ ಕಾವೇರಿ ಮಗನ ಕೆನ್ನೆಗೆ ಬಾರಿ ವಾಸ್ತವಕ್ಕೆ ಬಾ ವೈಷ್ಣವ್, ಲಕ್ಷ್ಮೀ ಸತ್ತು ಹೋಗಿದ್ದಾಳೆ, ಇನ್ಯಾವತ್ತೂ ಬರೋದಿಲ್ಲ ಅಂತಾಳೆ. 
 

26

ಅಷ್ಟರಲ್ಲಿ ಮನೆಗೆ ಕೀರ್ತಿಯ ಆಗಮನ ಆಗುತ್ತೆ, ಕೀರ್ತಿಯನ್ನು ನೋಡಿ ಮನೆಯವರೆಲ್ಲಾ ಶಾಕ್ ಆದ್ರೆ, ಕಾವೇರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದೆ. ಬೊಂಬೆ ಆಡಿಸುವವನ ಮಾತು ನಿಜವಾಗುತ್ತಾ? ತಾನಿಂದು ಮನೆಯಿಂದ ಹೊರ ಹೋಗುತ್ತೇನಾ ಎನ್ನುವ ಆತಂಕ ಕಾಡೋದಕ್ಕೆ ಶುರುವಾಗಿದೆ. 
 

36

ಕೀರ್ತಿ ಮನೆಯವರ ಮುಂದೆ ಕಾವೇರಿ (truth about Kaveri) ಮಾಡಿದಂತಹ ಎಲ್ಲಾ ಕರಾಳ ಸತ್ಯಗಳ ಅನಾವರಣ ಮಾಡೊದಕ್ಕೆ ಸಜ್ಜಾಗಿ ಬಂದಿದ್ದಾಳೆ. ಕೀರ್ತಿ ನಡೆ ನುಡಿ ಎಲ್ಲದರಲ್ಲೂ ವ್ಯತ್ಯಾಸ ಕಾಡುತ್ತಿದೆ. ಕೀರ್ತಿ, ತನ್ನನ್ನು ಹಾಗೂ ಲಕ್ಷ್ಮೀಯನ್ನು ಕಿಡ್ನಾಪ್ ಮಾಡಿಸಿದುದರಿಂದ ಹಿಡಿದು, ತನ್ನ ಸಾವಿನವರೆಗೂ ಎಲ್ಲವನ್ನೂ ಎಲ್ಲರೆದುರು ತೆರೆದಿಡಲು ರೆಡಿಯಾಗ್ತಾಳೆ. 
 

46

ಅದಕ್ಕಾಗಿ ತನ್ನನ್ನು ಹಾಗೂ ಲಕ್ಷ್ಮೀ ಯನ್ನು ಕಿಡ್ನಾಪ್ ಮಾಡಿದ್ದ ರೌಡಿಗಳನ್ನ ಮನೆಗೆ ಕರೆಸುತ್ತಾಳೆ ಕೀರ್ತಿ. ಇವರನ್ನ ನೋಡಿ ಭಯಗೊಂಡಿರುವ ಕಾವೇರಿ, ರೌಡಿಗಳನ್ನ ಮನೆಗೆ ಕರೆತಂದದ್ದಕ್ಕೆ ಬೈಯ್ದು, ಅವರನ್ನಹ್ ಹೊರಹಾಕುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಕೀರ್ತಿ ಅವರಿಂದ ನಿಜವನ್ನು ಹೊರತೆಗೆಯುತ್ತಾಳೆ. ಇದನ್ನ ಕೇಳಿ ಕಾವೇರಿಯ ಮುಖ ಭಯದಿಂದ ತತ್ತರಿಸಿದೆ ಹೋಗಿದೆ. 
 

56

ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಕಲರ್ಸ್ ವಾಹಿನಿ ಕಾವೇರಿ ಕಣ್ಣಾಮುಚ್ಚಾಲೆ ಆಟಕ್ಕೆ ತೆರೆ ಬೀಳುತ್ತಾ? ಎಂದು ಪ್ರಶ್ನಿಸಿದ್ರೆ, ವೀಕ್ಷಕರು ನೋ ವೇ ಚಾನ್ಸೇ ಇಲ್ಲ, ಓಹ್ ಭ್ರಮೆ ಎನ್ನುತ್ತಿದ್ದಾರೆ, ಅಷ್ಟೇ ಅಲ್ಲ ಇದು ಕಾವೇರಿಯ ದೊಡ್ಡ ಕನಸಾಗಿರಬೇಕು, ಅಥವಾ ಕಾವೇರಿ ಕೊನೆಗೆ ಎಲ್ಲಾ ಆರೋಪಗಳನ್ನು ಕೀರ್ತಿ ಮೇಲೆ ಹೊರೆಸಿ ತಾನು ಬಚಾವಾಗುತ್ತಾಳೆ ಎಂದಿದ್ದಾರೆ. ಜೊತೆಗೆ ಕಾವೇರಿಯ ನಾಟಕ ಬಯಲಾಗೋ ಚಾನ್ಸೇ ಇಲ್ಲ, ಹಾಗೇ ಆದ್ರೆ ಸೀರಿಯಲ್ ಮುಗಿದಂತೆ ಎಂದಿದ್ದಾರೆ. 
 

66

ಇನ್ನು ಹೆಚ್ಚಿನ ಜನರು ಕೀರ್ತಿ ರೂಪದಲ್ಲಿ ಬಂದಿರೋದು ಲಕ್ಷ್ಮೀನೆ ಇರಬೇಕು, ಲಕ್ಷ್ಮಿಗೆ ಕೀರ್ತಿಯಂತೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಲಾಗಿದೆ, ಅದಕ್ಕಾಗಿಯೇ ಕೀರ್ತಿ ವಾಯ್ಸ್, ನಡೆ ಎಲ್ಲವೂ ಬದಲಾಗಿದೆ ಎನ್ನುತ್ತಿದ್ದಾರೆ. ಇದು ಕೀರ್ತಿನೋ, ಲಕ್ಷ್ಮೀನೋ ಅಥವಾ ಕಾವೇರಿಯ ಆಟಕ್ಕೆ ಕೊನೆ ಕಾಣಿಸೋದಕ್ಕೆ ಎಲ್ಲಾ ಸೇರಿ ಆಡುತ್ತಿರೋ ನಾಟಕನೋ ಯಾವುದಕ್ಕೂ ಕಾದು ನೋಡಬೇಕು. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕನ್ನಡ ಧಾರಾವಾಹಿ
ಕಲರ್ಸ್ ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved