MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Sri Raghavendra Mahathme: 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ

Sri Raghavendra Mahathme: 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ

'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ 85 ವರ್ಷದ ಸೀತಾಬಾಯಿ ಪಾತ್ರದಲ್ಲಿ ಮಿಂಚುತ್ತಿರುವವರು 23ರ ಯುವ ನಟಿ ಭವಾನಿ ಪುರೋಹಿತ್. ರಂಗಭೂಮಿ ಹಿನ್ನೆಲೆಯುಳ್ಳ ಇವರು, ಎಂಬಿಎ ಪದವೀಧರೆಯಾಗಿದ್ದು, ಈ ಸವಾಲಿನ ಪಾತ್ರವನ್ನು ನಿಭಾಯಿಸಿದ ತಮ್ಮ ಜರ್ನಿ ಮತ್ತು ಆರಂಭಿಕ ತೊಂದರೆಗಳ ಬಗ್ಗೆ ಹಂಚಿಕೊಂಡಿದ್ದಾರೆ.

2 Min read
Author : Suchethana D
Published : Mar 30 2026, 09:29 PM IST
Share this Photo Gallery
  • FB
  • TW
  • Linkdin
  • Whatsapp
16
ಶ್ರೀ ರಾಘವೇಂದ್ರ ಮಹಾತ್ಮೆ
Image Credit : zee kannada

ಶ್ರೀ ರಾಘವೇಂದ್ರ ಮಹಾತ್ಮೆ

ಕಲಾವಿದರು ಎಂದರೆ ಸವಾಲಿನ ಪಾತ್ರಗಳನ್ನು ಕೊಟ್ಟರೂ ಮಾಡುವ, ಅದನ್ನು ನಿಭಾಯಿಸುವ ತಾಕತ್ತು ಇರಬೇಕು. ಆದರೆ, ಅಂಥ ಕಲಾವಿದರು ಅಪರೂಪ ಎಂದೇ ಹೇಳಬಹುದು. ಅಂಥ ಅಪರೂಪದ ಕಲಾವಿದರಲ್ಲಿ ಒಬ್ಬರಾದವರು ನಟಿ ಭವಾನಿ ಪುರೋಹಿತ್​. ಶ್ರೀ ರಾಘವೇಂದ್ರ ಮಹಾತ್ಮೆ ಸೀರಿಯಲ್​ನಲ್ಲಿ 85ರ ಅಜ್ಜಿ ಸೀತಾಬಾಯಿ ಪಾತ್ರವನ್ನು ಇವರು ನಿಭಾಯಿಸುತ್ತಿದ್ದಾರೆ.

26
ಕುತೂಹಲದ ಜರ್ನಿ
Image Credit : Instagram

ಕುತೂಹಲದ ಜರ್ನಿ

ಇದೀಗ ಅವರು ಈ ಕುತೂಹಲದ ಜರ್ನಿಯನ್ನು ಆತ್ಮೀಯ ಕನ್ನಡಿಗ ಚಾನೆಲ್​ ಜೊತೆ ಹಂಚಿಕೊಂಡಿದ್ದಾರೆ. ನಾನು ಜಸ್ಟ್​ ಎಂಬಿಎ ಪದವೀಧರೆ. ನನಗೀಗ 23 ವರ್ಷ ವಯಸ್ಸು. ಆದರೆ ಈ ಸೀರಿಯಲ್​ನಲ್ಲಿ 85 ವರ್ಷದ ಅಜ್ಜಿಯ ಪಾತ್ರವನ್ನು ನಿಭಾಯಿಸುತ್ತಿದ್ದೇನೆ ಎನ್ನುವ ಮೂಲಕ, ತಮ್ಮ ಪಾತ್ರ ಪರಿಚಯವನ್ನು ಮಾಡಿದ್ದಾರೆ ಭವಾನಿ.

Related Articles

Related image1
Sri Raghavendra Mahathme: ರಾಯರ ಅಮ್ಮನಾಗಲು ಸಾಫ್ಟ್​ವೇರ್​ ಕೆಲಸ ಬಿಟ್ಟು ಬಂದ ಚೆಲುವೆ ಸ್ಟೋರಿ ಇದು!
Related image2
ಮದ್ವೆಗಿಂತ ಬ್ರೇಕಪ್​ ಒಳ್ಳೇದು ಅಂದಿದ್ದೇ ತಪ್ಪಾಯ್ತಾ? ನಂಗೆ ಬೇರೆ ಐಡೆಂಟಿಟಿನೇ ಇಲ್ವಾ? ನಟಿ ಅಮೃತಾ ​ಗರಂ
36
ರಂಗಭೂಮಿ ಹಿನ್ನೆಲೆ
Image Credit : Instagram

ರಂಗಭೂಮಿ ಹಿನ್ನೆಲೆ

ಅಂದಹಾಗೆ ಭವಾನಿ ಅವರು ರಂಗಭೂಮಿ ಹಿನ್ನೆಲೆಯವರು. ಕಳೆದ ಆರು ವರ್ಷಗಳಿಂದ ಅದರಲ್ಲಿ ಸಕ್ರಿಯರಾಗಿದ್ದಾರೆ. ನಾನು ಕಾಲೇಜಿಗೆ ಹೋದಾಗಲೆಲ್ಲಾ ಡಾನ್ಸ್​, ಡ್ರಾಮಾ ಅಂತನೇ ಇದ್ದವಳು. ಕ್ಲಾಸ್​ಗೆ ಹೋಗಿದ್ದೇ ಕಮ್ಮಿ. ಅಮ್ಮ ಕಾನೂನು ಪದವೀಧರೆಯಾದರೂ ಮುಂದೆ ಹೋಗಲು ಆಗಲಿಲ್ಲ. ಅದ್ದರಿಂದ ಮಗಳು ಏನಾದರೂ ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಕಂಡವರು. ಜೊತೆಗೆ ಅಪ್ಪ ಮತ್ತು ತಮ್ಮನ ಸಹಕಾರದಿಂದ ಈ ಮಟ್ಟಿಗೆ ಬಂದೆ ಎಂದಿದ್ದಾರೆ ನಟಿ.

46
ಸೀರಿಯಲ್​ ಆಗಿ ಬರಲ್ಲ
Image Credit : Instagram

ಸೀರಿಯಲ್​ ಆಗಿ ಬರಲ್ಲ

ನಾನು ಬೆಳೆದ ಪರಿಸರದಲ್ಲಿ ಸೀರಿಯಲ್, ಸಿನಿಮಾ ಅಂತೆಲ್ಲಾ ಹೋಗುವವರನ್ನು ನೋಡುವುದೇ ಬೇರೆಯ ರೀತಿ. ಮೊದಲಿಗೆ ಮಾಡೆಲಿಂಗ್​ ಮಾಡುತ್ತಿದ್ದೆ. ಆಗ ಪಿಕಪ್​, ಡ್ರಾಪ್​ ಅಂತ ಮನೆಗೆ ಬರೋರು, ಟೈಮ್​ ಕೂಡ ಹೇಗೇಗೋ ಇರ್ತಿತ್ತು. ಆಗ ಅಕ್ಕಪಕ್ಕದಮನೆಯವರೆಲ್ಲಾ ಆಡಿಕೊಳ್ಳುವವರು. ಇದರ ಹೊರತಾಗಿಯೂ ಅಪ್ಪ- ಅಮ್ಮನ ಪ್ರೋತ್ಸಾಹದಿಂದ ನನ್ನ ಕನಸು ಈಡೇರಿತು ಎಂದಿದ್ದಾರೆ.

56
ನಿನ್ನ ಬುದ್ಧಿ ಕೈಯಲ್ಲಿ
Image Credit : Instagram

ನಿನ್ನ ಬುದ್ಧಿ ಕೈಯಲ್ಲಿ

ಇಂದಿಗೂ ನನ್ನ ಅಮ್ಮ ಹೇಳುವುದು ಒಂದೇ, ನಿನ್ನ ಬುದ್ಧಿ ನಿನ್ನ ಕೈಯಲ್ಲಿ ಇರಬೇಕು ಎನ್ನುವುದು. ಅದನ್ನು ನಾನು ಪಾಲಿಸುತ್ತಿದ್ದೇನೆ ಎಂದಿದ್ದಾರೆ ಭವಾನಿ. ಇನ್ನು ಹತ್ತು ವರ್ಷ ಬಿಟ್ಟು ನೋಡಿದ್ರೂ ಇದು ಒಳ್ಳೆಯ ಕ್ಯಾರೆಕ್ಟರ್​ ಎನ್ನಿಸುವಂಥ ಪಾತ್ರ ಮಾಡು. ಮುಂದೊಂದು ದಿನ ಅಯ್ಯೋ ನಾನು ಇದನ್ನು ಮಾಡಬಾರದಿತ್ತು ಎಂದು ಪಶ್ಚಾತ್ತಾಪ ಪಡುವ ಕ್ಯಾರೆಕ್ಟರ್​ ಮಾಡಬೇಡ ಎನ್ನುವುದು ಅಮ್ಮನ ಬುದ್ಧಿಮಾತು ಎಂದು ಹೇಳುವ ಮೂಲಕ ಒಳ್ಳೆಯ ಪಾತ್ರಕ್ಕೆ ಮಾತ್ರ ಮನ್ನಣೆ ಎಂದಿದ್ದಾರೆ ಭವಾನಿ.

66
ಆರಂಭದಲ್ಲಿ ತೊಂದರೆ
Image Credit : Instagram

ಆರಂಭದಲ್ಲಿ ತೊಂದರೆ

ಮೊದಲಿನಿಂದಲೂ ವಿಭಿನ್ನ ಪಾತ್ರ ಮಾಡಿರುವ ಕಾರಣ, ವಾಯ್ಸ್​ ಬದಲಾವಣೆ ಅಷ್ಟೊಂದು ಕಷ್ಟವಾಗಲಿಲ್ಲ. ಆದರೂ ಆರಂಭದಲ್ಲಿ ಕೆಲವು ಎಪಿಸೋಡ್​ನಲ್ಲಿ ಪರದಾಡಿದೆ ಎಂದು ನೆನಪಿಸಿಕೊಂಡಿದ್ದಾರೆ ನಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ಶ್ರೀ ರಾಘವೇಂದ್ರ ಮಹಾತ್ಮೆ
ಜೀ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಗುಡ್ ನ್ಯೂಸ್ ಕೊಟ್ಟು, ತೆಲುಗು ಧಾರಾವಾಹಿಯಿಂದ ಹೊರ ನಡೆದ ಕನ್ನಡ ನಟಿ ಲಾವಣ್ಯ !
Recommended image2
‘ಶ್ರೀ ಗಂಧದ ಗುಡಿ’ ಮುತ್ತು ಬಾಳಿಗೆ ನಾಯಕಿಯಾಗಿ ಎಂಟ್ರಿಕೊಟ್ಟ 'Miss Uttar Kannada' ದೃಷ್ಟಿ ನಾಯಕ್
Recommended image3
ಸೀರಿಯಲ್ ಶೂಟಿಂಗ್ ವೇಳೆ ಸಮುದ್ರದಲ್ಲಿ ಮುಳುಗಿ ಸಾವು ಕಂಡ ನಟನ ಪ್ರಕರಣದಲ್ಲಿ ಟ್ವಿಸ್ಟ್
Related Stories
Recommended image1
Sri Raghavendra Mahathme: ರಾಯರ ಅಮ್ಮನಾಗಲು ಸಾಫ್ಟ್​ವೇರ್​ ಕೆಲಸ ಬಿಟ್ಟು ಬಂದ ಚೆಲುವೆ ಸ್ಟೋರಿ ಇದು!
Recommended image2
ಮದ್ವೆಗಿಂತ ಬ್ರೇಕಪ್​ ಒಳ್ಳೇದು ಅಂದಿದ್ದೇ ತಪ್ಪಾಯ್ತಾ? ನಂಗೆ ಬೇರೆ ಐಡೆಂಟಿಟಿನೇ ಇಲ್ವಾ? ನಟಿ ಅಮೃತಾ ​ಗರಂ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved