MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare: ಬೆಟ್ಟದಷ್ಟು ಪ್ರೀತಿ ಇದ್ರೂ ಭೂಮಿಕಾ, ಗೌತಮ್​ನಿಂದ ದೂರವಿರಲು ಕಾರಣವೇನು? ಏನು ಆ ಗುಟ್ಟು?

Amruthadhaare: ಬೆಟ್ಟದಷ್ಟು ಪ್ರೀತಿ ಇದ್ರೂ ಭೂಮಿಕಾ, ಗೌತಮ್​ನಿಂದ ದೂರವಿರಲು ಕಾರಣವೇನು? ಏನು ಆ ಗುಟ್ಟು?

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಬ್ಬರನ್ನೊಬ್ಬರು ಪ್ರೀತಿಸಿದರೂ, ಒಂದು ಗುಟ್ಟಿನ ಕಾರಣದಿಂದ ದೂರವಾಗಿದ್ದಾರೆ. ಶಕುಂತಲಾಳ ಬೆದರಿಕೆಯೇ ಈ ವಿರಹಕ್ಕೆ ಕಾರಣವೇ ಅಥವಾ ಬೇರೆ ಸತ್ಯ ಅಡಗಿದೆಯೇ ಎನ್ನುವ ಕುತೂಹಲ ಹೆಚ್ಚಾಗಿದ್ದು, ಇಬ್ಬರ ಹಠದಿಂದಾಗಿ ಸತ್ಯ ಮಾತ್ರ ಹೊರಬರುತ್ತಿಲ್ಲ.

2 Min read
Suchethana D
Published : Nov 14 2025, 02:06 PM IST
Share this Photo Gallery
  • FB
  • TW
  • Linkdin
  • Whatsapp
19
ಭೂಮಿಕಾ ಗೌತಮ್​ ದೂರ ದೂರ
Image Credit : Instagram

ಭೂಮಿಕಾ- ಗೌತಮ್​ ದೂರ ದೂರ

ಅಮೃತಧಾರೆ (Amruthadhaare)ಯಲ್ಲಿ ಆದಷ್ಟು ಬೇಗ ಗೌತಮ್​ ಮತ್ತು ಭೂಮಿಕಾ ಒಂದಾಗಲಿ ಎಂದು ವೀಕ್ಷಕರು ಹೇಳುತ್ತಲೇ ಬಂದಿದ್ದಾರೆ. ಇವರಿಬ್ಬರೂ ಬೇರೆ ಬೇರೆಯಾಗಿ ಇರುವುದನ್ನು ನೋಡಲು ಆಗ್ತಿಲ್ಲ. ಅವರ ಸಂಕಟ ಮುಗಿಸಿ. ಬೇಗ ಒಂದು ಮಾಡಿ ಎನ್ನುತ್ತಲೇ ಬಂದಿದ್ದಾರೆ.

29
ಬೆಟ್ಟದಷ್ಟು ಪ್ರೀತಿ
Image Credit : Instagram

ಬೆಟ್ಟದಷ್ಟು ಪ್ರೀತಿ

ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಬೆಟ್ಟದಷ್ಟು ಪ್ರೀತಿಯಿದೆ. ಗೌತಮ್​, ಭೂಮಿಕಾಳನ್ನು ಸೇರಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಸೋತಿದ್ದಾನೆ. ಐದು ವರ್ಷಗಳ ಬಳಿಕ ಭೂಮಿಕಾ ಸಿಕ್ಕಾಗ ಆತ ಪಟ್ಟ ಖುಷಿ ಹಾಗೂ ನಂತರ ಭೂಮಿಕಾ ಹತ್ತಿರ ಬಾರದಾಗ ಪಟ್ಟ ನೋವು ವೀಕ್ಷಕರನ್ನು ಭಾವುಕರನ್ನಾಗಿಸಿದೆ.

Related Articles

Related image1
Amruthadhaare Serial Update: ವಠಾರದವರ ವಿರುದ್ಧ ರಣಚಂಡಿ ಅವತಾರ ಎತ್ತಿದ ಭೂಮಿಕಾ! ಮುಂದಾದದ್ದೇ ರೋಚಕ
Related image2
ಅಬ್ಬಬ್ಬಾ! ಚಾನೆಲ್​ ವಿರುದ್ಧವೇ ಗುಡುಗಿದ Bigg Boss ಜಾಹ್ನವಿ: ದೊಡ್ಮನೆಯಲ್ಲಿ ಅಂಥದ್ದೇನಾಯ್ತು ನೋಡಿ!
39
ವಿಷಯ ಬೇರೆಯದ್ದೇ ಇದೆ
Image Credit : zee kannada facebook

ವಿಷಯ ಬೇರೆಯದ್ದೇ ಇದೆ

ಮಗಳ ವಿಷಯವನ್ನು ಮುಚ್ಚಿಟ್ಟ ಕಾರಣಕ್ಕೆ ಮಾತ್ರ ಭೂಮಿಕಾ, ತನ್ನಿಂದ ದೂರವಾಗಿಲ್ಲ ಎನ್ನುವ ಸತ್ಯ ಗೌತಮ್​ಗೆ ಗೊತ್ತಿದೆ. ಇಲ್ಲಿಯವರೆಗೆ ವೀಕ್ಷಕರು ಕೂಡ ಅದನ್ನೇ ಅಂದುಕೊಂಡಿದ್ದರು. ಇಷ್ಟು ಕ್ಷುಲ್ಲಕ ಕಾರಣಕ್ಕೆ ಭೂಮಿಕಾ ದೂರವಾಗಿದ್ದು ವಿಚಿತ್ರವಾಗಿದೆ ಎಂದೇ ಅಂದುಕೊಂಡಿದ್ದರು.

49
ಭೂಮಿಕಾಗೆ ಪ್ರಾಮಿಸ್​
Image Credit : Instagram

ಭೂಮಿಕಾಗೆ ಪ್ರಾಮಿಸ್​

ಆದರೆ, ಅಲ್ಲಿ ಇರುವುದೇ ಬೇರೆಯ ವಿಷಯ. ಇದೀಗ ಮಲ್ಲಿಯ ಬಳಿಯಿಂದ ಆ ವಿಷಯವನ್ನು ಕೆದಕಲು ಬಯಸಿದ್ದಾನೆ ಗೌತಮ್​. ಆದರೆ ಭೂಮಿಕಾಳಿಗೆ ಪ್ರಾಮಿಸ್​ ಮಾಡಿರುವ ಕಾರಣದಿಂದ ಆಕೆ ಬಾಯಿ ಬಿಡುತ್ತಿಲ್ಲ.

59
ಇಬ್ಬರಲ್ಲೂ ಗುಟ್ಟು
Image Credit : Instagram

ಇಬ್ಬರಲ್ಲೂ ಗುಟ್ಟು

ಆದರೆ, ಗೌತಮ್​ ಎಲ್ಲಾ ಆಸ್ತಿ ಬಿಟ್ಟು ಬಂದಿದ್ದು ಯಾಕೆ ಎಂದು ಮಲ್ಲಿ ಪ್ರಶ್ನಿಸಿದಾಗ, ಅದನ್ನು ಗೌತಮ್​ ಹೇಳುವುದಿಲ್ಲ. ಭೂಮಿಕಾ ಬಗ್ಗೆ ಹೇಳಿದ್ರೆ ಮಾತ್ರ ನಾನು ಈ ಬಗ್ಗೆ ಹೇಳ್ತೇನೆ ಅಂದಿದ್ದಾನೆ.

69
ಏನಿದು ಗುಟ್ಟು?
Image Credit : Asianet News

ಏನಿದು ಗುಟ್ಟು?

ಅಲ್ಲಿಗೆ ಇಬ್ಬರ ಸೀಕ್ರೇಟ್​ ಒಬ್ಬರಿಗೆ ಒಬ್ಬರು ಗೊತ್ತಿಲ್ಲ. ಸದ್ಯ ವೀಕ್ಷಕರಿಗೆ ಗೌತಮ್​ ಮನೆ ಬಿಟ್ಟು ಬಂದದ್ದು, ಡ್ರೈವರ್​ ಕೆಲಸಕ್ಕೆ ಸೇರಿದ್ದು ಎಲ್ಲವೂ ಗೊತ್ತು. ಆದರೆ ಭೂಮಿಕಾಳಿಗೆ ಅಂಥದ್ದೇನಾಗಿದೆ ಎನ್ನುವುದು ಮಾತ್ರ ತುಂಬಾ ಗುಟ್ಟಾಗಿಯೇ ಉಳಿದಿದೆ.

79
ಶಕುಂತಲಾ ಕಾರಣ
Image Credit : zee5

ಶಕುಂತಲಾ ಕಾರಣ

ಭೂಮಿಕಾ ಮನೆಯಿಂದ ಹೊರಬರಲು ಕಾರಣ ಶಕುಂತಲಾ ಎನ್ನುವುದು ಗೊತ್ತು. ಆಕೆ, ಮನೆಬಿಟ್ಟು ಹೋಗದಿದ್ದರೆ ಗೌತಮ್​ಗೆ ತೊಂದರೆ ಮಾಡುವುದಾಗಿ ಹೇಳಿದ್ದಳು. ಆದರೆ ಇದೊಂದೇ ಕಾರಣನಾ ಅಥವಾ ಬೇರೆ ಏನಾದ್ರೂ ಇದ್ಯಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

89
ಇಬ್ಬರಲ್ಲಿ ಒಬ್ಬರು ಸೋತರೆ?
Image Credit : zee kannada facebook

ಇಬ್ಬರಲ್ಲಿ ಒಬ್ಬರು ಸೋತರೆ?

ಗೌತಮ್​ ಅಥವಾ ಭೂಮಿಕಾ ಇಬ್ಬರಲ್ಲಿ ಒಬ್ಬರು ತಮ್ಮ ಅಸಲಿ ವಿಷಯ ಬಿಚ್ಚಿಟ್ಟರೆ, ಮತ್ತೊಬ್ಬರು ಒಡಲಲ್ಲಿ ಮುಚ್ಚಿಟ್ಟುಕೊಂಡ ಗುಟ್ಟನ್ನು ಹೇಳುತ್ತಾರೆ. ಆದರೆ ಇಲ್ಲಿ ಇಬ್ಬರೂ ಹಟಮಾರಿಗಳು. ಇದೇ ಕಾರಣದಿಂದಾಗಲೇ ನಿಜ ಜೀವನದಲ್ಲಿಯೂ ಅದೆಷ್ಟೋ ದಾಂಪತ್ಯ ಜೀವನ ಹಾಳಾಗುವುದೂ ಇದೆ ಎನ್ನುವುದು ವೀಕ್ಷಕರ ಅಭಿಮತ.

99
ಮಲ್ಲಿಯಿಂದ ಬುದ್ಧಿ ಮಾತು
Image Credit : zee5

ಮಲ್ಲಿಯಿಂದ ಬುದ್ಧಿ ಮಾತು

ಒಟ್ಟಿನಲ್ಲಿ, ಇಬ್ಬರ ಗುಟ್ಟೂ ರಟ್ಟಾಗಬೇಕು. ಇದಾಗಲೇ ಮಲ್ಲಿ ಭೂಮಿಕಾಗೆ ಬುದ್ಧಿ ಹೇಳಿದ್ದಾಳೆ. ಇಬ್ಬರೂಕುಳಿತು ಮನಸ್ಸು ಬಿಚ್ಚಿ ಮಾತನಾಡಿ ಎಂದಿದ್ದಾಳೆ. ಆದರೆ, ಇಬ್ಬರೂ ಅದನ್ನು ಮಾಡುತ್ತಿಲ್ಲ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀ ಕನ್ನಡ
ಅಮೃತಧಾರೆ
ಸಂಬಂಧಗಳು
ಮದುವೆ
ಕನ್ನಡ ಧಾರಾವಾಹಿ
ಟಿವಿ ಶೋ
ಮನರಂಜನಾ ಸುದ್ದಿ
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved