MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಸೀರಿಯಲ್'ನಿಂದ ಕಳಿಸಿಬಿಟ್ರು ಅಂತ, ಈವಾಗ ಏನ್ ಕೆಲ್ಸ‌ ಮಾಡ್ತಿದ್ದಾರೆ ನೋಡಿ ‘Lakshmi Nivasa’ ನಟಿ

ಸೀರಿಯಲ್'ನಿಂದ ಕಳಿಸಿಬಿಟ್ರು ಅಂತ, ಈವಾಗ ಏನ್ ಕೆಲ್ಸ‌ ಮಾಡ್ತಿದ್ದಾರೆ ನೋಡಿ ‘Lakshmi Nivasa’ ನಟಿ

Vijayalakshmi Subramani: ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ, ಲಲಿತಾ ಪಾತ್ರದಲ್ಲಿ ವಿಜಯಲಕ್ಷ್ಮೀ ಸುಬ್ರಮಣಿ ನಟಿಸುತ್ತಿದ್ದರು. ಇದೀಗ ಪಾತ್ರವನ್ನ ಇದ್ದಕ್ಕಿದ್ದಂತೆ ಅಂತ್ಯ ಮಾಡಲಾಗಿದ್ದು, ಸೀರಿಯಲ್ ನಿಂದ ಹೊರ ಬಂದ ನಟಿ ಈವಾಗ ಏನು ಮಾಡ್ತಿದ್ದಾರೆ ಅನ್ನೋದನ್ನು ಅವರೇ ವಿಡಿಯೋ ಮೂಲಕ ತಿಳಿಸಿದ್ದಾರೆ.

1 Min read
Author : Pavna Das
Published : Jan 12 2026, 04:19 PM IST
Share this Photo Gallery
  • FB
  • TW
  • Linkdin
  • Whatsapp
16
ಲಕ್ಷ್ಮೀ ನಿವಾಸ
Image Credit : Instagram

ಲಕ್ಷ್ಮೀ ನಿವಾಸ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿ, ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳನ್ನು ಜನರು ಇಷ್ಟಪಟ್ಟಿದ್ದರು. ಧಾರಾವಾಹಿಯಲ್ಲಿ ವಿಶ್ವನ ತಾಯಿ ‘ಲಲಿತಾ’ ಪಾತ್ರದಲ್ಲಿ ವಿಜಯಲಕ್ಷ್ಮೀ ಸುಬ್ರಮಣಿ ನಟಿಸುತ್ತಿದ್ದು, ಇದೀಗ ಆ ಪಾತ್ರಕ್ಕೆ ಅಂತ್ಯ ಹಾಡಲಾಗಿದೆ.

26
ವಿಜಯಲಕ್ಷ್ಮೀ ಸುಬ್ರಮಣಿ
Image Credit : Instagram

ವಿಜಯಲಕ್ಷ್ಮೀ ಸುಬ್ರಮಣಿ

ಇಲ್ಲಿವರೆಗೂ ವಿಶ್ವನ ತಾಯಿಯಾಗಿ, ಲಕ್ಷ್ಮಿಯ ಮುದ್ದಿನ ಅತ್ತಿಗೆಯಾಗ್ಗಿ ವಿಜಯಲಕ್ಷ್ಮೀ ಸುಬ್ರಮಣಿ ಅದ್ಭುತವಾಗಿ ನಟಿಸಿದ್ದರು. ವೀಕ್ಷಕರು ಸಹ ಆ ಪಾತ್ರವನ್ನು ಇಷ್ಟಪಟ್ಟಿದ್ದರು. ಇದೀಗ ಆ ಪಾತ್ರವನ್ನು ಸಾಯಿಸುವ ಮೂಲಕ ಧಾರಾವಾಹಿಯಲ್ಲಿ ಲಲಿತಾ ಪಾತ್ರದ ಅಂತ್ಯ ಮಾಡಲಾಗಿದೆ.

Related Articles

Related image1
ಸೀರಿಯಲ್'ನಲ್ಲಿ ಸಾಯುತ್ತಿದ್ದಂತೆ ಸ್ವರ್ಗಕ್ಕೆ ಹೋಗದೇ, ಮಲೇಷ್ಯಾಕ್ಕೆ ಹಾರಿದ ‘Lakshmi Nivasa’ ಲಲಿತಾ
Related image2
Lakshmi Nivasa Serial: ಚಿನ್ನುಮರಿ ಮೇಲಿನ ಪ್ರೀತಿಗೆ ಕೊ*ಲೆ ಮಾಡಿದ ಸೈಕೋ ಜಯಂತ್; ಪಾತ್ರವೂ ಅಂತ್ಯ!
36
ಈವಾಗ ಏನು ಮಾಡ್ತಿದ್ದಾರೆ ವಿಜಯಲಕ್ಷ್ಮೀ
Image Credit : Instagram

ಈವಾಗ ಏನು ಮಾಡ್ತಿದ್ದಾರೆ ವಿಜಯಲಕ್ಷ್ಮೀ

ಧಾರಾವಾಹಿಯಿಂದ ಹೊರ ಬಂದ ಮೇಲೆ ವಿಜಯಲಕ್ಷ್ಮೀಯವರು ಇದೀಗ ಟೀ ಎಸ್ಟೇಟ್ ಒಂದರಲ್ಲಿ ಚಹಾ ಎಲೆಗಳನ್ನು ತೆಗೆಯುವಂತಹ ಕೆಲಸವನ್ನು ಮಾಡುತ್ತಿದ್ದಾರಂತೆ. ಹಾಗಂತಹ ನಟಿ ತಮ್ಮ ಇನ್’ಸ್ಟಾಗ್ರಾಂ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

46
ಏನಂದ್ರು ವಿಜಯಲಕ್ಷ್ಮೀ?
Image Credit : actress vijayalakshmi subramani intagram

ಏನಂದ್ರು ವಿಜಯಲಕ್ಷ್ಮೀ?

ವಿಡೀಯೋದಲ್ಲಿ ವಿಜಯಲಕ್ಷ್ಮೀ ಅವರು ಚಹಾ ಎಲೆಗಳನ್ನು ಆರಿಸುವಂತೆ ನಟಿಸುತ್ತಿದ್ದಾರೆ. ಆವಾಗ ಅವರ ಬಳಿ, ವಿಜಯಲಕ್ಷ್ಮೀ ಅವರೇ ನೀವು ನಟಿ ಅಲ್ವಾ? ಇಲ್ಲೇನು ಮಾಡುತ್ತಿದ್ದೀರಿ ಎಂದು ಕೇಳಲಾಗಿದೆ. ಅದಕ್ಕೆ ವಿಜಯಲಕ್ಷ್ಮೀ ಏನ್ ಮಾಡ್ಲಿ ಬೇರೆ ಕೆಲಸ ಇಲ್ಲ ಅಲ್ವ? ಸೀರಿಯಲ್ ನಿಂದ ಮನೆಗೆ ಕಳುಹಿಸಿಬಿಟ್ರು, ಅದಕ್ಕಾಗಿ ಅಟ್ಲೀಸ್ಟ್ ಚಹಾ ಎಲೆಗಳನ್ನು ಕಿತ್ತು ಹೊಟ್ಟೆ ತುಂಬಿಸಿಕೊಳ್ಳೋಣ ಅಂತ, ಮಲೇಷ್ಯಾಗೆ ಬಂದು ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

56
ಎಲ್ಲಿ ಕೆಲಸ ಮಾಡ್ತಿದ್ದಾರೆ ನಟಿ?
Image Credit : Instagram

ಎಲ್ಲಿ ಕೆಲಸ ಮಾಡ್ತಿದ್ದಾರೆ ನಟಿ?

ನಟಿ ಈಗ ಮಲೇಷ್ಯಾದ ಕೆಮರನ್ ವ್ಯಾಲಿಯಲ್ಲಿರುವ ಟೀ ಕೀಳುವ ಕೆಲಸ ಮಾಡ್ತಾರಂತೆ, ಜೊತೆಗೆ ಆವಾಗವಾಗ ಟೀ ಕುಡಿಯೋದನ್ನು ಮಾಡ್ತಾರಂತೆ ಎನ್ನುತ್ತಾ, ತನಗೆ ಕೆಲಸ ಮಾಡಲು ಬಿಡಿ ಎಂದು ವಿಡಿಯೋ ತೆಗೆಯುವವರಿಗೆ ಹೇಳಿದ್ದಾರೆ. ಅಂದ ಹಾಗೆ ಇದ್ಯಾವುದೂ ನಿಜಾ ಅಲ್ಲ ಇದು ಅಮ್ಮ-ಮಗ ಮಾಡಿರುವಂತಹ ತಮಾಷೆ ವಿಡಿಯೋ ಆಗಿದೆ.

66
ಇದೆಲ್ಲಾ ತಮಾಷೆಗಾಗಿ
Image Credit : Instagram

ಇದೆಲ್ಲಾ ತಮಾಷೆಗಾಗಿ

ಅಂದ ಹಾಗೆ ನಟಿ ವಿಜಯಲಕ್ಷ್ಮೀ ಅವರು ತಮ್ಮ ಮಗ ಆದಿತ್ಯ ಜೊತೆ ಮಲೇಷ್ಯಾಗೆ ಹಾರಿದ್ದು, ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮಲೇಷ್ಯಾದ ವಿವಿಧ ತಾಣಗಳಲ್ಲಿ ಪ್ರವಾಸ ಮಾಡುತ್ತಿದ್ದು, ಅಲ್ಲಿನ ಸುಂದರವಾದ ಟೀ ಎಸ್ಟೇಟ್ ನಲ್ಲಿ ತೆಗೆದಿರುವಂತಹ ಕಾಮಿಡಿ ವಿಡಿಯೋ ಇದಾಗಿದೆ. ವೀಕ್ಷಕರು ಈಗಾಗಲೇ ನಟಿಯನ್ನು ಧಾರಾವಾಹಿಯಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಆದಷ್ಟು ಬೇಗನೆ ಹೊಸ ಧಾರಾವಾಹಿಯಲ್ಲಿ ಬರಲಿ ಎಂದು ಹಾರೈಸುತ್ತಿದ್ದಾರಎ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Recommended image1
Bigg Boss ಮನೆಯಲ್ಲಿ ತ್ರಿಕೋನ ಲವ್​ಸ್ಟೋರಿ! ಯಾರಿಗೆ ಯಾರು ಸಿಕ್ತಾರೆ? ನಟ ಗೌರವ್​ ಶೆಟ್ಟಿ ಕೊಟ್ರು ರಿಯಾಕ್ಷನ್​!
Recommended image2
BBK 12: ಕಾವ್ಯ ಶೈವ, ಧನುಷ್‌ ಗೌಡ ಬಿಟ್ಟು, ಮಿಡ್‌ ವೀಕ್‌ ಎಲಿಮಿನೇಶನ್‌ ಆಗೋರು ಯಾರು?
Recommended image3
Bigg Boss ಫಿನಾಲೆ ವೇಳೆ, ನಟ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'; ದೂರು ದಾಖಲು
Related Stories
Recommended image1
ಸೀರಿಯಲ್'ನಲ್ಲಿ ಸಾಯುತ್ತಿದ್ದಂತೆ ಸ್ವರ್ಗಕ್ಕೆ ಹೋಗದೇ, ಮಲೇಷ್ಯಾಕ್ಕೆ ಹಾರಿದ ‘Lakshmi Nivasa’ ಲಲಿತಾ
Recommended image2
Lakshmi Nivasa Serial: ಚಿನ್ನುಮರಿ ಮೇಲಿನ ಪ್ರೀತಿಗೆ ಕೊ*ಲೆ ಮಾಡಿದ ಸೈಕೋ ಜಯಂತ್; ಪಾತ್ರವೂ ಅಂತ್ಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved