- Home
- Entertainment
- TV Talk
- ಶ್ರೀ ಗಂಧದಗುಡಿ: ತಮ್ಮ ಹರಿಯನ್ನೇ 'ಭಾಮೈದ' ಎಂದು ಕರೆದ ಮುತ್ತು! ಅಣ್ಣ-ತಂಗಿ ಸಂಬಂಧಕ್ಕೆ ಸಿಕ್ಕ ಹೊಸ ತಿರುವು!
ಶ್ರೀ ಗಂಧದಗುಡಿ: ತಮ್ಮ ಹರಿಯನ್ನೇ 'ಭಾಮೈದ' ಎಂದು ಕರೆದ ಮುತ್ತು! ಅಣ್ಣ-ತಂಗಿ ಸಂಬಂಧಕ್ಕೆ ಸಿಕ್ಕ ಹೊಸ ತಿರುವು!
ಚಂದನಾ, ಮುತ್ತುನನ್ನು ಅಣ್ಣ ಎಂದು ಕರೆಯುವುದರಿಂದ ಹರಿಗೆ ಕಸಿವಿಸಿಯಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಹೋದ ಮುತ್ತು, ಕೊನೆಗೆ ತನ್ನ ತಮ್ಮ ಹರಿಯನ್ನೇ 'ಭಾಮೈದ' ಎಂದು ಕರೆಯಲು ನಿರ್ಧರಿಸುತ್ತಾನೆ. ಈ ಅನಿರೀಕ್ಷಿತ ನಿರ್ಧಾರದಿಂದ ಚಂದನಾಳ ಮನಸ್ಸಿಗೆ ಏನಾಯ್ತು ನೀವೇ ನೋಡಿ.

ಚಂದನಾಗೆ ಕಸಿವಿಸಿ
ಪರಿಸ್ಥಿತಿಯ ಕೈಗೊಂಬೆಯಾಗಿ ಹರಿಯ ಕೈಯಿಂದ ಪೊಲೀಸ್ ಠಾಣೆಯಲ್ಲಿ ಚಂದನಾ ತಾಳಿ ಕಟ್ಟಿಸಿಕೊಂಡಿದ್ದಾಳೆ. ಇದೀಗ ಅಪ್ಪನ ಮನೆಯಲ್ಲಿ ಒಲ್ಲದ ಮದುವೆ ಮುರಿದುಕೊಂಡು ಹರಿಯ ಮನೆಗೆ ಬಂದಿದ್ದಾಳೆ. ಆದರೆ, 5 ಜನ ಗಂಡಸರು ಇರುವ ಶ್ರೀಗಂಧದ ಗುಡಿ ಮನೆಯಲ್ಲಿ ದೊಡ್ಡವನಾದ ಮುತ್ತುನನ್ನು ಅಣ್ಣ ಎಂದು ಕರೆಯುತ್ತಾಳೆ. ಆದರೆ, ಇದೀಗ ಚಂದನಾ, ಮುತ್ತುನನ್ನು ಅಣ್ಣ ಎಂದು ಕರೆಯುತ್ತಿರುವುದಕ್ಕೆ ಹರಿಗೆ ತುಂಬಾ ಕಸಿವಿಸಿಯಾಗಿದೆ.
ಮುತ್ತು ಮುಂದೆ ಹರಿ ಆಕ್ರೋಶ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ಚಂದನಾ ಮತ್ತು ಹರಿಯ ಲವ್ ಸ್ಟೋರಿ ಇದೀಗ ಬ್ರೇಕಪ್ ಆಗುವ ಹಂತಕ್ಕೆ ತಲುಪಿದೆ.
ಚಂದನಾ ಮುತ್ತಿಗೆ ಅಣ್ಣ ಎಂದು ಕರೆಯುತ್ತಿರುವುದಕ್ಕೆ ನಾನು ಗಂಡ ಎಂಬ ಭಾವನೆ ಬರುತ್ತಿಲ್ಲ ಎಂದು ಹರಿ ಸಿಟ್ಟು ಹೊರಹಾಕಿದ್ದಾನೆ. ಇನ್ನುಮುಂದೆ ಚಂದನಾ ನಿನ್ನನ್ನ ಅಣ್ಣ ಎಂದು ಕರೆಯಬಾರದು ಹಾಗೆ ಮಾಡು ಎಂದು ಮುತ್ತುಗೆ ಹೇಳುತ್ತಾನೆ.
ಅಣ್ಣ ಎನ್ನಬೇಡ ಎಂದಿದ್ದಕ್ಕೆ ಅಳು
ತಮ್ಮನ ಸಂಸಾರ ಸರಿ ಮಾಡುವುದಕ್ಕೆ ಮುತ್ತು ಸೀದಾ ಚಂದನಾಗೆ ಹೋಗಿ ಅಣ್ಣ ಎಂದು ಕರೆಯಬೇಡ ಎನ್ನುತ್ತಾನೆ. ಆಗ ಚಂದನಾ ಗಳಗಳನೇ ಅಳುತ್ತಾಳೆ. ಇದರಿಂದ ಹರಿಯ ಪ್ಲ್ಯಾನ್ ಉಲ್ಟಾ ಆಗುತ್ತದೆ. ಹೀಗಾಗಿ, ಮುತ್ತು ಬೇರೆಯದೇಒಂದು ಉಪಾಯ ಮಾಡಿದ್ದಾನೆ.
ತಮ್ಮನನ್ನೇ ಭಾಮೈದ ಎಂದ ಹರಿ:
ಮುತ್ತುಗೆ ಚಂದನಾನ ತಂಗಿ ಅಲ್ಲ ಅನ್ನೋದಕ್ಕಿಂತ ಹರಿನ ತಮ್ಮ ಅಲ್ಲ ಅನ್ನೋದೇ ಹೆಚ್ಚು ಸುಲಭ! ಹೌದು, ಈ ಮಾತು ಸ್ವತಃ ಚಂದನಾ-ಹರಿ ಹಾಗೂ ಮುತ್ತು ನಡುವೆ ಅನ್ವಯವಾಗುತ್ತಿದೆ. ಇಲ್ಲಿಚಂದನಾಗೆ ಮುತ್ತು ಅಣ್ಣ ಎನ್ನಬೇಡ ಎಂದಿದ್ದಕ್ಕೆ ದೊಡ್ಡ ರಾದ್ದಾಂತವೇ ನಡೆಯುತು.
ಹಾಗಾಗಿ, ಚಂದನಾಳ ಮುಂದೆ ನಿಂತು ನೀನು ನನ್ನೊಂದಿಗೆ ರಕ್ತ ಹಂಚಿಕೊಂಡು ಹುಟ್ಟದಿದ್ದರೂ ಸ್ವಂತ ತಂಗಿಗಿಂತಲೂ ಹೆಚ್ಚು. ಹೀಗಾಗಿ, ನೀನು ನನಗೆ ಅಣ್ಣ ಎನ್ನುವುದನ್ನ ನಾನು ಬೇಡ ಅನ್ನೋದಿಲ್ಲ. ಆದರೆ, ನಾನೇ ಹರಿಯನ್ನ ಭಾಮೈದ ಎಂದು ಕರೆಯುತ್ತೇನೆ ಎಂದು ಹೇಳುತ್ತಾನೆ.
ಒಟ್ಟಿಗೆ ಬಾಳಬೇಕು
ಇದೀಗ ಹರಿ ತನ್ನ ಒಡಹುಟ್ಟಿದ ಸ್ವಂತ ತಮ್ಮನನ್ನೇ ಭಾಮೈದ ಎಂದು ಕರೆಯುತ್ತಾನೆ. ಇದರಿಂದ ಚಂದನಾಳ ಮನಸ್ಸಿಗೆ ಕಸಿವಿಸಿ ಆಗುತ್ತದೆ. ಮಾತನ್ನು ಮುಂದವರೆಸಿದ ಮುತ್ತು ನೀನು ಮತ್ತು ಹರಿ ಗಂಡ-ಹೆಂಡತಿಯಾಗಿ ನೂರು ಕಾಲ ಸಂತೋಷದಿಂದ ಒಟ್ಟಿಗೆ ಬಾಳಬೇಕು.
ತಂಗಿ ಮತ್ತು ಭಾಮೈದ ಚೆನ್ನಾಗಿ ಬಾಳಬೇಕು
ನಿಮ್ಮ ಮದುವೆ ನಡೆಯಬೇಕು ಎಂದು ದೇವರ ಇಚ್ಛೆಯೇ ಆಗಿರುತ್ತದೆ.ನೀನು ನನಗೆ ತಂಗಿ ಆದಮೇಲೆ ಹರಿ ನನಗೆ ಭಾಮೈದ ಆಗುತ್ತಾನೆ. ಅವನನ್ನು ಇನ್ನುಮುಂದೆ ಭಾಮೈದ ಎನ್ನುತ್ತೇನೆ. ಇವಾಗೆಲ್ಲಾ ಕ್ಲಿಯರ್ ಆಯ್ತು ಅಲ್ವಾ? ನನ್ನ ತಂಗಿ ಮತ್ತು ಭಾಮೈದ ಚೆನ್ನಾಗಿ ಬಾಳಬೇಕು ಅಂತಾ ಅನ್ನೋದು ಅಣ್ಣನ ಆಸೆ ಅಲ್ವಾ? ನನ್ನ ಮಾತು ನಡೆಸಿಕೊಡ್ತೀಯ ಅಲ್ವಾ ಎಂದು ಹೇಳುತ್ತಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

